ಕೊಹ್ಲಿ ಅತಿರೇಕದ ವರ್ತನೆ ಬಗ್ಗೆ ಬಾಯ್ಬಿಟ್ಟ ಕೇನ್ ವಿಲಿಯಮ್ಸನ್

ಕ್ರೈಸ್ಟ್‌ಚರ್ಚ್: ಟೂರ್ನಿ ಆರಂಭಕ್ಕೂ ಮುನ್ನ ಎದುರಾಳಿ ತಂಡದ ಬಗ್ಗೆ ಗುಣಗಾನ ಮಾಡಿದ ಬಳಿಕ ಅಂತಿಮ ಟೆಸ್ಟ್ ವೇಳೆಯಲ್ಲಿ ನಾಯಕ ವಿಕೆಟ್ ಪಡೆದಾಗ ಮಿತಿ ಮೀರಿ ಸಂಭ್ರಮಿಸಿ ಅತಿರೇಕವಾಗಿ ವರ್ತಿಸಿರುವ ಟೀಮ್ ಇಂಡಿಯಾ ನಾಯಕ ಭಾರಿ ಟೀಕೆಗೊಳಗಾಗಿದ್ದಾರೆ. ಈ ಬಗ್ಗೆ ಸ್ವತ: ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಪ್ರತಿಕ್ರಿಯೆ ನೀಡಿದ್ದಾರೆ. ಸರಣಿ ಗೆಲುವಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇನ್, ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ನಗುಮುಖದಿಂದಲೇ ಉತ್ತರಿಸಿದ್ದಾರೆ. "ಮೈದಾನದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಉತ್ಸಾಹಿಯಾಗಿರುತ್ತಾರೆ. ಹಾಗಾಗಿ ಈ ವಿಚಾರಗಳನ್ನು ಹೆಚ್ಚು ಗ್ರಿಹಿಸುವ ಅಗತ್ಯವಿದೆಯೆಂದು ನಾನು ಭಾವಿಸುವುದಿಲ್ಲ" ಎಂದು ವಿಲಿಯಮ್ಸನ್ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ಒಳ್ಳೆಯತನವನ್ನು ಮೆರೆದಿದ್ದಾರೆ. ಈ ಮೊದಲು ಏಕದಿನ ಸರಣಿ ವೇಳೆಯಲ್ಲಿ ಮೈದಾನದ ಗೆರೆಯ ಬಳಿ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಜೊತೆಯಾಗಿ ಕುಳಿತುಕೊಂಡು ಚರ್ಚಿಸುವ ಚಿತ್ರಗಳು ವೈರಲ್ ಆಗಿದ್ದವು. ತದಾ ಬಳಿಕ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ ಕ್ರಿಕೆಟ್ ಬಗ್ಗೆ ನಾವಿಬ್ಬರು ಸಮಾನ ಮನೋಸ್ಥಿತಿಯನ್ನು ಹೊಂದಿದ್ದೇವೆ ಎಂದಿದ್ದರು. ಅಲ್ಲದೆ ಕಿವೀಸ್ ಆಟಗಾರರ ಬಗ್ಗೆ ಅತೀವ ಗೌರವವಿದೆ ಎಂದು ತಿಳಿಸಿದ್ದರು. ಆದರೆ ಏಕಾಏಕಿ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅತಿರೇಕವಾಗಿ ವರ್ತಿಸಿದ್ದರು. ಈ ಬಗ್ಗೆ ಭಾರಿ ಆಕ್ರೋಶಗಳು ಕೇಳಿಬಂದಿದ್ದವು. ಟಾಮ್ ಲೇಥಮ್ ಔಟ್ ಆದಾಗಲೂ ಅಸಭ್ಯ ಹೇಳಿಕೆಗಳನ್ನು ನೀಡಿದ ವಿರಾಟ್ ಕೊಹ್ಲಿ, ಪ್ರೇಕ್ಷಕರತ್ತ ಬಾಯಿ ಮುಚ್ಚುವಂತೆ ಸನ್ನೆ ಮಾಡಿದ್ದರು. ಏತನ್ಮಧ್ಯೆ ಭಾರತದಂತಹ ವಿಶ್ವದರ್ಜೆಯ ತಂಡವನ್ನು ಮಣಿಸಲು ಸಾಧ್ಯವಾಗಿರುವುದು ಅತೀವ ಸಂತಸ ತಂದಿದೆ ಎಂದು ಕೇನ್ ವಿಲಿಯಮ್ಸನ್ ಅಭಿಪ್ರಾಯಪಟ್ಟರು. ಅದ್ಭುತ ಅನುಭವ. ಅಂತಿಮ ಫಲಿತಾಂಶವು ಪಂದ್ಯ ಎಷ್ಟು ಬಿಗಿಯಾಗಿತ್ತು ಎಂದು ತೋರಿಸುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2VBf9MJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...