ಬೆಂಗಳೂರು: ರಾಜ್ಯ ಹಲವು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಉತ್ತಮ ಸುರಿದಿದೆ. ಇದು ಬೇಸಿಗೆಯ ಧಗೆಗೆ ತಂಪಿನ ಸಾಂತ್ವನ ನೀಡಿದ್ದು ನಿಜವಾದರೂ ಕೆಲವೊಂದು ಕೃಷಿ ಬೆಳೆಗಳಿಗೆ ಕಂಟಕವಾಗಿ ಕಾಡಿದೆ. ಶ್ರೀರಂಗಪಟ್ಟಣದಲ್ಲಿನದಿ ನೀರಿನ ಸೆಳೆತಕ್ಕೆ ಒಳಗಾಗಿ ಯುವಕ ಕೊಚ್ಚಿಹೋಗಿದ್ದಾರೆ. ಪ್ರಮಖವಾಗಿ ಕರಾವಳಿ, ಮಲೆನಾಡು, ಬಾಗಲಕೋಟೆ, ರಾಯಚೂರು, ವಿಜಯಪುರ, ದಾವಣಗೆರೆ, ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿಸಾಕಷ್ಟು ಮಳೆ ಸುರಿದಿದೆ. ಇನ್ನೂ ಮೂರು ದಿನ ಮಳೆ ಸಾಧ್ಯತೆ ಇದೆ ಎಂದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು. ಎಲ್ಲೆಲ್ಲಿಗರಿಷ್ಠ ಮಳೆ?ಮಲವಂತಿಗೆ (ದ.ಕ)ಯಲ್ಲಿ43 ಮಿ.ಮೀ, ಶ್ರೀರಂಗಪಟ್ಟಣದಲ್ಲಿ40 ಮಿ.ಮೀ., ಹಾಸನದ ಕುಂದೂರಿನಲ್ಲಿ31, ಕೆ.ಆರ್. ಪೇಟೆ 30, ನಾವೂರಿನಲ್ಲಿ28, ಚಾಮರಾಜನಗರದ ದೊಡ್ಡಮೋಳೆಯಲ್ಲಿ27, ಸೋಮವಾರ ಪೇಟೆ, ಮೈಸೂರು, ಮಂಡ್ಯದ ಮೈಗಾನ ಹಳ್ಳಿಯಲ್ಲಿ23 ಸೆಂ.ಮೀ. ಮಳೆಯಾಗಿದೆ. ಇನ್ನೂ 3 ದಿನ ಮಳೆ ಸಾಧ್ಯತೆಇನ್ನೂ ಮೂರು ದಿನಗಳವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಮಳೆಗೆ ಏನು ಕಾರಣ?- ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದ ಹಾಗೂ ಮಧ್ಯಪ್ರದೇಶದಿಂದ ಕರ್ನಾಟಕವರೆಗೆ ಟ್ರಫ್ ಇರುವುದರಿಂದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ. - ಬೇಸಿಗೆಯ ಆರಂಭದಲ್ಲೇ ರಾಜ್ಯದಲ್ಲಿಗರಿಷ್ಠ ತಾಪಮಾನ 35 ಡಿಗ್ರಿಗೆ ತಲುಪಿದೆ (ಕಲಬುರಗಿ). ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಒಂದೇ ಬಾರಿಗೆ ಏರಿಕೆಯಾಗಿದ್ದು ಕೂಡ ಕಾರಣ. ಬೆಳೆಗಳಿಗೆ ಹಾನಿ
- ವಿಜಯಪುರದಲ್ಲಿ ಕಟಾವಿಗೆ ಬಂದ ದ್ರಾಕ್ಷಿ ಬೆಳೆ ನಾಶ.
- ಹಲವು ಜಿಲ್ಲೆಗಳಲ್ಲಿ ಭತ್ತದ ನಾಟಿ ನೀರು ಪಾಲು
- ರಾಯಚೂರಿನಲ್ಲಿ ಒಣಗಲು ಹಾಕಿದ್ದ ಮೆಣಸು ನಷ್ಟ
- ಇನ್ನಷ್ಟು ದಿನ ಮಳೆ ಬಂದರಷ್ಟೇ ಕಾಫಿಗೆ ಲಾಭ
from India & World News in Kannada | VK Polls https://ift.tt/2VFZTOK