ಬಂಗಾರಪ್ಪನ ಮಗ ನಾನು, ಹಾಗೇ ಹೋಗಲ್ಲ! ಜೆಡಿಎಸ್‌ ತೊರೆಯುವ ಸೂಚನೆ ನೀಡಿದ ಮಧು ಬಂಗಾರಪ್ಪ!!!

ಬೆಂಗಳೂರು: ನಾಯಕತ್ವದ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಮಾಜಿ ಶಾಸಕ ''ನಾನು ನಿಷ್ಕ್ರಿಯ ಪಕ್ಷದ (ಇನ್‌ಆಕ್ಟಿವ್‌ ಪಾರ್ಟಿ) ನಿಷ್ಕ್ರಿಯ ಕಾರ್ಯಾಧ್ಯಕ್ಷ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹುಟ್ಟಹಬ್ಬ ಹಿನ್ನೆಲೆಯಲ್ಲಿತಮ್ಮ ನಿವಾಸದಲ್ಲಿಸುದ್ದಿಗಾರರ ಜತೆ ಮಾತನಾಡಿ,''ಜೆಡಿಎಸ್‌ನಲ್ಲಿ ವ್ಯವಸ್ಥೆ ಸರಿ ಇಲ್ಲ. ಮೈತ್ರಿ ಸರಕಾರ ಅವಧಿಯಲ್ಲಿ ಕೆಲವರ ವರ್ತನೆಯಿಂದ ಪಕ್ಷ ಕಾರ್ಯಕರ್ತರ ವಿಶ್ವಾಸವನ್ನೇ ಕಳೆದುಕೊಂಡಿದೆ. ಇದಕ್ಕೆ ಯಾರು ಕಾರಣ ಎಂಬುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ. ರಮೇಶ್‌ ಗೌಡ, ಧರ್ಮೇಗೌಡ, ಫಾರೂಕ್‌ ಅಂಥವರಿಗೆಲ್ಲಎಂಎಲ್‌ಸಿ ಸ್ಥಾನ ನೀಡುವ ಅಗತ್ಯವಿರಲಿಲ್ಲ. ಯೋಗ್ಯತೆ ಇಲ್ಲದ ರಮೇಶ್‌ಗೌಡಗೆ ಎಂಎಲ್‌ಸಿ ಸ್ಥಾನ ನೀಡಿದ ನಿರ್ಧಾರ ಯಾರದು?,'' ಎಂದು ಕೇಳುವ ಮೂಲಕ ಪಕ್ಷದ ನಾಯಕರಿಗೆ ನೇರವಾಗಿ ಸವಾಲು ಹಾಕಿದ್ದಾರೆ. ''ನಾನು ಬಂಗಾರಪ್ಪನವರ ಮಗ. ಪಕ್ಷ ಬಿಡುವುದಿದ್ದರೆ ಹೇಳಿಯೇ ಹೋಗುತ್ತೇನೆ. ಯಾವುದೇ ಕಾರಣಕ್ಕೂ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಬೇಕಾದರೆ ಅವರಾಗಿಯೇ ಕೇಳಲಿ, ಇಲ್ಲ ತೆಗೆದು ಹಾಕಲಿ,'' ಎಂದು ಪಕ್ಷಕ್ಕೆ ಗುಡ್‌ಬೈ ಹೇಳುವ ಸೂಚನೆ ನೀಡಿದ್ದಾರೆ. ''ಧರ್ಮೇಗೌಡ, ಫಾರೂಕ್‌ ಅಂಥವರು ಪಕ್ಷ ಕಟ್ಟಿದವರಲ್ಲ. ಹಿಂದೆ ಕುಮಾರಸ್ವಾಮಿಯವರ ಅಕ್ಕಪಕ್ಕ ಎಂ.ಪಿ.ಪ್ರಕಾಶ್‌, ಸಿಂಧ್ಯಾ, ಹೊರಟ್ಟಿ, ಎಚ್‌.ವಿಶ್ವನಾಥ್‌ರಂಥ ನಾಯಕರು ಇರುತ್ತಿದ್ದರು. ಕ್ರಿಮಿನಲ್‌ ಹಿನ್ನೆಲೆ ಇರುವ ರಮೇಶ್‌ ಗೌಡಗೆ ವಿಧಾನ ಪರಿಷತ್‌ ಸ್ಥಾನ ನೀಡಿದ್ದು ನಿಜಕ್ಕೂ ಬೇಸರದ ಸಂಗತಿ. ಮೈತ್ರಿ ಸರಕಾರದ ಅವಧಿಯಲ್ಲಿ ಕೆಲವರು ತಪ್ಪಾಗಿ ನಡೆದುಕೊಂಡಿದ್ದಾರೆ. ಅವರು ಯಾರೆಂಬುದನ್ನು ಮುಂದೆ ಹೇಳುತ್ತೇನೆ,'' ಎಂದರು. ''ಎಚ್‌.ವಿಶ್ವನಾಥ್‌ ಜೆಡಿಎಸ್‌ ಬಿಡುವ ಹಿಂದಿನ ದಿನ ನಾನು ಅವರ ಜತೆಯೇ ಇದ್ದೆ. ಅವರ ಮನವೊಲಿಸುವ ಪ್ರಯತ್ನ ಮಾಡಿದೆ. ವಿಶ್ವನಾಥ್‌ ಹಾಗೂ ಕುಮಾರಸ್ವಾಮಿ ಮಧ್ಯೆ ಕೆಲವರು ತಂದಿಡುವ ಪ್ರಯತ್ನ ನಡೆಸಿದರು. ನಾಯಕರನ್ನು ಸೃಷ್ಟಿ ಮಾಡುವ ಜೆಡಿಎಸ್‌, ಈ ರೀತಿ ನಾಯಕರನ್ನು ಕಳೆದುಕೊಳ್ಳುತ್ತಾ ಹೋದರೆ ಪಕ್ಷ ಉಳಿಯುತ್ತದೆಯೇ,'' ಎಂದು ಪ್ರಶ್ನಿಸಿದರು.


from India & World News in Kannada | VK Polls https://ift.tt/2VFilGY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...