ಹತ್ಯಾಚಾರಿ ಪವನ್ ಗುಪ್ತಾ ಅರ್ಜಿ ವಜಾ: ನಾಳೆ ಜಾರಿಯಾಗಲಿದೆಯೇ ಸಜಾ?

ನವದೆಹಲಿ: ಗಲ್ಲುಶಿಕ್ಷೆಯಿಂದ ಪಾರಾಗಲು ಸತತ ಪ್ರಯತ್ನ ನಡೆಸಿರುವ ನಿರ್ಭಯಾ ಹತ್ಯಾಚಾರಿಗಳು, ಗಲ್ಲು ಮುಂದೂಡಲು ಮಾಡುತ್ತಿರುವ ಪ್ರಯತ್ನಗಳು ಒಂದೆರಡಲ್ಲ. ಒಬ್ಬರಾದ ಮೇಲೊಬ್ಬರು ತಮ್ಮ ಕಾನೂನು ಅವಕಾಶಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಪರಾಧಿಗಳು, ತಮ್ಮ ವಕೀಲಕರ ಸಹಾಯದಿಂದ ನ್ಯಾಯಾಲಯವನ್ನೇ ಯಾಮಾರಿಸುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಆದರೆ ನಿರ್ಭಯಾ ಹಂತಕರ ಈ ಆಟಕ್ಕೆ ಕಾನೂನು ಚೌಕಟ್ಟಿನ ಅಡಿಯಲ್ಲೇ ಬ್ರೇಕ್ ಹಾಕುತ್ತಿರುವ ನ್ಯಾಯಾಲಯ, ಹತ್ಯಾಚಾರಿಗಳು ಸಲ್ಲಿಸುವ ಅರ್ಜಿಗಳನ್ನು ಒಂದಾದ ಮೇಲೊಂದರಂತೆ ತಿರಸ್ಕರಿಸುತ್ತಿದೆ. ಅದರಂತೆ ಗಲ್ಲುಶಿಕ್ಷೆಗೆ ತಡೆ ಕೋರಿ ನಿರ್ಭಯಾ ಹಂತಕರ ಪೈಕಿ ಓರ್ವನಾದ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿದೆ. ಈ ಮೂಲಕ ಪವನ್ ಗುಪ್ತಾಗಿದ್ದ ಕೊನೆಯ ಕಾನೂನು ಅವಕಾಶಕ್ಕೆ ತೀಲಾಂಜಲಿ ನೀಡಲಾಗಿದೆ. ಸುಪ್ರೀಂಕೋರ್ಟ್'ನಲ್ಲಿ ತಿರಸ್ಕೃತಗೊಂಡಿರುವುದರಿಂದ ಪವನ್ ಗುಪ್ತಾ ಮುಂದೆ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಉಳಿದ ಮೂವರು ಹತ್ಯಾಚಾರಿಗಳ ಕ್ಷಮಾದಾನ ಅರ್ಜಿ ತಿರಸ್ಕರಿಸಿರುವ ರಾಷ್ಟ್ರಪತಿ ರಾಮನಾತ್ ಕೋವಿಂದ್, ತಮಗಿರುವ ಕಾನೂನು ಅವಕಾಶಗಳ ಅಡಿಯಲ್ಲಿ ಈ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಸಿಗುವಂತೆ ಪ್ರಯತ್ನಿಸಿದ್ದಾರೆ. ಇನ್ನು ಡೆತ್ ವಾರೆಂಟ್ ಪ್ರಕಾರ ನಾಳೆ(ಮಾರ್ಚ್ ೩) ಬೆಳಗ್ಗೆ ೬ ಗಂಟೆಗೆ ನಾಲ್ವರೂ ಹತ್ಯಾಚಾರಿಗಳನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಬೇಕಿದ್ದು, ಒಂದು ವೇಳೆ ಪವನ್ ಗುಪ್ತಾ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದರೆ ಗಲ್ಲುಶಿಕ್ಷೆ ಮತ್ತೆ ಮುಂದೂಡಲ್ಪಡುವ ಸಾಧ್ಯತೆ ಇದೆ. ರಾಷ್ಟ್ರಪತಿಗಳು ತಮ್ಮ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮುಕೇಶ್ ಕುಮಾರ್ ಹಾಗೂ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.


from India & World News in Kannada | VK Polls https://ift.tt/32FlLLu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...