- ಎಸ್.ಎನ್.ಮಂಜುನಾಥ್, ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 50 ಮೀ. ಉದ್ದ, 20 ಮೀ. ಅಗಲದ ವಿಸ್ತೀರ್ಣದಲ್ಲಿರುವ ಈಜುಕೊಳ 8 ಸಾಲುಗಳ ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿದ್ದು, ಸುಮಾರು 1.80 ಕೋಟಿ ವೆಚ್ಚದಲ್ಲಿನಿರ್ಮಾಣಗೊಂಡಿದೆ. ಒಂದು ತಾಸು ಈಜಾಟಕ್ಕೆ 30 ರೂ.: ಇಂದಿನಿಂದ ಪುನರಾರಂಭವಾಗಿರುವ ಈಜುಕೊಳದ ಪ್ರವೇಶಕ್ಕೆ 30 ರೂ ನಿಗದಿಗೊಳಿಸಲಾಗಿದೆ. ಬೆಳಗ್ಗೆ 8ರಿಂದ ಸಂಜೆ 6ವರೆಗಿನ ಸಮಯ ಕಾಯ್ದಿರಿಸಲಾಗಿದೆ. ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪುರುಷರು ಹಾಗೂ ಮಕ್ಕಳಿಗೆ ಪ್ರವೇಶವಾದರೆ, ಸಂಜೆ 5ರಿಂದ 6ರವರೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೇಸಗೆಯಲ್ಲಿ ಮಾತ್ರ ಆದಾಯ: ಕೇವಲ ಬೇಸಗೆ ದಿನಗಳಲ್ಲಿ ಮಾತ್ರ ಈಜುಕೊಳದಿಂದ ಆದಾಯ ಎಂಬಂತಾಗಿದ್ದು, ಉಳಿದ ದಿನಗಳಲ್ಲಿ ಈಜುಕೊಳಕ್ಕೆ ಬರುವವರ ಸಂಖ್ಯೆ ಕಡಿಮೆ ಇದೆ. ತಿಂಗಳಿಗೆ ನಾಲ್ಕೈದು ಸಾವಿರ ಆದಾಯ ಬಂದರೆ ಹೆಚ್ಚು ಎನ್ನುವಂತಿದೆ. ಆದ್ದರಿಂದ ನಿರ್ವಹಣೆಯದ್ದೇ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿತ್ತು. ಬೇಸಗೆ ದಿನಗಳು ಆರಂಭವಾಗಿರುವ ಕಾರಣ ಈಜುಕೊಳದತ್ತ ಮುಖ ಮಾಡುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿ ಆದಾಯ ಕೂಡ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಕಳೆದ ವರ್ಷದ ಬೇಸಗೆಯ ದಿನಗಳಲ್ಲಿ ನಿತ್ಯ ಸುಮಾರು 250 ರಿಂದ 500 ಜನರು ಈಜುಕೊಳಕ್ಕೆ ಬರುತ್ತಿದ್ದರು. ಈ ವರ್ಷ ಕೂಡ ಹೆಚ್ಚು ಜನರು ಬರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ನಿರ್ವಹಣೆ ಇಲ್ಲದೆ ಸ್ಥಗಿತವಾಗಿತ್ತುಈಜುಕೊಳ ನಿರ್ಮಾಣವಾದಗಿನಿಂದ ಇಲ್ಲಿಯವರೆಗೂ ಸೂಕ್ತ ನಿರ್ವಹಣೆ ಇಲ್ಲದ ಕಾರಣದಿಂದ ಮೂರ್ನಾಲ್ಕು ಬಾರಿ ಸ್ಥಗಿತಗೊಂಡಿತ್ತು. ಈಜುಕೊಳದ ನಿರ್ವಹಣೆಯನ್ನು ಗುತ್ತಿಗೆ ಪಡೆದವರು ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ನಿರ್ವಹಣೆ ಬಗ್ಗೆ ಗಮನಹರಿಸದೇ ಇದದ್ದು, ಆದಾಯ ಇಲ್ಲದ ಗುತ್ತಿಗೆ ಪಡೆಯಲು ಯಾರೂ ಮುಂದಾಗದ ಕಾರಣದಿಂದಾಗಿ ವರ್ಷಾನುಗಟ್ಟಲೇ ಸ್ಥಗಿತಗೊಂಡಿದ್ದ ಈಜುಕೊಳ ಪ್ರಸ್ತುತ ಆರಂಭವಾಗಿದೆ. ಆದರೇ ಯಾವುದೇ ತೊಂದರೆ ಇಲ್ಲದೆ, ನಿರ್ವಹಣೆಯ ಸಮಸ್ಯೆ ಎದುರಾಗದೆ ಈಜುಕೊಳ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ತರಬೇತಿಈಜು ಸಮವಸ್ತ್ರ ಧರಿಸಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು. ಈಜುಕೊಳದ ಸಂಪೂರ್ಣ ಸ್ವಚ್ಛತೆ ಕಾರ್ಯದಿಂದಾಗಿ ಸೋಮವಾರ ರಜೆ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ ಸ್ಥಳೀಯ ಕ್ರೀಡಾಪಟುಗಳು ಈಜುಕೊಳದ ಪ್ರಯೋಜನ ಪಡೆದುಕೊಳ್ಳಬೇಕು. ಏಪ್ರಿಲ್ ತಿಂಗಳಲ್ಲಿ ಈಜು ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷದ ಬೇಸಿಗೆಯ ದಿನಗಳಲ್ಲಿನಿತ್ಯ ಸುಮಾರು 250 ರಿಂದ 500 ಜನರು ಈಜುಕೊಳಕ್ಕೆ ಬರುತ್ತಿದ್ದರು. ಈ ವರ್ಷ ಕೂಡ ಹೆಚ್ಚು ಜನರು ಬರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಈಜುಕೊಳದಲ್ಲಿ ಒಂದು ಬಾರಿಗೆ 100 ಜನರು ಈಜಾಟ ನಡೆಸಬಹುದಾಗಿದೆ. ಮಕ್ಕಳಿಗೆ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಪರಿಕರಗಳನ್ನು ಒದಗಿಸಲಾಗುತ್ತದೆ ಹಾಗೂ ಸುರಕ್ಷತೆಗಾಗಿ 8 ಮಂದಿ ಲೈಫ್ಗಾರ್ಡ್ಗಳು ಇದ್ದಾರೆ. ರಾಸಾಯನಿಕ ಬಳಸಿ ಕೊಳದ ನೀರನ್ನು ನಿತ್ಯ ಶುದ್ಧೀಕರಿಸಲಾಗುತ್ತದೆ. - ಬಾಲರಾಜು, ಈಜು ಕೊಳದ ನಿರ್ವಾಹಕರು, ಚಿಕ್ಕಬಳ್ಳಾಪುರ
from India & World News in Kannada | VK Polls https://ift.tt/2VCX4hi