ದೊಡ್ಡಬಳ್ಳಾಪುರದ ತೂಬಗೆರೆ ಹಲಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!

- ನಾಗರಾಜು ಎ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಲಸಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ತೂಬಗೆರೆಯ ಶಿವರಾತ್ರಿ ಹಲಸು, ಚಂದ್ರ ಹಲಸು, ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ ಹಾಟ್‌ಫೇವರೇಟ್‌ ಆಗಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಿನ ಹಲಸು ರಫ್ತು ಮಾಡಲಾಗುತ್ತಿದೆ. ಪ್ರಸ್ತುತ, 80ರಿಂದ 100ಟನ್‌ ಹಲಸು ರಫ್ತು ಮಾಡಲಾಗುತ್ತಿದ್ದು, ಈ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ. ಉಡುಪಿ, ಮಂಗಳೂರಿಗರಿಗೆ ಹಾಟ್‌ಫೇವರೆಟ್‌: ರಾಜ್ಯದ ಕರಾವಳಿ ಭಾಗದಲ್ಲಿ ಹಲಸಿನ ನಾನಾ ಬಗೆಯ ತಿಂಡಿ, ಸಿಹಿ ತಿನಿಸುಗಳನ್ನು ತಯಾರು ಮಾಡುತ್ತಾರೆ. ಈ ಹಿನ್ನೆಲೆ ಅಲ್ಲಿನ ಹಲಸುಮೇಳದಲ್ಲಿ ದೊಡ್ಡಬಳ್ಳಾಪುರದ ತೂಬಗೆರೆಯ ಬಗೆಬಗೆಯ ಹಲಸಿಗೆ ಪ್ರತಿಬಾರಿಯು ಉತ್ತಮ ಬೇಡಿಕೆ ಸೃಷ್ಟಿಯಾಗುತ್ತದೆ. ಮಂಗಳೂರಿನ ಸಿಹಿ ತಯಾರಿಕಾ ಕಂಪನಿಯೊಂದೆ ದೊಡ್ಡಬಳ್ಳಾಪುರದಿಂದ 80ರಿಂದ 100ಟನ್‌ ಹಲಸನ್ನು ಖರೀದಿ ಮಾಡಿಕೊಳ್ಳುತ್ತದೆ. ಇದನ್ನು ಹೊರತುಪಡಿಸಿ, ಅಲ್ಲಿ ನಡೆವ ಹಲಸುಮೇಳಗಳಲ್ಲಿ ಜನ ತೂಬಗೆರೆಯ ಹಲಸಿಗೆ ಮುಗಿಬಿದ್ದು ಖರೀದಿಸುತ್ತಾರೆ. ಕರಾವಳಿ ಭಾಗದಲ್ಲಿ ಹಲಸಿಂದ ಹಲಸಿನ ಹಣ್ಣಿನ ಮಾಂಬಳ, ಕಾಯಿ ಮತ್ತು ಹಣ್ಣಿನ ಹಪ್ಪಳ, ಪೇಡಾ, ಹಲ್ವಾ, ಕಡುಬು, ಮುಳ್ಕ, ಹಲಸಿನ ಸೊಳೆಯ ಪೋಡಿ, ಹಲಸಿನ ಹಣ್ಣಿನ ಕ್ಷೀರ, ಕೇಕ್‌, ಹಲಸಿನ ಬೀಜದ ಚಟ್ಟಂಬಡೆ, ಮತ್ತು ಕಾಯಿಯ ಸಿಹಿ/ಖಾರ ಬೋಂಡ, ಹಲಸಿನ ಹಣ್ಣಿನ ಜ್ಯೂಸ್‌ ಹೀಗೆ ವಿವಿಧ ರೀತಿಯಾದ ತಿನಿಸುಗಳನ್ನು ತಯಾರಿಸುವ ಹಿನ್ನೆಲೆ ಉತ್ತಮ ಡಿಮ್ಯಾಂಡ್‌ ಸೃಷ್ಟಿಯಾಗಿದೆ ಎನ್ನುತ್ತಿದ್ದಾರೆ ಹಲಸು ಬೆಳೆಗಾರರು. ಯಾವ್ಯಾವ ವಿಧ?ಶಿವರಾತ್ರಿ ಹಲಸು, ಚಂದ್ರ ಹಲಸು, ಕೆಂಪು ರುದ್ರಾಕ್ಷಿ ಹಲಸು, ಹಳದಿ ರುದ್ರಾಕ್ಷಿ ಹಲಸು, ಬಿತ್ತನೆ ಏಕಾದಶಿ ಹಲಸು ಆರೋಗ್ಯಕ್ಕೆ ಹಲಸು ಶ್ರೀರಕ್ಷೆ
  • ವಿಟಮಿನ್‌ಸಿ ಒದಗಿಸಿ, ರೋಗನಿರೋಧಕ ಶಕ್ತಿ ಹೆಚ್ಚಳ
  • ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ
  • ಹಲಸಿನ ಬೀಜದಲ್ಲಿನ ಪ್ರೋಟಿನ್‌, ವಿಟಮಿನ್‌ ಬಿ ಕ್ಯಾನ್ಸರ್‌ ತಡೆ
  • ಮೂಳೆಗಳ ಆರೋಗ್ಯ ಹೆಚ್ಚಿಸುತ್ತದೆ
  • ನರವ್ಯೂಹಕ್ಕೆ ಸಹಕಾರಿ
  • ಡಯಾಬಿಟೀಸ್‌ ಕಾಯಿಲೆಗಳನ್ನು ಮದ್ದು
  • ಹೊಟ್ಟೆಯ ಹುಣ್ಣಿನ ಸಮಸ್ಯೆ ಪರಿಹರ
  • ಚರ್ಮದ ಕಪ್ಪು ಕಲೆಗಳನ್ನು ಹೊಡೆದೋಡಿಸುತ್ತದೆ
  • ಶೀತ ಮತ್ತು ಸೋಂಕು ತಡೆಯಲು ನೆರವು
  • ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣ
  • ಹೃದಯದ ಸಮಸ್ಯೆಯ ರಿಸ್ಕ್‌ಗಳನ್ನು ಕಡಿಮೆ ಮಾಡುತ್ತೆ
  • ಕಣ್ಣುಗಳಿಗೆ ಆರೋಗ್ಯಕ್ಕೆ ಉಪಯುಕ್ತ
ಆರ್ಥಿಕ ಲಾಭದತ್ತ ಬೆಳೆಗಾರರು! ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಳೆಗಾರರಿಗೆ ಎದುರಾಗುವ ಮಧ್ಯವರ್ತಿಗಳ ಕಾಟದಿಂದ ಮುಕ್ತವಾಗಲು 2008ರಲ್ಲಿ ತೂಬಗೆರೆ ಹಲಸು ಬೆಳೆಗಾರರು ಪ್ರತ್ಯೇಕ ಸಂಘ ರೂಪಿಸಿಕೊಂಡರು. ಆರಂಭದಲ್ಲಿ ಕೇವಲ 4 ಲಕ್ಷ ವಾರ್ಷಿಕ ವಹಿವಾಟು ಹೊಂದಿದ್ದ, ಸಂಘ ಸದ್ಯ ಲಾಭದತ್ತ ಮುಖಮಾಡಿದೆ. ತೂಬಗೆರೆಯಲ್ಲಿ ಪ್ರಸ್ತುತ 110ಟನ್‌ ಹಲಸು ಬೆಳೆಯಲಾಗುತ್ತಿದ್ದು, ವಾರ್ಷಿಕ ವಹಿವಾಟು 28 ಲಕ್ಷದಿಂದ 32 ಲಕ್ಷ ಮುಟ್ಟಿರುವುದು ವಿಶೇಷ. ಸಂಘದಲ್ಲಿ 160ಜನ ಬೆಳೆಗಾರರಿದ್ದು, ರಾಜ್ಯದ ಉಡುಪಿ, ಮಂಗಳೂರು, ಮೈಸೂರು, ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯುವ ಹಲಸು ಮೇಳಗಳಲ್ಲಿ ಭಾಗವಹಿಸಿ, ಲಾಭ ಪಡೆಯುತ್ತಿದ್ದಾರೆ. ಕಳೆದ ವರ್ಷದಲ್ಲಿ ಉತ್ತಮ ಮಳೆ ಹಿನ್ನೆಲೆ ಪ್ರತಿಬಾರಿಗಿಂತಲು ಈ ಬಾರಿ ಹೆಚ್ಚು ಪ್ರಮಾಣದ ಹಲಸು ಬೆಳೆ ಕೈಸೇರಲಿದೆ. ಮಂಗಳೂರು, ಉಡುಪಿ, ಲಾಲ್‌ಬಾಗ್‌ ಮೇಳಗಳಲ್ಲಿ ತೂಬಗೆರೆಯ ಹಲಸು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದೆ. - ರವಿಕುಮಾರ್‌, ಹಲಸು ಬೆಳೆಗಾರ


from India & World News in Kannada | VK Polls https://ift.tt/2wsPStp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...