ಮೈಸೂರು-ಬೆಂಗಳೂರು ನಡುವೆ ಇ-ಹೈವೇ, ಭವಿಷ್ಯದ ಕ್ರಾಂತಿಕಾರಕ ಯೋಜನೆಯಿದು!

- ಐತಿಚಂಡ ರಮೇಶ್‌ ಉತ್ತಪ್ಪ ಭವಿಷ್ಯದ ಕ್ರಾಂತಿಕಾರಕ ಸಂಪರ್ಕ ವ್ಯವಸ್ಥೆ ಎಂದೇ ಪರಿಗಣಿಸಲ್ಪಟ್ಟಿರುವ ಇಲೆಕ್ಟ್ರಾನಿಕ್‌ ಹೆದ್ದಾರಿ (ಇ-ಹೈವೆ) ಯೋಜನೆಯನ್ನು ಮೈಸೂರು-ಬೆಂಗಳೂರು ನಡುವೆ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇ-ಹೈವೆ ಎನ್ನುವುದು ಹೊಸ ಪರಿಕಲ್ಪನೆಯಾಗಿದ್ದು, ಸುಗಮ ಸಂಚಾರದ ಹೆದ್ದಾರಿಯಾಗಲಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಆವಿಷ್ಕಾರ ಹಾಗೂ ತಂತ್ರಜ್ಞಾನ ಪರಿಣಾಮಕಾರಿಯಾದ ಬದಲಾವಣೆ ಮಾಡುತ್ತಿದೆ. ಇದೀಗ ಈ ತಂತ್ರಜ್ಞಾನ ಸಂಪರ್ಕ ಕ್ಷೇತ್ರಕ್ಕೂ ಕಾಲಿರಿಸಿದೆ. ಈಗಾಗಲೇ ವಿದೇಶದಲ್ಲಿ ಸಂಚಲನ ಮೂಡಿಸಿರುವ ಇಲೆಕ್ಟ್ರಿಕ್‌ ಹೈವೇ ಯೋಜನೆ ಭಾರತಕ್ಕೂ ಕಾಲಿಟ್ಟಿದೆ. ಭವಿಷ್ಯದಲ್ಲಿ ಇದರ ವಿಸ್ತರಣೆಯಾಗಿ ಹಾಗೂ ದೇಶದ ಎರಡನೇ ಮಹಾಯೋಜನೆಯಾಗಿ ಮೈಸೂರು-ಬೆಂಗಳೂರು ರಸ್ತೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸಂಸದ ಪ್ರತಾಪ್‌ ಸಿಂಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಏನಿದು ಇ-ಹೈವೆ: ಇದು ಸಂಪರ್ಕ ವ್ಯವಸ್ಥೆಯಲ್ಲಿನ ಹೊಸ ಪ್ರಯತ್ನ. ಈಗಾಗಲೇ ಜರ್ಮನಿ, ಅಮೆರಿಕಾ, ಸ್ವೀಡನ್‌ ದೇಶಗಳಲ್ಲಿಪ್ರಯೋಗ ಯಶಸ್ವಿಯಾಗಿದೆ. ಇದು ಆಧುನಿಕ ಯುಗದ ಸಂಪರ್ಕ ಕ್ರಾಂತಿ ಎಂದೆ ಬಣ್ಣಿಸಲಾಗಿದೆ. ಇದರಿಂದ ಸಾಂಪ್ರದಾಯಿಕ ತೈಲ ಬಳಕೆಯ ವಾಹನಗಳು ಮೂಲೆ ಗುಂಪಾಗಲಿದ್ದು, ಇ-ವಾಹನಗಳ ವೈಭವ ಹೆಚ್ಚಾಗಲಿದೆ. ಇ-ಹೈವೇ ಎಂದರೆ ನಿಗದಿತ ಪಥದಲ್ಲಿಹೈವೇಗಳ ಮೇಲ್ಭಾಗದಲ್ಲಿವಿದ್ಯುತ್‌ ಸಂಪರ್ಕದೊಂದಿಗೆ ವಾಹನಗಳು ಚಲಿಸುವುದು. ಇ-ವಾಹನಗಳ ಯುಗಕ್ಕೆ ಜಗತ್ತು ತೆರೆದುಕೊಳ್ಳುವುದರಿಂದ ಇದಕ್ಕೆ ಪೂರಕವಾಗಿ ಇ-ಹೆದ್ದಾರಿಯೂ ರಚನೆಯಾಗಲಿದೆ. ಬ್ಯಾಟರಿ ಚಾಲಿತ ವಾಹನಗಳು ಎಷ್ಟೇ ಆವಿಷ್ಕಾರ ಮಾಡಿದ್ದರೂ ರೀಚಾರ್ಜ್‌ ಆಗದೆ ಬಹುದೂರ ಚಲಿಸುವುದಿಲ್ಲ. ಮಾರ್ಗ ಮಧ್ಯೆ ಹಲವು ಬಾರಿ ರೀಚಾರ್ಜ್‌ ಮಾಡಿಸಿಕೊಳ್ಳಬೇಕು. ಇದರಿಂದ ಸಮಯ ಹಾಗೂ ಹಣವೂ ವ್ಯರ್ಥ. ಅದರಲ್ಲಿಯೂ ಸರಕು ಸಾಗಣೆ ಬ್ಯಾಟರಿ ಚಾಲಿತ ವಾಹನಗಳಲ್ಲಿಅಸಾಧ್ಯ ಎನ್ನುವ ಸ್ಥಿತಿಯಲ್ಲಿದೆ. ಇದಕ್ಕೆ ಪರಿಹಾರವಾಗಿ ಹೊಸ ಯೋಜನೆ ಸಿದ್ಧವಾಗುತ್ತಿದೆ. ಹೆದ್ದಾರಿಯ ಮೇಲ್ಭಾಗದಲ್ಲಿಇಲೆಕ್ಟಿಕ್‌ ಸಂಪರ್ಕ ಇರುತ್ತದೆ. ಇಲೆಕ್ಟ್ರಿಕ್‌ ರೈಲ್‌ನಂತೆ ಇ-ವಾಹನಗಳು ಇದರ ಸಂಪರ್ಕದಿಂದ ಚಲಿಸುತ್ತಿದ್ದಂತೆ ಚಾರ್ಜ್‌ ಆಗುತ್ತದೆ. ಬಳಿಕ ಅದು ಮುಗಿಯುವವರೆಗೆ ಸಂಪರ್ಕ ರಹಿತವಾಗಿ ಚಲಿಸಿ ಮತ್ತೆ ಅಗತ್ಯ ಇದ್ದಾಗ ವಿದ್ಯುತ್‌ ಚಾರ್ಜ್‌ ಬಳಸಿಕೊಳ್ಳುತ್ತದೆ. ಸರಕು ಸಾಗಣೆಗೆ ವೇಗ: ಕೇವಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹಾಗೂ ಮಿಂಚಿನ ವೇಗದಲ್ಲಿಕರೆದೊಯ್ಯುವುದು ಮಾತ್ರವಲ್ಲದೆ ಸರಕು ಸಾಗಣೆಯಲ್ಲಿಕ್ರಾಂತಿಕಾರಕ ಪಾತ್ರ ನಿರ್ವಹಿಸಲಿದೆ. ಇದರಿಂದಾಗಿ ದೇಶದ ಕೈಗಾರಿಕೆ, ತಂತ್ರಜ್ಞಾನ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿಗಣನೀಯ ಪ್ರಗತಿ ಕಂಡು ಬರಲಿದೆ. ಯಾವುದೇ ಅಡೆತಡೆ ಇಲ್ಲದೆ ಸರಕುಗಳನ್ನು ಮತ್ತೊಂದು ಮೂಲೆಗೆ ತಲುಪಿಸಬಹುದು. ಈಗಿನ ರಸ್ತೆಯ ಮೂಲಕ ದೀರ್ಘ ಅವಧಿ ಪ್ರಯಾಣ ಮಾಡಿ ಸರಕು ಸಾಗಿಸುವುದಕ್ಕೆ ಭಾರೀ ವೆಚ್ಚವಾಗಲಿದೆ. ಒಂದು ವೇಳೆ ಭವಿಷ್ಯದಲ್ಲಿಇ-ಹೈವೇಗಳು ಹೆಚ್ಚಾದಲ್ಲಿಕಡಿಮೆ ವೆಚ್ಚದಲ್ಲಿಟ್ರಕ್‌ಗಳ ಮೂಲಕ ಸರಕು ಸಾಗಿಸುವುದರಿಂದ ಬೆಲೆಯೂ ಇಳಿಕೆಯಾಗಲಿದೆ. ಶೀಘ್ರ ಸಾಗಾಟದ ಹಿನ್ನೆಲೆಯಲ್ಲಿರೈಲು ಹಾಗೂ ವೈಮಾನಿಕ ಮಾರ್ಗಕ್ಕಿಂತ ಪರಿಣಾಮಕಾರಿಯಾಗಲಿದೆ. ಆಗಲಿದೆ ಸಂಪರ್ಕ ಕ್ರಾಂತಿ ಒಂದು ವೇಳೆ ಮೈಸೂರು-ಬೆಂಗಳೂರು ನಡುವೆ ಈ ಯೋಜನೆ ಅನುಷ್ಠಾನವಾದಲ್ಲಿಬೆಂಗಳೂರಿಗೆ ಸರಿಸಮಾನವಾಗಿ ಮೈಸೂರು ಬೆಳವಣಿಗೆಯಾಗಲಿದೆ. ಒಂದೆಡೆ ದಶಪಥ ಹೆದ್ದಾರಿ, ಮತ್ತೊಂದೆಡೆ ರೈಲ್ವೆ ಸಂಪರ್ಕ, ಇನ್ನೊಂದೆಡೆ ಎಲ್ಲಾನಗರಗಳಿಗೆ ನೇರ ವಿಮಾನ ಸಂಪರ್ಕದಿಂದ ಈಗಾಗಲೇ ಮೈಸೂರು ಮೈ ಕೊಡವಿಕೊಳ್ಳುತ್ತಿದೆ. ಇಂತಹದರ ನಡುವೆ ಇ-ಹೈವೇ ಕಾರ್ಯರೂಪಕ್ಕೆ ಬಂದಲ್ಲಿಸಾಂಸ್ಕೃತಿಕ ನಗರ ಉದ್ಯಮನಗರವಾಗಿ ಪರಿವರ್ತನೆಯಾಗುವುದರಲ್ಲಿಯಾವುದೇ ಸಂಶಯ ಇಲ್ಲಎಂದು ಹೇಳಲಾಗುತ್ತಿದೆ. ದೆಹಲಿ-ಮುಂಬಯಿ ನಡುವೆ ಯೋಜನೆ ಇ-ಹೈವೇ ಭಾರತದಲ್ಲಿಯೂ ಆರಂಭವಾಗಲಿದೆ. ದೇಶದ ಮೊದಲ ಯೋಜನೆಯಾಗಿ ದೆಹಲಿ-ಮುಂಬಯಿ ಹೆದ್ದಾರಿ ಆಯ್ಕೆಯಾಗಿದೆ. ಸುಮಾರು 1,300 ಕಿ.ಮೀ ದೂರದ ಯೋಜನೆ. ಒಟ್ಟು ಅಂದಾಜು ಮೊತ್ತ 1 ಲಕ್ಷ ಕೋಟಿ ರೂ. ಇದು ಹರಾರ‍ಯಣ, ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರಗಳನ್ನು ಸಂಪರ್ಕಿಸಲಿದೆ. ಇದರಿಂದ 16,000 ಕೋಟಿ ರೂ. ವೆಚ್ಚದ ಭೂಸ್ವಾಧೀನ ನಿಲ್ಲಲಿದೆ. ಇದರ ಪ್ರಯೋಗಾರ್ಥವಾಗಿ ಮೊದಲ ಹತ್ತು ಕಿ.ಮೀ.ನಲ್ಲಿಪರೀಕ್ಷಾರ್ಥ ಮಾರ್ಗ ನಿರ್ಮಾಣ ಆಗಲಿದೆ. ಪ್ರಯೋಜನವೇನು? -ಹೆದ್ದಾರಿ ವಿಸ್ತರಣೆ ಅಗತ್ಯ ಇಲ್ಲ -ಭೂಸ್ವಾಧೀನದ ಕೋಟ್ಯಂತರ ರೂ. ಉಳಿತಾಯ -ಹೆಚ್ಚು ವಾಹನಗಳ ಓಡಾಟ ಇರುವುದಿಲ್ಲ -ತೈಲ ಬಳಕೆ ಗಣನೀಯವಾಗಿ ಇಳಿಯಲಿದೆ -ವಾಯುಮಾಲಿನ್ಯ ತಡೆಗೆ ಪರಿಣಾಮಕಾರಿ -ಸರಕು ಸಾಗಣೆಯಿಂದ ಭಾರೀ ಪ್ರಯೋಜನ -ವೇಗವಾಗಿ ನಿಗದಿತ ಗುರಿ ಮುಟ್ಟಬಹುದು -ರೈಲು, ವಿಮಾನಕ್ಕಿಂತ ಹೆಚ್ಚು ಜನರು ಬಳಕೆ ಸಂಪರ್ಕ ವ್ಯವಸ್ಥೆ ಸುಧಾರಿಸಿದಷ್ಟೂ ಉದ್ಯಮ ಹಾಗೂ ಕೈಗಾರಿಕೆಗಳು ಬೆಳೆಯುತ್ತವೆ. ಇವೆರಡರಲ್ಲಿಪ್ರಗತಿ ಕಂಡರೆ ಯಾವುದೇ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಎಲ್ಲಾರೀತಿಯ ತಂತ್ರಜ್ಞಾನ, ಆವಿಷ್ಕಾರಗಳನ್ನು ಬಳಸಿಕೊಳ್ಳಬೇಕು. -ಸುಧಾಕರ್‌ ಶೆಟ್ಟಿ, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷರು


from India & World News in Kannada | VK Polls https://ift.tt/2PHaapW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...