ಹೊಸದಿಲ್ಲಿ: ಕೊರೊನಾ ಸೋಂಕು ದೃಢಪಟ್ಟಿರುವ ದಿಲ್ಲಿನಿವಾಸಿ ಪ್ರಯಾಣಿಸಿದ್ದ ವಿಯೆನ್ನಾ-ದಿಲ್ಲಿವಿಮಾನದಲ್ಲಿದ್ದ ಏರ್ ಇಂಡಿಯಾದ ಎಲ್ಲಸಿಬ್ಬಂದಿ 14 ದಿನಗಳವರೆಗೆ ತಮ್ಮ ಮನೆಗಳಲ್ಲಿಯೇ ಇರುವಂತೆ ಅಧಿಕಾರಿಗಳು ನಿರ್ದೇಶಿಸಿದ್ದಾರೆ. ಕೊರೊನಾ ವೈರಾಣು ಸೋಂಕು ದೃಢಪಡಲು ಮತ್ತು ಲಕ್ಷಣಗಳು ಉಲ್ಬಣಗೊಳ್ಳಲು ಅಥವಾ ಗುಣಮುಖರಾಗಲು ಕನಿಷ್ಠ 14 ದಿನಗಳ ಅವಧಿ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿಸಿಬ್ಬಂದಿಗೆ ಮನೆಯಲ್ಲಿಯೇ ಇದ್ದು, ಸೂಕ್ತ ವೈದ್ಯರಿಂದ ಪರೀಕ್ಷಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರ. ಫೆ.25ರಂದು ವಿಮಾನದಲ್ಲಿಇಟಲಿಯಿಂದ ಬಂದಿಳಿದ ಯಾತ್ರಿಕನಿಗೆ ಕೊರೊನಾ ದೃಢಪಟ್ಟಿರುವುದನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸೋಮವಾರ ಪ್ರಕಟಿಸಿದ್ದಾರೆ. ಇನ್ನೊಂದೆಡೆ, ಇತ್ತೀಚೆಗೆ ದುಬೈನಿಂದ ತೆಲಂಗಾಣಕ್ಕೆ ಮರಳಿರುವ ಬೆಂಗಳೂರು ಮೂಲದ ಐಟಿ ಕಂಪನಿ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ ಎಂದಿದ್ದಾರೆ. 3000 ಗಡಿ ದಾಟಿದ ಸಾವಿನ ಸಂಖ್ಯೆ: ಜಾಗತಿಕವಾಗಿ ಕೊರೊನಾ ದಾಳಿಗೆ ಬಲಿಯಾದವರ ಸಂಖ್ಯೆ ಸೋಮವಾರ 3000ದ ಗಡಿ ದಾಟಿದೆ. ಚೀನಾವೊಂದರಲ್ಲಿಯೇ ಇದುವರೆಗೂ 2954 ಮಂದಿ ಮೃತಪಟ್ಟಿದ್ದು, ಒಟ್ಟಾರೆ ವಿಶ್ವದಲ್ಲಿ3151 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸೋಮವಾರ ಒಂದೇ ದಿನದಲ್ಲಿ ಜಾಗತಿಕವಾಗಿ 1,823 ಕೊರೊನಾ ಸೋಂಕಿತರ ಪ್ರಕರಣಗಳು ಬೆಳಕಿಗೆ ಬಂದಿವೆ. ಜತೆಗೆ 45,702 ಮಂದಿ ಇದುವರೆಗೂ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕೋಳಿ ಉದ್ಯಮಕ್ಕೆ 1,750 ಕೋಟಿ ನಷ್ಟ ಕೋಳಿ ಮಾಂಸದಿಂದ ಹರಡುತ್ತಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿಕಳೆದೊಂದು ತಿಂಗಳಲ್ಲಿ ಕುಕ್ಕುಟೋದ್ಯಮ 1,750 ಕೋಟಿ ರೂ.ನಷ್ಟ ಅನುಭವಿಸಿದೆ ಎಂದು ಅಖಿಲ ಭಾರತ ಕೋಳಿ ಫಾರಮ್ಗಳ ಒಕ್ಕೂಟ ಹೇಳಿದೆ. ಇರಾನ್ ದಂಡನಾಯಕರ ಸಲಹೆಗಾರನ ಸಾವು ಇರಾನ್ನ ದಂಡನಾಯಕ ಅಯಾತೊಲ್ಹಾ ಅಲಿ ಖಮೀನಿ ಅವರ ಆಪ್ತ ಸಲಹೆಗಾರರ ವಲಯದಲ್ಲಿದ್ದ 71 ವರ್ಷದ ಮೊಹ್ಮಮದ್ ಮಿರ್ಮೊಹಮ್ಮದಿ ಅವರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಇರಾನ್ನಲ್ಲಿಕೊರೊನಾಗೆ ಬಲಿಯಾದವರ ಸಂಖ್ಯೆ 66ಕ್ಕೆ ಏರಿದೆ. ಇನ್ನೂ 1,501 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. ಚೀನಾ ಹೊರತಾಗಿ ಮಧ್ಯಪ್ರಾಚ್ಯದಲ್ಲಿಅತಿಹೆಚ್ಚು ಕೊರೊನಾ ಸೋಂಕಿತರು ಇರಾನ್ನಲ್ಲಿಪತ್ತೆಯಾಗಿದ್ದಾರೆ.
from India & World News in Kannada | VK Polls https://ift.tt/2TfCSAy