ಮಕ್ಕಳನ್ನು ಸಂತೈಸುತ್ತಿರುವ ಈ ಫೋಟೋ ದಿಲ್ಲಿ ಗಲಭೆಯದ್ದಾ: ಈ ಸುದ್ದಿಯ ಅಸಲಿಯತ್ತೇನು?

ಹಕ್ಕು 1 ಹಲವಾರು ಹಿಂದೂ ಮತ್ತು ಮುಸ್ಲಿಮರ ನಡುವೆ ಹಿಂಸಾಚಾರ ಭುಗಿಲೆದ್ದಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮಹಿಳೆಯೊಬ್ಬರು ತನ್ನ 3 ಮಕ್ಕಳನ್ನು ತಬ್ಬಿಕೊಂಡು ಸಾಂತ್ವನ ಹೇಳುವ ಫೋಟೋವನ್ನು ಹಲವಾರು ಟ್ವಿಟ್ಟರ್ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಟ್ವಿಟ್ಟರ್ ಬಳಕೆದಾರರು ಈ ಫೋಟೋವನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ನನ್ನ ದೇಶಕ್ಕೆ ಏನು ಮಾಡಿದ್ದಾರೆ ಎಂಬುದರ ಬಗ್ಗೆ ನನ್ನ ಶಾಶ್ವತ ಸ್ಮರಣೆಯಾಗಿ ಇದು ಉಳಿಯುತ್ತದೆ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋವನ್ನು ಟ್ವೀಟ್ ಮಾಡಲಾಗುತ್ತಿದೆ. ಸತ್ಯ ಈ ಫೋಟೋ ಸಂಘರ್ಷದ ಫೋಟೋ ಆಗಿದ್ದು, ಇದನ್ನು ಮೇ 14, 2014 ರಂದು ತೆಗೆಯಲಾಗಿದೆ. ಇದಕ್ಕೂ ದಿಲ್ಲಿ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಪರಿಶೀಲನೆ ಮತ್ತು ವಿಧಾನ ಗೂಗಲ್‌ನಲ್ಲಿ ರಿವರ್ಸ್-ಇಮೇಜ್ ಸರ್ಚ್ ಫಂಕ್ಷನ್ ಬಳಸಿ, ಗೆಟ್ಟಿ ಇಮೇಜಸ್ ಪೋಸ್ಟ್ ಮಾಡಿದ ಮೂಲ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಗೆಟ್ಟಿ ಇಮೇಜಸ್ ಮೂಲಕ ಫೋಟೋದ ಕ್ರೆಡಿಟ್‌ ZEIN AL-RIFAI / AFP ಗೆ ಸಲ್ಲುತ್ತದೆ. ಗೆಟ್ಟಿ ಇಮೇಜಸ್ ಫೋಟೋಗೆ ನೀಡಿದ ಶೀರ್ಷಿಕೆಯಲ್ಲೂ ರಿಯಾದ ಅಲೆಪ್ಪೊದ ಸಹೌರ್ ನೆರೆಹೊರೆಯಲ್ಲಿರುವ ಅವರ ಮನೆಯ ಮೇಲೆ ಬಾಂಬ್ ಸ್ಫೋಟಿಸಿದ ನಂತರ ಸಿರಿಯಾದ ಮಹಿಳೆಯೊಬ್ಬರು ತನ್ನ ಮಕ್ಕಳನ್ನು ಸಮಾಧಾನಪಡಿಸುತ್ತಾರೆ. ಎಂದಿದೆ. ತೀರ್ಮಾನ ಕಳೆದ ವಾರ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ನಂತರ ಫೋಟೋವನ್ನು ತೆಗೆಯಲಾಗಿದೆ ಎಂದು ಸಿರಿಯಾದ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಟೈಮ್ಸ್ ಫ್ಯಾಕ್ಟ್ ಚೆಕ್ ಕಂಡುಹಿಡಿದಿದೆ. ಆದ್ದರಿಂದ ಈ ಹಕ್ಕು ಸುಳ್ಳು. ಹಕ್ಕು 2 ಹಿಂಸಾಚಾರದ ಸಂದರ್ಭದಲ್ಲಿ ದಿಲ್ಲಿಯಲ್ಲಿ ಹತ್ಯೆಗೀಡಾದ ಗುಪ್ತಚರ ಬ್ಯೂರೋ ಅಧಿಕಾರಿ ಅಂಕಿತ್ ಶರ್ಮಾ ಅವರ ಮಗು ಎಂದು ಹೇಳಿಕೊಳ್ಳುವ ಮೂಲಕ ಮಗುವೊಂದರ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಮಗು ಅಳುತ್ತಿದ್ದು, ಮೃತದೇಹವನ್ನು ನೋಡುತ್ತಿದೆ. ಈ ಫೋಟೋಗೆ ನೀಡಲಾದ ಹಿಂದಿ ಪಠ್ಯದ ಅನುವಾದವು "ಈ ಮಗುವಿನ ಮನಸ್ಸು ಮತ್ತು ಹೃದಯದಲ್ಲಿ ಏನು ಯೋಚನೆ ಸುಳಿಯುತ್ತಿದೆಯೋ. ಅವರ ತಂದೆಯನ್ನು 400 ಕ್ಕೂ ಹೆಚ್ಚು ಬಾರಿ ಇರಿಯಲಾಗಿದೆ. ನನ್ನ ರಕ್ತವು ಇದನ್ನು ನೋಡಿ ಕುದಿಯುತ್ತಿದೆ ಎಂದು #ಅಂಕಿತ್‌ಶರ್ಮಾ ಹ್ಯಾಶ್‌ಟ್ಯಾಗ್‌ ಬಳಸಲಾಗಿದೆ. ಸತ್ಯ ಈ ಮಗುಗೆ ಯಾವುದೇ ರೀತಿಯಲ್ಲಿ ಶರ್ಮಾ ಅವರೊಂದಿಗೆ ಸಂಬಂಧ ಹೊಂದಿಲ್ಲ. ಹಿಂಸಾಚಾರದ ಸಮಯದಲ್ಲಿ ಕೊಲ್ಲಲ್ಪಟ್ಟ ಮುದಾಸೀರ್ ಖಾನ್ ಅವರಿಗೆ ಸಂಬಂಧ ಹೊಂದಿರುವ ಮಗು ಇದಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಈ ಫೋಟೋವನ್ನು ಸೆರೆಹಿಡಿಯಲಾಗಿದೆ. ಪರಿಶೀಲನೆ ಮತ್ತು ವಿಧಾನ ರಿವರ್ಸ್-ಇಮೇಜ್ ಹುಡುಕಾಟವನ್ನು ಬಳಸಿಕೊಂಡು, ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ಕರೆದೊಯ್ಯುವ ಮೂಲ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ. ಅದ್ನಾನ್ ಅಬಿದಿ ಎಂಬುವರು ಈ ಫೋಟೋವನ್ನು ಸೆರೆ ಹಿಡಿದಿದ್ದು, 2020 ರ ಫೆಬ್ರವರಿ 27 ರಂದು ಪೋಸ್ಟ್ ಮಾಡಲಾಗಿದೆ. ಹೊಸ ಪೌರತ್ವ ಕಾನೂನಿನ ಪರವಾಗಿ ಮತ್ತು ವಿರೋಧ ನಡೆದ ಘರ್ಷಣೆಯಲ್ಲಿ ಮಂಗಳವಾರ ಹೊಸದಿಲ್ಲಿಯ ಗಲಭೆ ಪೀಡಿತ ಪ್ರದೇಶದಲ್ಲಿ ಗಾಯಗೊಂಡಿದ್ದ ಮುದಾಸೀರ್ ಖಾನ್ ಅವರು ಬಲಿಯಾಗಿದ್ದು, ಅವರ ದೇಹದ ಬಳಿ ಜನರು ಶೋಕ ವ್ಯಕ್ತಪಡಿಸಿದ್ದಾರೆ ಎಂಬ ಫೋಟೋ ಶೀರ್ಷಿಕೆ ಹೊಂದಿದೆ. ಈ ಮಗು ಮುದಾಸಿರ್‌ ಖಾನ್‌ನ ಸಂಬಂಧಿ. ಅಂಕಿತ್ ಶರ್ಮಾಗೆ ಮದುವೆಯಾಗಿರಲಿಲ್ಲ ಎಂದು ವರದಿಗಳು ಹೇಳಿವೆ. ತೀರ್ಮಾನ ದಿಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಹತ್ಯೆಗೀಡಾದ ಮುದಾಸೀರ್ ಖಾನ್ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಕ್ಲಿಕ್ ಮಾಡಿದ ಫೋಟೋವನ್ನು ಟೈಮ್ಸ್ ಫ್ಯಾಕ್ಟ್ ಚೆಕ್ ಕಂಡುಹಿಡಿದಿದೆ. ಆದರೆ, ಈ ಫೋಟೋದ ಮಗುವನ್ನು ಹತ್ಯೆಗೀಡಾದ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರ ಮಗು ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


from India & World News in Kannada | VK Polls https://ift.tt/3cDM8pQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...