ಶಿರಸಿ: ನಾಡಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ದ್ವಿವಾರ್ಷಿಕ ಜಾತ್ರಾ ಮಹೋತ್ಸವದ ಮಹತ್ವದ ಘಟ್ಟವಾದ ರಥಾರೂಢ ದೇವಿಯ ಶೋಭಾಯಾತ್ರೆ ಬುಧವಾರ ಬೆಳಗ್ಗೆ ವೈಭವದಿಂದ ನೆರವೇರಲಿದೆ. ಬೆಳಗ್ಗೆ ಸುಮಾರು 7.30ಕ್ಕೆ ರಥಾರೂಢಳಾದ ಶ್ರೀ ಮಾರಿಕಾಂಬೆ ದೇವಾಲಯದ ಎದುರು ಸೇರುವ ಸಹಸ್ರಾರು ಭಕ್ತಾದಿಗಳ ಜಯಘೋಷಗಳ ಮಧ್ಯೆ ಜಾತ್ರಾ ಗದ್ದುಗೆಯತ್ತ ತೆರಳುವುದು ವಿಶೇಷವಾಗಿದೆ. ವಿದ್ಯುಕ್ತ ವಿಧಿ ವಿಧಾನಗಳ ನಂತರದಲ್ಲಿ ನೂರಾರು ಭಕ್ತರು ಬೆಳಗ್ಗೆ 8 ಗಂಟೆ ನಂತರ ರಥವನ್ನು ಎಳೆಯಲಿದ್ದಾರೆ ಮತ್ತು ಸಾವಿರಾರು ಭಕ್ತರ ಸಮೂಹ ಇದಕ್ಕೆ ಸಾಥ್ ನೀಡಲಿದೆ. ಬೆಳಗ್ಗೆ ಪ್ರಾರಂಭವಾಗಿ ಅರ್ಧ ಕಿಲೋಮೀಟರ್ ದೂರದ ಬಿಡಕಿ ಬಯಲಿನ ಜಾತ್ರಾ ಗದ್ದುಗೆಯನ್ನು ಸುಮಾರು ಎರಡು ತಾಸು ಅವಧಿಯಲ್ಲಿ ತಲುಪಲಾಗುತ್ತದೆ. ನಂತರ ಮಧ್ಯಾಹ್ನ 12.43 ರೊಳಗಿನ ಮುಹೂರ್ತದಲ್ಲಿ ಜಾತ್ರಾ ಗದ್ದುಗೆಯಲ್ಲಿ ದೇವಿಯ ಪ್ರತಿಷ್ಠಾ ಕಾರ್ಯ ವಿಧ್ಯುಕ್ತವಾಗಿ ನೆರವೇರಲಿದೆ. ನಾಳೆಯಿಂದ ದರ್ಶನ ಬುಧವಾರ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವ ದೇವಿಯ ದರ್ಶನ ಮತ್ತು ಪೂಜೆ ಹರಕೆ ಸೇವೆ ಸಮರ್ಪಣಾ ಕಾರ್ಯವು ಗುರುವಾರ ಮುಂಜಾನೆ 5 ರಿಂದ ಪ್ರಾರಂಭವಾಗಲಿದೆ. ನಂತರದ ಎಂಟು ದಿನಗಳ ಕಾಲ ಮುಂಜಾನೆಯಿಂದ ರಾತ್ರಿ 10 ರವರೆಗೆ ಸಹಸ್ರ ಸಹಸ್ರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯಲಿದ್ದಾರೆ.
from India & World News in Kannada | VK Polls https://ift.tt/39hnrgJ