'ಅಂದು ಪಾಕ್ ಭೂಮಿಯನ್ನು ವಶಪಡಿಸಿಕೊಳ್ಳಲು ನಮಗೆ ಬಿಡಬೇಕಿತ್ತು': ಜನರಲ್ ವಿಪಿ ಮಲಿಕ್

ಇಂದು (ಜುಲೈ 26) '' ಸಂಭ್ರಮದಲ್ಲಿದೆ. 1999ರಲ್ಲಿ ತನ್ನ ಬದ್ಧ ವೈರಿ ಪಾಕಿಸ್ತಾನವನ್ನು ಸದೆಬಡಿದು 22 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ದಿಗ್ವಿಜಯದ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಜತೆಗೆ ದೇಶದ ರಕ್ಷಣೆಗಾಗಿ, ನೆಲವನ್ನು ಉಳಿಸುವ ಹೋರಾಟದಲ್ಲಿ ಬಲಿದಾನ ಮಾಡಿದ ಹುತಾತ್ಮ ಸೈನಿಕರನ್ನು ಸ್ಮರಿಸಲಾಗುತ್ತಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಅವರು ಈ ಕದನದ ಒಳ ಹೊರಗನ್ನು ಸಂಪೂರ್ಣವಾಗಿ ಬಲ್ಲವರು. ಈ ಯುದ್ಧವು ಸಮರದ ನಿಯಮಗಳು ಮತ್ತು ಭಾರತ-ಪಾಕಿಸ್ತಾನ ಸಂಬಂಧವನ್ನು ಹೇಗೆಲ್ಲ ಬದಲಿಸಿತು ಎಂಬ ಬಗ್ಗೆ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.
  • ಯುದ್ಧ ನಡೆದು 22 ವರ್ಷಗಳಾಗಿವೆ. ಹಿಂದಿರುಗಿ ನೋಡಿದಾಗ ಅದರಿಂದ ಕಲಿತ ಅತಿ ದೊಡ್ಡ ಪಾಠವೇನು?
ಆಪರೇಷನ್ ವಿಜಯ್ ರಾಜಕೀಯ, ಸೇನೆ ಮತ್ತು ರಾಜತಾಂತ್ರಿಕವಾದ ದೃಢ ಕ್ರಿಯೆಗಳಿಂದ ರೂಪುಗೊಂಡಿದ್ದು. ಪ್ರತಿಕೂಲ ಸನ್ನಿವೇಶವನ್ನು ಅಪೂರ್ವ ಸೇನಾ ಮತ್ತು ರಾಜತಾಂತ್ರಿಕ ವಿಜಯವನ್ನಾಗಿ ಪರಿವರ್ತಿಸಲು ನೆರವಾಯಿತು. ಗಣನೀಯವಾಗಿ ತನ್ನ ರಾಜಕೀಯ ಮತ್ತು ಸೇನೆಯ ಬೆಲೆಯನ್ನು ತೆರಬೇಕಾಯಿತು. ದುರ್ಬಲ ಬೇಹುಗಾರಿಕೆ ಮತ್ತು ಅಸಮರ್ಪಕ ವಿಚಕ್ಷಣಾ ಸೌಕರ್ಯದ ಕಾರಣದಿಂದ ಭಾರತೀಯ ಸೇನೆ ಕೂಡ ಮರು ಸಂಘಟನೆಗೆ ಹಾಗೂ ಸೂಕ್ತ ಪ್ರತಿ ದಾಳಿ ರೂಪಿಸಲು ಸಮಯ ತೆಗೆದುಕೊಂಡಿತು. ಆದರೆ, ಯುದ್ಧಭೂಮಿಯಲ್ಲಿನ ಗೆಲುವು ಮತ್ತು ರಾಜಕೀಯ-ಸೇನಾ ಕಾರ್ಯತಂತ್ರದ ಯಶಸ್ಸು, ಭಾರತವು ತನ್ನ ರಾಜಕೀಯ ಗುರಿಯನ್ನು ಈಡೇರಿಸುವಲ್ಲಿ ಹಾಗೂ ಜವಾಬ್ದಾರಿಯುತ, ಪ್ರಜಾಪ್ರಭುತ್ವ ದೇಶವಾಗಿ, ತನ್ನ ಪ್ರಾದೇಶಿಕ ಸಮಗ್ರತೆಯನ್ನು ನಿರ್ಧರಿಸುವ ಹಾಗೂ ರಕ್ಷಿಸಿಕೊಳ್ಳುವ ಸಮರ್ಥನೀಯ ರಾಷ್ಟ್ರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ವೃದ್ಧಿಸಿಕೊಂಡಿತು. ಅನಿಯಮಿತ ಅಥವಾ ಹುಸಿ ಯುದ್ಧವೊಂದು ಸೀಮಿತ ಸಾಂಪ್ರದಾಯಿಕ ಯುದ್ಧವಾಗಿ ಬೆಳೆದಿರುವುದಕ್ಕೆ ಇದೊಂದು ಪಾಠ. ಅಣ್ವಸ್ತ್ರಗಳನ್ನು ಹೊಂದಿರುವುದು ಉಪಖಂಡದಲ್ಲಿ ಸಂಪೂರ್ಣ ಯುದ್ಧದ ಸಾಧ್ಯತೆಯನ್ನು ಕಡಿಮೆ ಮಾಡಿದ್ದರೂ, ನಾವು ಗಡಿ ಮತ್ತು ಪ್ರಾದೇಶಿಕ ವಿವಾದಗಳನ್ನು ಹೊಂದಿರುವಷ್ಟೂ ಸಮಯ, ಕಾರ್ಗಿಲ್ ಮಾದರಿಯ ಸೇನಾ ಸಂಘರ್ಷಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. , ಉನ್ನತ ರಕ್ಷಣಾ ನಿಯಂತ್ರಣ ಸಂಸ್ಥೆ (ಎಚ್‌ಡಿಸಿಒ), ನಮ್ಮ ಬೇಹುಗಾರಿಕೆ ಮತ್ತು ವಿಚಕ್ಷಣೆ, ಶಸ್ತ್ರಾಸ್ತ್ರ ಹಾಗೂ ಸಾಧನಗಳ ಸ್ಥಿತಿಗತಿಯ ಅನೇಕ ದೌರ್ಬಲ್ಯಗಳನ್ನು ತೆರೆದಿಟ್ಟಿತು. ಕಾರ್ಗಿಲ್ ಪರಾಮರ್ಶನಾ ಸಮಿತಿ ಮತ್ತು ಸಚಿವರ ಸಮೂಹದ ವರದಿ ಇದನ್ನು ಉಲ್ಲೇಖಿಸಿತ್ತು.
  • ಕಾರ್ಗಿಲ್ ಯುದ್ಧ, ಪಾಕಿಸ್ತಾನದ ಕುರಿತಾದ ಭಾರತದ ನಿಲುವನ್ನು ಹೇಗೆ ಬದಲಿಸಿತು?
ಭಾರತ-ಪಾಕ್ ಭದ್ರತಾ ಸಂಬಂಧಕ್ಕೆ ಇದು ಬಹುದೊಡ್ಡ ತಿರುವು. ಇದು ನಂಬಿಕೆಯನ್ನು ಸಂಪೂರ್ಣವಾಗಿ ಛಿದ್ರಗೊಳಿಸಿತ್ತು ಹಾಗೂ ಎರಡು ತಿಂಗಳ ಹಿಂದಷ್ಟೇ ಸಹಿ ಹಾಕಿದ್ದ ಲಾಹೋರ್ ಘೋಷಣೆಯಂತಹ ಯಾವುದೇ ಒಪ್ಪಂದವನ್ನು ಸುಲಭವಾಗಿ ಪಾಕಿಸ್ತಾನ ಉಲ್ಲಂಘಿಸುತ್ತದೆ ಎಂಬುದನ್ನು ಭಾರತಕ್ಕೆ ಮನವರಿಕೆ ಮಾಡಿತ್ತು. ಅದು ಪ್ರಧಾನಿ ವಾಜಪೇಯಿ ಮತ್ತು ಸರ್ಕಾರಕ್ಕೆ ದೊಡ್ಡ ಆಘಾತವಾಗಿತ್ತು. ಒಳನುಸುಳುಕೋರರು ಪಾಕಿಸ್ತಾನದ ಅಕ್ರಮ ವ್ಯಕ್ತಿಗಳಲ್ಲ, ಆದರೆ ಅವರು ಪಾಕಿಸ್ತಾನ ಸೇನೆಯ ಸಿಬ್ಬಂದಿ ಎಂಬುದನ್ನು ನಂಬಲು ಅವರು ಕೆಲವು ಸಮಯ ತೆಗೆದುಕೊಂಡರು. 'ನೀವು ನನಗೆ ಬೆನ್ನಿನಿಂದ ಇರಿದಿರಿ' ಎಂದು ನವಾಜ್ ಷರೀಫ್ ಅವರಿಗೆ ವಾಜಪೇಯಿ ಹೇಳಿದ್ದರು.
  • ಭಾರತ ಇದನ್ನು ವಿಭಿನ್ನವಾಗಿ ನಿಭಾಯಿಸಬಹುದಾಗಿತ್ತು ಎಂದು ನಿಮಗೆ ಯುದ್ಧದ ನಂತರ ಯಾವ ರೀತಿ ಅನಿಸಿತ್ತು?
ಯುದ್ಧ ಆರಂಭವಾದಾಗ, ಪಾಕಿಸ್ತಾನ ಸೃಷ್ಟಿಸಿದ ಸಂಪೂರ್ಣ 'ಅಚ್ಚರಿ ಪರಿಸ್ಥಿತಿ'ಗೆ ನಾವು ಪ್ರತಿಕ್ರಿಯಿಸುತ್ತಿದ್ದೆವು. ಬೇಹುಗಾರಿಕೆ ಮತ್ತು ವಿಚಕ್ಷಣಾ ವೈಫಲ್ಯದ ಕಾರಣದಿಂದ, ಒಳನುಸುಳುಕೋರರನ್ನು ಗುರುತಿಸುವ ವಿಚಾರದಲ್ಲಿ ಸರ್ಕಾರದೊಳಗೆ ತೀವ್ರ ಗೊಂದಲವಿತ್ತು. ನಮ್ಮ ಮುಂಚೂಣಿ ರಚನೆಯು ಒಳನುಸುಳುವಿಕೆಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿತ್ತು. ಅವರು ಇರುವ ಸ್ಥಳದ ಬಗ್ಗೆ ಕೂಡ ಯಾವು ಸುಳಿವೂ ಇರಲಿಲ್ಲ. ಹೀಗಾಗಿ, ಸರಿಯಾದ ಮಾಹಿತಿ, ಸನ್ನಿವೇಶವನ್ನು ಹಿಡಿತಕ್ಕೆ ತಂದುಕೊಳ್ಳುವುದು ಮತ್ತು ಪ್ರತಿದಾಳಿ ಆರಂಭಿಸುವುದು ಬಹಳ ಅಗತ್ಯವಾಗಿತ್ತು. ಕಾರ್ಗಿಲ್‌ನಲ್ಲಿ ಸೇನಾ ಯಶಸ್ಸು ಪಡೆಯುವ ಆತ್ಮವಿಶ್ವಾಸ ಭಾರತೀಯ ಸೇನೆಗೆ ಬಂದ ಬಳಿಕ, ಕದನ ವಿರಾಮಕ್ಕೆ ಒಪ್ಪಿಕೊಳ್ಳುವ ಮುನ್ನ ಎಲ್‌ಒಸಿಯುದ್ದಕ್ಕೂ ಇರುವ ಪಾಕಿಸ್ತಾನ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಅನುಮತಿ ನೀಡಬೇಕಿತ್ತು. ಕಾರ್ಗಿಲ್ ಯುದ್ಧಕ್ಕೂ ಕೆಲವು ವರ್ಷಗಳ ಮುನ್ನ, ನಮಗೆ ಅನುದಾನದ ಅಭಾವವಿತ್ತು. ಅದರ ಪರಿಣಾಮವಾಗಿ ನಮ್ಮ ಅಧಿಕೃತ ಬಜೆಟ್‌ನ ಶೇ 70ರಷ್ಟು ಬಳಸಿಕೊಂಡು ಕೆಲಸ ಮಾಡುತ್ತಿದ್ದೆವು. ಕಾರ್ಗಿಲ್ ವಲಯದಲ್ಲಿ, ಆ ಎತ್ತರದ ಪ್ರದೇಶದ ವಾತಾವರಣಕ್ಕೆ ಸೂಕ್ತವಾದ ಬಟ್ಟೆ, ಶೂಗಳು ನಮಗೆ ಸಿಕ್ಕಿರಲಿಲ್ಲ. ನಮ್ಮ ಬಳಿ ಕಣ್ಗಾವಲು ಉಪಕರಣಗಳು ಅಥವಾ ರೇಡಾರ್ ಇರಲಿಲ್ಲ. ಇನ್ನೊಂದು ಬದಿಯಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ನಮ್ಮ ಹೆಲಿಕಾಪ್ಟರ್‌ಗಳು 20,000 ಅಡಿ ಎತ್ತರಕ್ಕೆ ಹೋಗಿ ಬರಬೇಕಿತ್ತು. ಇಂದು ಅದಕ್ಕಾಗಿ ಉಪಗ್ರಹ ಚಿತ್ರಗಳು, ಯುಎವಿಗಳು ಇವೆ. ಆರ್ಟಿಲರಿ ಕಮಾಂಡರ್‌ಗಳು ಬೋಫೋರ್ಸ್ ಬಂದೂಕುಗಳನ್ನು ಮೂರು ತುಣುಕುಗಳನ್ನಾಗಿ ಮಾಡಿಕೊಂಡು, ಒಂದೊಂದಾಗಿ ಬೆಟ್ಟದ ತುದಿಗೆ ಕೊಂಡೊಯ್ಯಲು ನಿರ್ಧರಿಸಿದ್ದರು. ಆ ಎತ್ತರದ ಸ್ಥಳದಿಂದ ಶತ್ರುಗಳ ಮೇಲೆ ನೇರವಾಗಿ ಗುಂಡು ಹಾರಿಸಬಹುದಾಗಿತ್ತು. ಹೀಗೆ ನಮ್ಮ ಬಳಿ ಇರುವ ಕೊರತೆಗಳನ್ನು ನೀಗಿಸಲು ನಾವು ಸಾಕಷ್ಟು ಪ್ರಯತ್ನ ಮಾಡಿದ್ದೆವು.
  • 26/11 ರೀತಿಯ ಮತ್ತೊಂದು ದಾಳಿ ನಡೆದರೆ, ಉರಿ ಮತ್ತು ಬಾಲಕೋಟ್ ದಾಳಿಗಳ ಹಿನ್ನೆಲೆಯಲ್ಲಿ ಭಾರತದ ಪ್ರತಿಕ್ರಿಯೆ ಬೇರೆಯದೇ ಆಗಿರುತ್ತದೆ ಎನಿಸುತ್ತದೆಯೇ?
26/11ರ ಘಟನೆ ನಡೆದಾಗ ನಾನು ನಿವೃತ್ತನಾಗಿದ್ದೆ. ಆದರೆ ಭಾರತ ಪ್ರತೀಕಾರ ತೀರಿಸಿಕೊಳ್ಳಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ಪಾಕಿಸ್ತಾನ ಅಂತಹ ಪರಿಸ್ಥಿತಿಯನ್ನು ಮತ್ತೆ ಸೃಷ್ಟಿಸಿದರೆ, ನಾವು ಪ್ರತೀಕಾರ ತೀರಿಸಿಕೊಳ್ಳಲೇಬೇಕು. ಆ ಪ್ರತೀಕಾರ ಬಹಳ ಪ್ರಬಲವಾಗಿರಬೇಕು. ಅದು ನಿರೋಧಕವಾಗಿರುತ್ತದೆ ಮತ್ತು ಪಾಕಿಸ್ತಾನಕ್ಕೆ ಅಂತಹ ನಿರೋಧಕ ಕಾಲದಿಂದ ಕಾಲಕ್ಕೆ ಅಗತ್ಯವಿದೆ. ಯಾವ ರೀತಿಯ ಮತ್ತು ಯಾವ ಸ್ವರೂಪದ ಪ್ರತೀಕಾರ ಎನ್ನುವುದನ್ನು ಸೇನೆ ಮತ್ತು ರಾಜಕಾರಣಿಗಳು ನಿರ್ಧರಿಸಬೇಕಾಗುತ್ತದೆ.
  • ಪಾಕಿಸ್ತಾನ ಅಂತಹ ಪರಿಸ್ಥಿತಿ ಮುಂದುವರಿಸುತ್ತಿದ್ದರೆ, ನಾವು ಅವರೊಂದಿಗೆ ಮಾತುಕತೆ ಮುಂದುವರಿಸಬೇಕು ಎಂದು ನಿಮಗೆ ಅನಿಸುತ್ತದೆಯೇ?
ಅವರು ನಮ್ಮ ನೆರೆಯವರು ಮತ್ತು ನೆರೆಯ ದೇಶವಾಗಿಯೇ ಇರುತ್ತದೆ. ಅವರೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂಬ ಶಾಶ್ವತ ನೀತಿಯನ್ನು ಹೊಂದಬೇಕು ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ. ನಿಮ್ಮ ನೀತಿಗಳಲ್ಲಿ ನಿಮಗೆ ಹೊಂದಾಣಿಕೆ ಇರಬೇಕು. ಆದರೆ, ಯಾವುದೇ ಓಲೈಕೆ ಇರಬಾರದು. ನಮ್ಮ ಮಾತುಕತೆಗಳು ಮೂಲ ವಾಸ್ತವಗಳ ಆಧಾರದಲ್ಲಿ ನಡೆಯಬೇಕು.
  • ಆ ಸಮಯದ ಒಳ್ಳೆಯ ನೆನಪುಗಳು ಇವೆಯೇ?
ದಿಲ್ಲಿಯಲ್ಲಿ ಕಾರ್ಯತಂತ್ರ ರೂಪಿಸುವುದು ನನ್ನ ಮುಖ್ಯ ಕಾರ್ಯವಾಗಿತ್ತು. ಪ್ರತಿ ಆರನೇ ದಿನ ಮುಂಚೂಣಿ ಪಡೆಗಳನ್ನು ಭೇಟಿ ಮಾಡುತ್ತಿದ್ದೆ. ಯೋಧರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡುವುದು ಯಾವಾಗಲೂ ಮುದ ನೀಡುತ್ತಿತ್ತು. ಅವರು ಯಾವಾಗಲೂ ಹೇಳುತ್ತಿದ್ದ ಮಾತು, 'ಯೋಚನೆ ಬೇಡ ಸರ್, ನಾವದನ್ನು ಮಾಡುತ್ತೇವೆ'. ಇದು ಕಷ್ಟಕರ ಕಾರ್ಯ ಎಂದೋ ಅಥವಾ ನಮಗೆ ಕೆಲವು ದೊಡ್ಡ ಸಮಸ್ಯೆಗಳಿವೆ ಎಂದೋ ಯಾರೂ ಎಂದಿಗೂ ಹೇಳಿರಲಿಲ್ಲ. ಇದಕ್ಕೆ ವಿರೋಧಾಭಾಸವಾಗಿ, ದಿಲ್ಲಿಯಲ್ಲಿ ಅಸಂತುಷ್ಟ ರಾಜಕಾರಣಿಗಳು ಮತ್ತು ಸ್ವತಃ ನನ್ನ ಸಹೋದ್ಯೋಗಿಗಳನ್ನು ಎದುರಿಸಬೇಕಾಗಿತ್ತು. ಹೀಗಾಗಿ ಸೇನಾ ಪಡೆ ಬಳಿ ಹೋಗುವಾಗ ನನ್ನದೇ ನೈತಿಕ ಶಕ್ತಿಯನ್ನು ಹುಡುಗರ ಮುಂದೆ ಪ್ರದರ್ಶಿಸುತ್ತಿದ್ದೆ.


from India & World News in Kannada | VK Polls https://ift.tt/2UMPN0k

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...