ಮೊಟ್ಟ ಮೊದಲ ಎಸೆತದಲ್ಲಿಯೇ ಔಟ್‌ ಆದ ಪೃಥ್ವಿ ಶಾ ಬಗ್ಗೆ ಧವನ್‌ ಹೇಳಿದ್ದಿದು!

ಕೊಲಂಬೊ: ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ಗೆಲುವು ಪಡೆದ ಬಳಿಕ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್‌ ಯಾದವ್ ಅವರನ್ನು ಶ್ಲಾಘಿಸಿದ ನಾಯಕ , ಮೊದಲ ಎಸೆತದಲ್ಲಿಯೇ ಔಟ್‌ ಆದ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡದ ಪರ ಸೂರ್ಯಕುಮಾರ್‌ ಯಾಧವ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಅವರು ಆಡಿದ್ದ 34 ಎಸೆತಗಳಲ್ಲಿ 50 ರನ್‌ ಗಳಿಸಿದ್ದರು. ಇದರಲ್ಲಿ ಅವರು ಐದು ಫೋರ್‌ ಹಾಗೂ ಎರಡು ಸಿಕ್ಸರ್ ಬಾರಿಸಿದ್ದರು. ಅಲ್ಲದೆ, ನಾಯಕ ಶಿಖರ್‌ ಧವನ್‌ ಅವರೊಂದಿಗೆ ಮಧ್ಯಮ ಓವರ್‌ಗಳಲ್ಲಿ 62 ರನ್‌ ಜತೆಯಾಟವಾಡಿದ್ದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ ಐದು ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಶ್ರೀಲಂಕಾ ತಂಡ, ಭುವನೇಶ್ವರ್‌ ಕುಮಾರ್‌ ಮಾರಕ ದಾಳಿಗೆ ನಲುಗಿ 18.3 ಓವರ್‌ಗಳಿಗೆ 126 ರನ್‌ಗಳಿಗೆ ಆಲೌಟ್‌ ಆಯಿತು. ಆ ಮೂಲಕ 38 ರನ್‌ಗಳ ಭಾರಿ ಅಂತರದಲ್ಲಿ ಸೋಲುಂಡಿತು. ಪಂದ್ಯದ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶಿಖರ್‌ ಧವನ್‌, "ನಮಗೆ 10 ರಿಂದ 15 ರನ್‌ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೂ, ನಾವು ಕಲೆ ಹಾಕಿದ್ದು ಉತ್ತಮ ಮೊತ್ತವೇ ಆಗಿತ್ತು. ಮೊದಲನೇ ಎಸೆತದಲ್ಲಿಯೇ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ನಾವು ಉತ್ತಮವಾಗಿ ಬ್ಯಾಟ್‌ ಮಾಡಿದ್ದೇವೆ," ಎಂದರು. ನಂತರ, ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್‌ ಬಗ್ಗೆ ಮಾತನಾಡಿ,"ಪವರ್‌ಪ್ಲೇನಲ್ಲಿ 50 ರನ್‌ ಗಳಿಸಿದ್ದು ಅತ್ಯುತ್ತಮವಾಗಿತ್ತು. ಸೂರ್ಯಕುಮಾರ್ ಯಾದವ್‌ ಅದ್ಭುತ ಆಟಗಾರ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಅವರ ಬ್ಯಾಟಿಂಗ್‌ ಅನ್ನು ನಾವು ಆನಂದಿಸುತ್ತೇವೆ. ಪಂದ್ಯದಲ್ಲಿ ಅವರು(ಸೂರ್ಯ) ನನ್ನಿಂದ ಒತ್ತಡವನ್ನು ಪಡೆದುಕೊಳ್ಳುತ್ತಾರೆ,' ಎಂದು ಹೇಳಿದರು. ಪಂದ್ಯದ ಗೆಲುವಿನ ಶ್ರೇಯವನ್ನು ತಂಡದ ಬೌಲರ್‌ಗಳಿಗೆ ಅರ್ಪಿಸಿದ ಶಿಖರ್‌ ಧವನ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರನ್ನು ಶ್ಲಾಘಿಸಿದರು ಹಾಗೂ ಮೊದಲನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ ತಮ್ಮ ಡೆಲ್ಲಿ ಕ್ಯಾಪಿಟಲ್ಸ್‌ ಸಹ ಓಪನರ್ ಪೃಥ್ವಿ ಶಾ ಅವರಿಗೆ ಬೆಂಬಲ ವ್ಯಕ್ತಪಡಿಸಿ, ಮುಂದಿನ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂದು ಹೇಳಿದರು. "ಶ್ರೀಲಂಕಾ ತಂಡ ಕೂಡ ಅತ್ಯುತ್ತಮವಾಗಿ ಆಡಿತ್ತು. ಆದರೆ, ನಮ್ಮ ಸ್ಪಿನ್ನರ್‌ಗಳು ಪಂದ್ಯಕ್ಕೆ ಟರ್ನಿಂಗ್ ತಂದುಕೊಡುತ್ತಾರೆಂದು ನಮಗೆ ಮೊದಲೇ ಗೊತ್ತಿತ್ತು. ಯುಜ್ವೇಂದ್ರ ಚಹಲ್‌ ಹಾಗೂ ಕೃಣಾಲ್‌ ಪಾಂಡ್ಯ ಅತ್ಯುತ್ತಮವಾಗಿ ಬೌಲ್‌ ಮಾಡಿದ್ದರು. ಜತೆಗೆ ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ ಕೂಡ ಅದ್ಭುತವಾಗಿತ್ತು. ವರುಣ್‌ ಚಕ್ರವರ್ತಿ ಬೌಲಿಂಗ್‌ ಎದುರಿಸುವುದು ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗಿತ್ತು. ಇದಕ್ಕೂ ಮುನ್ನ ನೆಟ್ಸ್‌ನಲ್ಲಿ ವರುಣ್‌ ಬೌಲಿಂಗ್‌ ಎದುರಿಸುವುದು ನನಗೂ ಕೂಡ ಕಠಿಣವಾಗಿತ್ತು. ಇನ್ನು ಪೃಥ್ವಿ ಶಾ ಮುಂದಿನ ಪಂದ್ಯದಲ್ಲಿ ಖಂಡಿತಾ ಕಮ್‌ಬ್ಯಾಕ್‌ ಮಾಡಲಿದ್ದಾರೆ," ಎಂದು 36 ಎಸೆತಗಳಲ್ಲಿ 46 ರನ್‌ ಗಳಿಸಿದ್ದ ಧವನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೊದಲನೇ ಪಂದ್ಯದ ಗೆಲುವಿನ ಸಂಭ್ರಮದಲ್ಲಿರುವ ಭಾರತ ತಂಡ, ಮಂಗಳವಾರ ಶ್ರೀಲಂಕಾ ವಿರುದ್ಧ ಎರಡನೇ ಹಣಾಹಣಿಗೆ ಸಜ್ಜಾಗಲಿದೆ. ಜತೆಗೆ, ಎರಡನೇ ಪಂದ್ಯ ಗೆದ್ದು ಟಿ20 ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zwBgVl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...