ಅಬ್ಬರಿಸುತ್ತಿದ್ದಾನೆ ವರುಣ: ಪ್ರವಾಹದಿಂದ ತತ್ತರಿಸಿದ ಉತ್ತರ ಕರ್ನಾಟಕದ ಸ್ಥಿತಿ ಹೇಗಿದೆ?

ಬೆಂಗಳೂರು: ರಾಜ್ಯದ ಬಹುತೇಕ ಭಾಗ ಮಳೆಯ ಆರ್ಭಟದಿಂದ ತತ್ತರಿಸಿದೆ. ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಪರಿಸ್ಥಿತಿ ತಲೆದೋರಿದ್ದು, ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. , ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಹೆಚ್ಚಿನ ಪ್ರದೇಶಗಳು ನೆರೆ ಹಾವಳಿಗೆ ತುತ್ತಾಗಿವೆ. ಮಹಾರಾಷ್ಟ್ರ ಮತ್ತು ಭಾಗದಲ್ಲಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹಲವೆಡೆ ಸೇತುವೆಗಳು ಜಲಾವೃತವಾಗಿವೆ. ಇದರಿಂದ ಸಂಚಾರ ಸ್ಥಗಿತಗೊಂಡಿದೆ. ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಮುಧೋಳ ತಾಲೂಕಿನ 5 ಸೇತುವೆಗಳು ಜಲಾವೃತವಾಗಿವೆ. ಮಿರ್ಜಿ-ಅಕ್ಕಿಮರಡಿ, ಮಹಾಲಿಂಗಪೂರ-ಯಾದವಾಡ್, ನಂದಗಾವ್-ಮಹಾಲಿಂಗಪೂರ, ಒಂಟಗೊಡಿ - ಸೋರಗಾಂವ, ಢವಳೇಶ್ವರ -ಮಹಾಲಿಂಗಪೂರ ಸೇತುವೆ ಮುಳುಗಡೆಯಾಗಿವೆ. 9 ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಮಿರ್ಜಿ, ಮಲ್ಲಾಪೂರ, ಒಂಟಗೋಡಿ, ಚನಾಳ, ನಾಗರಾಳ, ಅಕ್ಕಿಮರಡಿ, ನಂದಗಾಂವ ಗ್ರಾಮಗಳ ಗ್ರಾಮಸ್ಥರು ಹೊರ ಜಗತ್ತಿಗೆ ಬರಲು ಹತ್ತಾರು ಮೈಲು ಹೆಚ್ಚು ದೂರ ಸಂಚರಿಸಿ ತೆರಳಬೇಕಾಗಿದೆ. ಘಟಪ್ರಭಾ ನದಿಯಲ್ಲಿ ರಾತ್ರಿ ನೀರಿನ ಮಟ್ಟ ಹೆಚ್ಚಳವಾಗಿದೆ. ಹಿಡಕಲ್ ಅಣೆಕಟ್ಟೆಯಿಂದ 1 ಲಕ್ಷ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಗೆ 2 ಲಕ್ಷ 17 ಸಾವಿರ ಕ್ಯೂಸೆಕ್ಸ್ ನೀರು ಹರಿ ಬಂದಿದ್ದು, ಕೃಷ್ಣಾ ನದಿ ತೀರದ ಗ್ರಾಮಗಳಿಗೆ ನಿಲ್ಲದ ಪ್ರವಾಹ ಭೀತಿ ಎದುರಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದಿಂದ 2 ಲಕ್ಷ 17 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗಿದೆ. ಚಿಕ್ಕಪಡಸಲಗಿ ಸೇತುವೆ ಬಳಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಗದಗದಲ್ಲಿ ಹೈ ಅಲರ್ಟ್ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಗದಗ ಜಿಲ್ಲೆಯ ನದಿ ಪಾತ್ರದಲ್ಲಿರುವ ಒಟ್ಟು 30 ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಈ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನರಗುಂದ ತಾಲೂಕಿನ 16 ಗ್ರಾಮಗಳು ಹಾಗೂ ರೋಣ ತಾಲೂಕಿನ 14 ಗ್ರಾಮಗಳಿಗೆ ಹೈ ಅಲರ್ಟ್ ಘೋಷಿಸಲಾಗಿದ್ದು, ಸ್ಥಳಾಂತರವಾಗುವಂತೆ ನದಿಯ ದಡದಲ್ಲಿರುವ ಗ್ರಾಮಸ್ಥರಿಗೆ ಜಿಲ್ಲಾಡಳಿತ ಮನವಿ ಮಾಡಿದೆ. ದೇವದುರ್ಗದಲ್ಲಿ ಸೇತುವೆ ಮೇಲೆ ನೀರುರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಪ್ಪರದ ಶ್ರೀನರಸಿಂಹ ದೇಗುಲವನ್ನು ಕೃಷ್ಣಾ ನದಿಯ ಪ್ರವಾಹ ಸುತ್ತುವರಿದಿದೆ. ಧಾರ್ಮಿಕ ಚಟುವಟಿಕೆಗೆ ಅಡಚಣೆಯಾಗಿದ್ದು. ಭಕ್ತರ ದರ್ಶನಕ್ಕೆ ಅವಕಾಶವಿಲ್ಲದಂತಾಗಿದೆ. ರಾಯಚೂರು ಜಿಲ್ಲೆ ದೇವದುರ್ಗದ ಬಳಿಯ ಹೂವಿನಹೆಡಗಿ ಸೇತುವೆ ಮೇಲೆ ಕೃಷ್ಣಾ ನದಿ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ದೇವದುರ್ಗದಿಂದ ಕಲಬುರಗಿಗೆ ದೇವದುರ್ಗ ತಿಂಥಿಣಿ ಮೂಲಕ ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರ ನಡೆಯುತ್ತಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಮೂರು ಲಕ್ಷ ಕ್ಯುಸೆಕ್ ನೀರು ಹೊರಹರಿಸಲಾಗುತ್ತಿದೆ. ಸ್ವಾಮೀಜಿಗಳ ರಕ್ಷಣೆತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠ ಮಾರ್ಕಂಡೇಯ ನದಿ ನೀರಿನಲ್ಲಿಮುಳುಗಿರುವುದರಿಂದ ಮಠದ ಶ್ರೀ ಮರೇಶ್ವರ ಸ್ವಾಮಿಜಿ ಹಾಗೂ ನಾಲ್ವರನ್ನು ಎನ್‌ಡಿಆರ್‌ಎಫ್‌ ತಂಡದ ಸಿಬ್ಬಂದಿ ಬೋಟ್‌ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಗುರುವಾರ ರಾತ್ರಿ ವೇಳೆಯಲ್ಲಿಮಾರ್ಕಂಡೇಯ ನದಿ ಹರಿವಿನ ಪ್ರಮಾಣ ಜಾಸ್ತಿಯಾಗಿದ್ದು, ಶುಕ್ರವಾರ ಬೆಳಗ್ಗೆ ಮಠದ ಸುತ್ತಲು ನೀರು ನಿಂತು ನಡುಗಡ್ಡೆಯಂತಾಗಿತ್ತು. ಎನ್‌ಡಿಆರ್‌ಎಫ್‌ ತಂಡದ ಸಿಬ್ಬಂದಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಮಠದ ಶ್ರೀಗಳು ಹಾಗೂ ಸೇವಕರನ್ನು ರಕ್ಷಿಸಿದ್ದಾರೆ. ಬೆಳಗಾವಿಯಲ್ಲಿ ಕಾಳಜಿ ಕೇಂದ್ರಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿಗೆ ಒಳ ಹರಿವು ಹೆಚ್ಚಳವಾಗಿದೆ. ಹೀಗಾಗಿ ಇನ್ನು ಹೊರ ಹರಿವು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಮತ್ತಷ್ಟು ಗ್ರಾಮಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದು, ಮುಂಜಾಗ್ರತೆ ದೃಷ್ಟಿಯಿಂದ ಜಿಲ್ಲಾಡಳಿತವು ನದಿಯ ಪಾತ್ರದಲ್ಲಿರುವ ಗ್ರಾಮಗಳಿಗೆ ಕಾಳಜಿ ಕೇಂದ್ರ ತೆರೆದಿದೆ. ಬೆಳಗಾವಿ ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದಲ್ಲಿಒಟ್ಟು 8 ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲಿ ಒಂದು ಮನೆ ಸಂಪೂರ್ಣ ಬಿದ್ದಿದೆ. ಎರಡು ಕಾಳಜಿ ಕೇಂದ್ರ ತೆರೆಯಲಾಗಿದ್ದು, ಶುಕ್ರವಾರ ಮಧ್ಯಾಹ್ನದವರೆಗೆ 155 ಜನರಿಗೆ ಆಶ್ರಯ ನೀಡಲಾಗಿತ್ತು. ಕಾಳಜಿ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲರಿಗೂ ಮಾಸ್ಕ್‌ ಕೂಡ ವಿತರಿಸಲಾಗಿದೆ. ಮನೆಗಳಿಗೆ ನುಗ್ಗಿದ ನೀರುಶುಕ್ರವಾರ ಮಳೆ ತುಸು ಕಡಿಮೆಯಾಗಿದ್ದರಿಂದ ಜಲಾವೃತವಾಗಿದ್ದ ಬಳ್ಳಾರಿ ನಾಲಾ ಅಂಚಿನ ಪ್ರದೇಶಗಳಲ್ಲಿ ಸಂಜೆ ವೇಳೆಗೆ ನೀರು ಕಡಿಮೆಯಾಗಲಾರಂಭಿಸಿತ್ತು. ಗುರುವಾರ ರಾತ್ರಿಯಿಂದ ಶುಕ್ರವಾರದವರೆಗೆ ಸುರಿದ ಮಳೆಯಿಂದಾಗಿ ಶಿವಾಜಿ ನಗರದಲ್ಲಿನ ತಗ್ಗು ಪ್ರದೇಶದ ಸುಮಾರು 150ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇಲ್ಲಿನ ಕೆರೆಯ ನಾಲಾ ತುಂಬಿದ್ದರಿಂದ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ರಾಮಚಂದ್ರ ಚೌಗಲಾ ಎಂಬುವರ ಮನೆ ಕುಸಿದು ಬಿದ್ದಿದೆ. ಶಿವಬಸವನಗರ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಜನರು ಮಳೆ ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡು ಬಂತು. ವೀರಭದ್ರನಗರದ ಕೆಲವು ತಗ್ಗು ಪ್ರದೇಶದ ಮನೆಗಳಿಗೆ ಗುರುವಾರ ತಡರಾತ್ರಿ ಮಳೆ ನೀರು ನುಗ್ಗಿದೆ. ಗಾಂಧಿನಗರದ ಹಲವು ತಗ್ಗು ಪ್ರದೇಶದ ಗಲ್ಲಿಗಳಲ್ಲಿನ ಸುಮಾರು 60ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಕಣಬರಗಿಯಲ್ಲಿಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಸಾಯಿ ಬಡಾವಣೆಯಲ್ಲಿಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಬಳ್ಳಾರಿ ನಾಲಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಸಾಯಿ ನಗರದ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಖಾನಾಪುರ ರಸ್ತೆಯ ಪೀರನವಾಡಿ ಗ್ರಾಮದಲ್ಲಿನ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದೆ. ರಸ್ತೆ ಮಧ್ಯದಲ್ಲಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಸುತ್ತಲೂ ನೀರು ಆವರಿಸಿದೆ. ಬೆಳಗಾವಿ-ಗೋವಾ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಖಾನಾಪುರ/ಲೋಂಡಾ/ಬೀಡಿ ತಾಲೂಕಿನಲ್ಲಿಭಾರಿ ಪ್ರಮಾಣದಲ್ಲಿಮಳೆಯಾಗಿದ್ದು, ನದಿಗಳಲ್ಲಿ ಮಹಾಪೂರ ಏರ್ಪಟ್ಟಿದೆ. ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆ ಮತ್ತು ಸೇತುವೆಗಳ ಮೇಲೆ ಅಪಾಯದ ಮಟ್ಟದಲ್ಲಿನೀರು ಹರಿಯುತ್ತಿದೆ. ತಾಲೂಕಿನ ಚೋರ್ಲಾ ಘಟ್ಟ ಪ್ರದೇಶದಲ್ಲಿಗುರುವಾರ ರಾತ್ರಿ ಭೂ ಕುಸಿತ ಉಂಟಾಗಿದ್ದರಿಂದ ಶುಕ್ರವಾರದಿಂದ ಬೆಳಗಾವಿ-ಗೋವಾ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಲಪ್ರಭಾ, ಪಾಂಡರಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಪರಿಣಾಮ ಖಾನಾಪುರ ಪಟ್ಟಣದ ಪೊಲೀಸ್‌ ತರಬೇತಿ ಶಾಲೆಯ ವಸತಿಗೃಹಗಳು, ದುರ್ಗಾನಗರ, ಕೆಎಸ್‌ಆರ್‌ಪಿ ರಸ್ತೆ, ಆಶ್ರಯ ಕಾಲನಿ ಬಡಾವಣೆಗಳು, ಮಾರುತಿ ನಗರ ಮತ್ತು ತಾಲೂಕಿನ ಲೋಂಡಾ ಗ್ರಾಮದ ಗಾಂಧಿನಗರ ಮತ್ತಿತರ ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಸಂತ್ರಸ್ತರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸತತ ಮಳೆಯ ಪರಿಣಾಮ ಮಲಪ್ರಭಾ ನದಿಯಲ್ಲಿಮಹಾಪೂರ ಏರ್ಪಟ್ಟಿದೆ. ನದಿಗೆ ನಿರ್ಮಿಸಿದ ಎಲ್ಲಸೇತುವೆಗಳ ಮೇಲೂ ನೀರು ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ, ಜಾಂಬೋಟಿ-ಜತ್ತ, ಸಿಂಧನೂರು- ಹೆಮ್ಮಡಗಾ, ಬೆಳಗಾವಿ-ತಾಳಗುಪ್ಪ, ನಾಗರಗಾಳಿ-ಕಟಕೋಳ, ಚೋರ್ಲಾ- ಬೆಳಗಾವಿ ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದೆ. ತಾಲೂಕಿನ ಮಲಪ್ರಭಾ, ಪಾಂಡರಿ, ಮಹದಾಯಿ ನದಿಗಳು, ಕೋಟ್ನಿ, ಅಲಾತ್ರಿ, ಮಂಗೇತ್ರಿ, ಕುಂಬಾರ, ತಟ್ಟೀ, ಪಣಸೂರಿ, ಬೈಲ್‌, ಕಳಸಾ ಹಾಗೂ ಬಂಡೂರಿ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಲೋಂಡಾ, ಸಾವರಗಾಳಿ, ಸಂಗರಗಾಳಿ, ಗುಂಜಿ, ನಿಡಗಲ್‌, ಕಕ್ಕೇರಿ, ಭುರಣಕಿ, ನಾಗರಗಾಳಿ ಮತ್ತಿತರ ಗ್ರಾಮಗಳ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸೇತುವೆ ಮುಳುಗಡೆನಾಗರಗಾಳಿ, ಗುಂಜಿ, ಲೋಂಡಾ, ಹೆಮ್ಮಡಗಾ, ನೇರಸೆ, ನೀಲಾವಡೆ, ಜಾಂಬೋಟಿ, ಕಣಕುಂಬಿ ಅರಣ್ಯಪ್ರದೇಶದ 60 ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿದುಕೊಂಡಿವೆ. ಮಲಪ್ರಭಾ ನದಿಗೆ ನಿರ್ಮಿಸಿದ ನೀಲಾವಡೆ- ಮಳವ, ಪಾರಿಶ್ವಾಡ- ಇಟಗಿ, ದಾರೋಳಿ- ಮೋದೆಕೊಪ್ಪ, ಕುಸಮಳಿ- ಜಾಂಬೋಟಿ, ಕರಂಬಳ-ಜಳಗಾ, ಅಸೋಗಾ- ಭೋಸಗಾಳಿ, ತೋರಾಳಿ-ಹಬ್ಬನಹಟ್ಟಿ, ಅಮಟೆ- ಗೋಲ್ಯಾಳಿ, ಚಾಪಗಾಂವ-ಯಡೋಗಾ, ಚಿಕ್ಕಮುನವಳ್ಳಿ- ಚಿಕ್ಕಹಟ್ಟಿಹೊಳಿ ಸೇತುವೆಗಳ ಮೇಲೆ ಐದಾರು ಅಡಿಗಳಷ್ಟು ನೀರು ಹರಿಯುತ್ತಿದೆ. ಹಳ್ಳ-ಕೊಳ್ಳಗಳ ಸೇತುವೆಗಳ ಮೇಲೂ ನೀರು ಹರಿದು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಾಪೋಲಿ-ಕಾಮತಗಾ ಭಾಗದ ಪಾಂಡರಿ ನದಿಯ ಸೇತುವೆ, ಗುಂಜಿ-ಅಂಬೇ ವಾಡಿ ಸೇತುವೆ ಮೇಲೆ ಸಹ ನೀರು ಹರಿಯುತ್ತಿದೆ. ಪಟ್ಟಣದ ನದಿತೀರದ ಇಸ್ಕಾನ್‌ ದೇವಾಲಯ, ಮಹಾದೇವ ಮಂದಿರ ಮತ್ತು ರಾಮ ಮಂದಿರಗಳ ಆವರಣದಲ್ಲಿಮಲಪ್ರಭಾ ನದಿ ನೀರು ನುಗ್ಗಿದೆ. ತಾಲೂಕಿನ ಹಬ್ಬನಹಟ್ಟಿಯ ಆಂಜನೇಯ ಮಂದಿರ, ಇಟಗಿಯ ಮರುಳಶಂಕರ ಮಂದಿರಗಳು ಮುಳುಗಡೆಗೊಂಡಿವೆ. ಪಾರಿಶ್ವಾಡ ಸಮೀಪ ಮುಳುಗಿದ ಸೇತುವೆಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪಾರಿಶ್ವಾಡ-ಇಟಗಿ-ಬೀಡಿ ಸಂಪರ್ಕಿಸುವ ಪಾರಿಶ್ವಾಡ ಸಮೀಪದ ಮಲಪ್ರಭಾ ನದಿ ಸೇತುವೆ ಮುಳುಗಿ ಜನಸಂಚಾರ ಸ್ಥಗಿತಗೊಂಡಿದೆ. ಇಟಗಿ ಗ್ರಾಮದ ಐತಿಹಾಸಿಕ ದೊಡ್ಡ ಕೆರೆ ತುಂಬಿ ಕೋಡಿ ಹರಿದಿದ್ದರಿಂದ ಭತ್ತ, ಕಬ್ಬಿನ ಗದ್ದೆಗಳು ಜಲಾವೃತಗೊಂಡಿವೆ. ಇಟಗಿ ಗ್ರಾಮ ಸಂಪರ್ಕಿಸುವ ಇಟಗಿ- ಇಟಗಿಕ್ರಾಸ್‌ ಮಧ್ಯದ ತಟ್ಟಿಹಳ್ಳದ ಸೇತುವೆ ಮುಳುಗಿ ಸಂಚಾರ ಬಂದ್‌ ಆಗಿದೆ. ಇಟಗಿ- ಬೋಗೂರು ತಟ್ಟಿಹಳ್ಳದ ಸೇತುವೆ ಮೇಲೆ ನೀರು ಬಂದ ಪರಿಣಾಮ ಬೋಗೂರು ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹುಬ್ಬಳ್ಳಿಯಲ್ಲಿ ವರುಣನ ಆರ್ಭಟಎರಡು ದಿನಗಳಿಂದ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಳ್ಳ ಕೊಳ್ಳಗಳು, ನದಿ ಮತ್ತು ಕೆರೆಗಳು ತುಂಬಿ ಹರಿಯುತ್ತಿವೆ. ಗುರುವಾರ ರಾತ್ರಿ ನಿರಂತರ ಮಳೆಯಾಗಿ ದ್ದರಿಂದ ತಗ್ಗು ಪ್ರದೇಶದಲ್ಲಿರುವ ಪಟ್ಟಣ ಹಾಗೂ ಗಾಂಧಿನಗರದಲ್ಲಿನ ಮನೆಗಳಲ್ಲಿನೀರು ನುಗ್ಗಿದೆ. ಪಟ್ಟಣದ ವೀರಾಪೂರ ರಸ್ತೆಗೆ ಹೊಂದಿಕೊಂಡು ಇರುವ ಕೆರೆ ತುಂಬಿ ಕೆರೆ ಕಟ್ಟೆ ಒಡೆಯುವ ಸಾಧ್ಯತೆ ಹೆಚ್ಚಾಗಿದ್ದರಿಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜೆಸಿಬಿಯಿಂದ ಕಾಲುವೆ ನಿರ್ಮಿಸಿ ಹೆಚ್ಚಿನ ನೀರು ಹೊರ ಹೋಗುವಂತೆ ಮಾಡಿದರು. ತಹಸೀಲ್ದಾರ್‌ ಸೋಮಶೇಖರ ಹಾಲಗಿ ಅವರು ಮಲಪ್ರಭಾ ನದಿ ತೀರದ ಜನರನ್ನು ಭೇಟಿ ಮಾಡಿ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮನವಿ ಮಾಡಿದರು. ಬಳಿಕ ಗ್ರಾಮಸ್ಥರು ತಮ್ಮ ಜಾನುವಾರು ಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಿದರು.ಮಳೆಯಿಂದ ಗಂಗಪ್ಪ ಸಣ್ಣಕ್ಕಿ, ಮಹ್ಮದಗೌಸ ಆನೆವಾಲೆ, ಗಂಗಪ್ಪ ದೇಮಟ್ಟಿ ಹಾಗೂ ಷಣ್ಮುಖ ಪಾಟೀಲ ಎಂಬುವವರ ಮನೆಗಳ ಗೋಡೆ ಕುಸಿದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


from India & World News in Kannada | VK Polls https://ift.tt/3wWkXzv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...