ಬೆಂಗಳೂರು: ಯಡಿಯೂರಪ್ಪ ಅವರನ್ನು ಬದಲಿಸಬೇಕೆಂದು ಲಿಂಗಾಯತ ಶಾಸಕರೇ ಪ್ರಯತ್ನ ಪಟ್ಟಿದ್ದಾರೆ. ಆವಾಗ ಸ್ವಾಮೀಜಿಗಳು ಬುದ್ಧಿವಾದ ಹೇಳಬೇಕಿತ್ತಲ್ಲವಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ಮೊದಲಿನಿಂದಲೂ ಹೈಕಮಾಂಡ್ ಸೂಚನೆ ಪಾಲಿಸುವುದಾಗಿ ಹೇಳುತ್ತಿದ್ದಾರೆ. ಇದೀಗ ಅವರು ತಮ್ಮ ಪರವಾಗಿ ಯಾರೂ ಹೋರಾಟ ಮಾಡಬಾರದು ಎಂದಿದ್ದಾರೆ. ಅವರ ಈ ಹೇಳಿಕೆ ನನಗೆ ಖುಷಿ ತಂದಿದೆ. ಲಿಂಗಾಯತರಲ್ಲಿ ಪ್ರಮುಖ ಶಾಸಕರೇ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ಈಗ ಲಿಂಗಾಯತರು ಎಂದುಕೊಂಡು ಬಂದಿದ್ದಾರೆ ಎಂದು ಆಕ್ಷೇಪಿಸಿದರು. ಬಿಜೆಪಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ರೈತ ಹೋರಾಟವನ್ನು ಹೃದಯಕ್ಕೆ ಮುಟ್ಟುವಂತೆ ಮಾಡಿದವರೇ ಯಡಿಯೂರಪ್ಪ. ಆದರೆ, ಕೆಲವರು ನಿಮ್ಮ ಬಿಟ್ಟರೆ ಯಾರಿಲ್ಲವೆಂದು ಅವರ ತಲೆಗೆ ತುಂಬಿ ಕೆಜೆಪಿ ಕಟ್ಟುವಂತೆ ಮಾಡಿದರು. ಈ ಬಗ್ಗೆ ಅವರೇ ನನ್ನ ಬಳಿ ಒಮ್ಮೆ ಹೇಳಿಕೊಂಡಿದ್ದಾರೆ. ನನ್ನ ಕ್ಯಾಬಿನೆಟ್ನಲ್ಲಿದ್ದವರೇ ದಾರಿ ತಪ್ಪಿಸಿದರು ಎಂದಿದ್ದರು ಎಂದು ತಿಳಿಸಿದರು.
from India & World News in Kannada | VK Polls https://ift.tt/3wX1hvm