ರಾಜ್ಯಸಭೆಯಲ್ಲಿ ಗದ್ದಲ: ಸಚಿವರ ಕೈಯಿಂದ ಕಾಗದ ಕಿತ್ತು ಹರಿದ ಸಂಸದ ಶಂತನು ಸೇನ್ ಅಮಾನತು

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಕುರಿತು ಹೇಳಿಕೆ ನೀಡುವಾಗ ಐಟಿ ಸಚಿವ ಅವರ ಕೈಯಿಂದ ಕಾಗದ ಪತ್ರಗಳನ್ನು ಕಸಿದು ಹರಿದು ಎಸೆಯುವ ಮೂಲಕ ಸದನಕ್ಕೆ ಅಗೌರವ ತೋರಿದ್ದಕ್ಕಾಗಿ ಟಿಎಂಸಿ ಸಂಸದ ಅವರನ್ನು ಮುಂಗಾರು ಅಧಿವೇಶನದ ಉಳಿದ ಕಲಾಪಗಳಿಂದ ಅಮಾನತು ಮಾಡಲಾಗಿದೆ. ಶುಕ್ರವಾರ ಕಲಾಪ ಆರಂಭವಾದ ಬಳಿಕ ಸಂಸದೀಯ ವ್ಯವಹಾರಗಳ ರಾಜ್ಯಖಾತೆ ಸಚಿವ ವಿ. ಮುರಳೀಧರನ್ ಅವರು ಸೇನ್ ಅವರ ಅಮಾನತಿಗೆ ನಿಲುವಳಿ ಸೂಚನೆ ಮಂಡಿಸಿದರು. ಧ್ವನಿ ಮತದಿಂದ ನಿಲುವಳಿಯನ್ನು ಅಂಗೀಕರಿಸಲಾಯಿತು. ಸದನದಿಂದ ಹೊರಹೋಗುವಂತೆ ಸೇನ್ ಅವರಿಗೆ ಅಧ್ಯಕ್ಷ ಸೂಚಿಸಿದರು. 'ಗುರುವಾರ ನಡೆದ ಘಟನೆಯಿಂದ ತೀವ್ರ ನೋವಾಗಿದೆ. ಸಚಿವರ ಕೈಯಿಂದ ಕಾಗದಗಳನ್ನು ಕಸಿದುಕೊಂಡು ಹರಿದು ಹಾಕುವ ಮೂಲಕ ಸದನದ ಕಲಾಪ ಕೆಳಮಟ್ಟಕ್ಕೆ ಹೋಗಿರುವುದು ದುರದೃಷ್ಟಕರ. ಇಂತಹ ಘಟನೆಗಳು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ಸ್ಪಷ್ಟ ಹಲ್ಲೆಯಾಗಿದೆ' ಎಂದು ವೆಂಕಯ್ಯ ನಾಯ್ಡು ಹೇಳಿದರು. 'ಶಂತನು ಸೇನ್, ದಯವಿಟ್ಟು ಸದನದಿಂದ ಹೊರನಡೆಯಿರಿ. ಈ ಸದನ ನಡೆಯಲು ಅವಕಾಶ ನೀಡಿ' ಎಂದು ಅವರು ಸೂಚಿಸಿದರು. ದೈನಂದಿನ ಕಲಾಪದಲ್ಲಿ ಪಟ್ಟಿ ಮಾಡದೆಯೇ ನಿಲುವಳಿ ಮಂಡಿಸಲಾಗಿದೆ ಎಂದು ಟಿಎಂಸಿ ಸಂಸದರು ಪ್ರತಿಭಟನೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿದರು. ಸಚಿವರೊಬ್ಬರು ಸೇನ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಟಿಎಂಸಿ ಸಂಸದ ಸುಖೇಂದು ಶೇಖರ್ ರಾಯ್ ಆರೋಪಿಸಿದರು. ಅದು ಸದನ ಮುಂದೂಡಿಕೆಯಾದ ಬಳಿಕ ನಡೆದ ಘಟನೆ ಎಂದು ನಾಯ್ಡು ಪ್ರತಿಕ್ರಿಯಿಸಿದರು. ಈ ನಡುವೆ ಸದನವನ್ನು ಮುಂದೂಡಲಾಯಿತು. ಆದರೆ ಮತ್ತೆ ಸಭೆ ಸೇರಿದ ಬಳಿಕವೂ ಶಂತನು ಸೇನ್ ಅಲ್ಲಿಯೇ ಇರುವುದನ್ನು ಕಂಡ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್, ಅಮಾನತುಗೊಂಡಿರುವುದರಿಂದ ಸದನದಿಂದ ಹೊರನಡೆಯುವಂತೆ ಅವರಿಗೆ ಮನವಿ ಮಾಡಿದರು. ಆದರೆ ಅದಕ್ಕೆ ಸೇನ್ ನಿರಾಕರಿದರು. ಬಳಿಕ ಗದ್ದಲದ ನಡುವೆ ಮಧ್ಯಾಹ್ನಕ್ಕೆ ಸದನವನ್ನು ಮುಂದೂಡಲಾಯಿತು.


from India & World News in Kannada | VK Polls https://ift.tt/3hX7ItW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...