ಹೊಸದಿಲ್ಲಿ: ಇದುವರೆಗೂ ತಮ್ಮ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಭಾರತ ಸೋತಿತ್ತು. ಇದಕ್ಕೂ ಮುನ್ನ 2017 ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಅಂತಿಮ ಹಂತದಲ್ಲಿ ಟೀಮ್ ಇಂಡಿಯಾ ಎಡವಿತ್ತು. ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಒಂದೂ ಐಸಿಸಿ ಟ್ರೋಫಿ ಗೆಲ್ಲದ ಬಗ್ಗೆ ಹಲವರು ಟೀಕಿಸಿದ್ದಾರೆ. ಆದರೆ, ಪಾಕಿಸ್ತಾನ ಮಾಜಿ ಆಟಗಾರ , ಬಳಿಕ ಭಾರತ ತಂಡಕ್ಕೆ ಅತ್ಯುತ್ತಮ ನಾಯಕ ವಿರಾಟ್ ಕೊಹ್ಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೊಹ್ಲಿ ನಾಯಕತ್ವದಿಂದ ಕೆಳಗೆ ಇಳಿಯಬೇಕೆಂದು ಬಯಸುವವರು ಒಮ್ಮೆ ಅವರ ನಾಯಕತ್ವದಲ್ಲಿ ಭಾರತ ತಂಡದ ಸಾಧನೆಯನ್ನು ನೋಡಿ ಹಾಗೂ ಎಂತಹ ಕ್ಲಾಸ್ ಆಟಗಾರರನ್ನು ತಂಡಕ್ಕೆ ಪರಿಚಯಿಸಿದ್ದಾರೆಂಬುದನ್ನು ನೋಡಿ ಎಂದಿದ್ದಾರೆ. ಕ್ರೀಡಾ ನಿರೂಪಕಿ ಸ್ವರಾ ಸವೇರಾ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಅಕ್ಮಲ್, "ಮಹೇಂದ್ರ ಸಿಂಗ್ ಧೋನಿ ಬಳಿಕ ವಿರಾಟ್ ಕೊಹ್ಲಿ ಅತ್ಯುತ್ತಮ ನಾಯಕ. ಅವರು 70 ಶತಕಗಳನ್ನು ಸಿಡಿಸಿದ್ದಾರೆ. ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದಾರೆ. ಈ ಎರಡರಲ್ಲೂ ಭಾರತ ಸೋತಿದೆ ಅದಕ್ಕೆ ಅವರು ಏನು ಮಾಡಬೇಕು? ಐದು ವರ್ಷಗಳ ಕಾಲ ಭಾರತ ನಂ.1 ಸ್ಥಾನದಲ್ಲಿಯೇ ಉಳಿದಿತ್ತು. ಅವರ ಸಾಧನೆ, ಅವರ ಸೇವೆ ಹಾಗೂ ಅವರ ನಾಯಕತ್ವ ಭಯಾನಕವಾಗಿದೆ. ಅದರ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರು ಅಸಾಧಾರಣ ಆಟಗಾರನಾಗಿದ್ದು, ತಯಾರಿ ನಡೆಸುವ ಹಾದಿ ಅತ್ಯುತ್ತಮವಾಗಿದೆ," ಎಂದು ಕೊಂಡಾಡಿದರು. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಭಾರತದ ಸೋಲಿನ ಬಗ್ಗೆ ಮಾತನಾಡಿದ ಅಕ್ಮಲ್, ಪಂದ್ಯದ ಫಲಿತಾಂಶವು ಎಲ್ಲಾ ದಿನಗಳ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ವಿರಾಟ್ ಕೊಹ್ಲಿ ಜಾಗಕ್ಕೆ ನೀವು ಬೇರೆ ಆಟಗಾರನನ್ನು ನೇಮಿಸಿದರೆ, ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲುವ ಬಗ್ಗೆ ಯಾವುದೇ ಗ್ಯಾರೆಂಟಿ ಇಲ್ಲ ಎಂದಿದ್ದಾರೆ. "ಅವರು(ಕೊಹ್ಲಿ) ಅದ್ಭುತ ಆಟಗಾರ, ಅದ್ಭುತ ನಾಯಕ. ಹೀಗಿರುವಾಗ ನಾಯಕತ್ವ ಬದಲಾವಣೆ ಮಾಡುವುದಾದರೆ, ಭಾರತ ತಂಡದ ಐಸಿಸಿ ಟ್ರೋಪಿ ಗೆಲುವಿನ ಬಗ್ಗೆ ಖಚಿತತೆ ಇರುವುದಿಲ್ಲ. ಇವೆಲ್ಲವೂ ಅದೃಷ್ಟವನ್ನು ಅವಲಂಬಿಸಿರುತ್ತವೆ. ಬೆರಳು ತೋರಿಸುವುದು ಸುಲಭ, ಅಂತಹವರಿಗೆ ವಿಶೇಷವಾಗಿ ಕ್ರಿಕೆಟ್ ಬಗ್ಗೆ ಹೆಚ್ಚು ಗೊತ್ತಿರುವುದಿಲ್ಲ. ಅಲ್ಲದೆ, ಅಂತಹ ಮಂದಿ ಕನಿಷ್ಠ ಗಲ್ಲಿ ಕ್ರಿಕೆಟ್ನಲ್ಲಿಯೂ ತಂಡವನ್ನು ಮುನ್ನಡೆಸಿರುವುದಿಲ್ಲ, ಅಂತಹವರು ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ," ಎಂದು ಪಾಕ್ ಆಟಗಾರ ಕಿಡಿ ಕಾರಿದರು. "ಅಂತಹ ಯಾವುದೇ ವಿಷಯಗಳಿಂದ ಅವರು(ಕೊಹ್ಲಿ) ಪ್ರಭಾವಿತರಾಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಮಾನಸಿಕವಾಗಿ ಬಲಶಾಲಿ, ದೊಡ್ಡ ಸಾಧಕ. ಎಲ್ಲಾ ಮೂರು ಸ್ವರೂಪಗಳಲ್ಲಿ 50ಕ್ಕೂ ಹೆಚ್ಚಿನ ಸರಾಸರಿ ಹಾಗೂ ಹಲವು ಶತಕಗಳನ್ನು ಸಿಡಿಸಿರುವ ಕೊಹ್ಲಿಯ ಹತ್ತಿರ ಬರಲು ಯಾರಿಂದಲೂ ಸಾಧ್ಯವಿಲ್ಲ," ಎಂದು ಕಮ್ರಾನ್ ಅಕ್ಮಲ್ ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3wjjbrI