ಬೆಂಗಳೂರು: ಸಿಎಂ ಯಡಿಯೂರಪ್ಪ ಅವರನ್ನು ಸ್ವ ಪಕ್ಷದವರೇ ವಿರೋಧ ಮಾಡಿದ್ದರು. ಅದನ್ನು ಹೈಕಮಾಂಡ್ ನಿಯಂತ್ರಣ ಮಾಡಬೇಕಿತ್ತು. ಆದರೆ, ನಿಯಂತ್ರಿಸದೇ ಇದ್ದದ್ದು ಮಠಾಧೀಶರಿಗೆ, ಸಮಾಜಕ್ಕೆ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಠಾಧಿಪತಿಗಳ ಸಮಾವೇಶದಲ್ಲಿ ಮಾತನಾಡಿದರು. ಜಾತೀವಾದಿಗಳ ಕುತಂತ್ರದಿಂದ ಈ ಕೆಲಸ ನಡೆಯುತ್ತದೆ ಅದಕ್ಕೆ ಮಠಾಧೀಶರಿಂದ ವಿರೋಧವಿದೆ. ಜಾತಿವಾದಿಗಳು ಮತ್ತು ಪಕ್ಷ ವಿರೋಧಿಗಳ ವಿರುದ್ಧ ಕ್ರಮ ಆಗಲಿ ಎಂದು ಆಗ್ರಹಿಸಿದರು. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನೆರೆ ಕಾರಣ ಆ ಜಿಲ್ಲೆಯ ಮಠಾಧಿಪತಿಗಳು ಬರಲು ಸಾಧ್ಯವಾಗಿಲ್ಲ. ಆದರೆ, ಅಲ್ಲೇ ಇದ್ದು ಬೆಂಬಲ ಸೂಚಿಸಿದ್ದಾರೆ. ವರ್ತಮಾನದ ಸಮಸ್ಯೆ ಏನು ಎಂದು ಮಠಾಧಿಪತಿಗಳಿಗೆ ಗೊತ್ತು. ಇದು ಕೇವಲ ರಾಜಕೀಯ ಸಮಸ್ಯೆ ಅಲ್ಲ. ಕೋವಿಡ್, ನೆರೆ, ರಾಜಕೀಯ ವಿದ್ಯಮಾನಗಳು ಕೂಡ ಇವೆ. ಮಠ ಹಾಗೂ ಮಠಾಧಿಪತಿಗಳ ಬಗ್ಗೆ ಇರುವ ತಪ್ಪು ಕಲ್ಪನೆಗೆ ಉತ್ತರ ನೀಡಬೇಕಿದೆ, ಅಲ್ಲದೆ ಕೋವಿಡ್ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ ಎಂದು ಹೇಳಿದರು. ಬಿಎಸ್ ಯಡಿಯೂರಪ್ಪ ಬದಲಾವಣೆ ಸುದ್ದಿ ಬಂದಾಗ ನಾಡಿದ ಎಲ್ಲ ಸಮಾಜದ ಮಠಾಧಿಪತಿಗಳು ಬದಲಾವಣೆ ಮಾಡಬಾರದು ಎಂಬ ಸಂದೇಶ ನೀಡಿದ್ದಾರೆ. ಯಡಿಯೂರಪ್ಪ ಅವರಿಗೆ ಆಶೀರ್ವಾದ ಮಾಡಲು ಬಂದಾಗ ತಪ್ಪು ಕಲ್ಪನೆ ಬಿತ್ತುವ ಕೆಲಸ ನಡೆಯಿತು. ಈ ಬಗ್ಗೆಯೂ ಸಮಾವೇಶದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ವೇದಿಕೆ ಅಭಿನಂದಿಸುತ್ತದೆ ಎಂದರು. ಧಾರ್ಮಿಕ ತಾರತಮ್ಯ ಮಾಡದೆ ಎಲ್ಲರಿಗೂ ಅನುದಾನ ನೀಡಿದ್ದಾರೆ. ಯಾವುದೇ ಪಕ್ಷದ ಪರ ಹಾಗೂ ವಿರೋಧವಾಗಿಲ್ಲ ಈ ಸಮಾವೇಶ. ಕೇಂದ್ರ ಸರ್ಕಾರ ಹಾಗೂ ಹೈಕಮಾಂಡ್ ವಿರೋಧವಾಗಿಯೂ ಮಾಡುತ್ತಿಲ್ಲ. ನಮ್ಮದೇ ನಡೆಯುತ್ತೆ ಎಂಬ ನಡೆಗೆ ನಮ್ಮ ವಿರೋಧವಷ್ಟೇ. ಹಾಗೆಂದು ಇದು ಮಠಾಧೀಶರ ಶಕ್ತಿ ಪ್ರದರ್ಶನವೂ ಅಲ್ಲ. ಕೇವಲ ಸಂದೇಶ ರವಾನೆ ಅಷ್ಟೇ ಎಂದು ಹೇಳಿದರು. ಯಡಿಯೂರಪ್ಪ ಅವರಾಗಲಿ ಅಥವಾ ಅವರ ಮಕ್ಕಳಾಗಲಿ ಈ ಸಮಾವೇಶ ಆಯೋಜಿಸಲು ಹೇಳಿಲ್ಲ. ದೇವರ ಸಾಕ್ಷಿಯಾಗಿ ಬಿ.ಎಸ್. ಯಡಿಯೂರಪ್ಪ ಇಂತಹ ಸಮಾವೇಶ ಮಾಡಿ ಎಂದಿಲ್ಲ. ಆ ಪಕ್ಷದ ಯಾವ ವ್ಯಕ್ತಿಯೂ ಸೂಚನೆ ಕೊಟ್ಟಿಲ್ಲ. ಯಾವುದೇ ಒತ್ತಡಕ್ಕೆ ಮಣಿದೂ ಈ ಸಮಾವೇಶ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
from India & World News in Kannada | VK Polls https://ift.tt/3eT9WIK