ಅಮೃತಸರ: ಅವರು ಪ್ರದೇಶ ಸಮಿತಿ (ಪಿಪಿಸಿಸಿ) ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಶುಕ್ರವಾರ ಬಸ್ ಅಪಘಾತದಲ್ಲಿ ಮೂವರು ಕಾಂಗ್ರೆಸ್ ಸದಸ್ಯರು ಮೃತಪಟ್ಟಿದ್ದಾರೆ. ಪಂಜಾಬ್ನ ಮೋಗಾ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಂಡೀಗಡದಲ್ಲಿ ಸಿಧು ಅಧಿಕಾರ ಸ್ವೀಕಾರ ಸಮಾರಂಭ ನಡೆಯುತ್ತಿದ್ದು, ಸುಮಾರು 60 ಮಂದಿ ಈ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಜೈರಾದಿಂದ ಚಂಡೀಗಡಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ಖಾಸಗಿ ಮಿನಿ ಬಸ್ ಬೆಳಿಗ್ಗೆ 8 ಗಂಟೆ ಸುಮಾರಿಗೆ ಇನ್ನೊಂದು ಬಸ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಈ ವೇಳೆ ಬಸ್ ಅತಿ ವೇಗದಿಂದ ಸಾಗುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಸುಮಾರು 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಘಟನೆ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ತೀವ್ರ ನೋವು ವ್ಯಕ್ತಪಡಿಸಿದ್ದಾರೆ. 'ಓವರ್ ಎ ಕಪ್ ಆಫ್ ಟೀ'!ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ನೂತನ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಇಬ್ಬರೂ ಪಂಜಾಬ್ ಭವನದಲ್ಲಿ ಜತೆಯಾಗಿ ಚಹಾ ಸೇವಿಸುವ ಮೂಲಕ ತಮ್ಮ ನಡುವಿನ ವೈಷಮ್ಯದ ಕದನಕ್ಕೆ ವಿರಾಮ ಹಾಡುವ ಸೂಚನೆ ನೀಡಿದ್ದಾರೆ. ಸಿಧು ಅವರು ಪಂಜಾಬ್ ಭವನಕ್ಕೆ ಬಂದ ಕೆಲವು ನಿಮಿಷಗಳ ನಂತರ ಅಮರಿಂದರ್ ಆಗಮಿಸಿದರು. ನಂತರ ಚಹಾಕೂಟದಲ್ಲಿ ಜತೆಯಾಗಿ ಪಾಲ್ಗೊಂಡರು. ಹಲವು ವರ್ಷಗಳಿಂದಲೂ ನಡೆಯುತ್ತಿರುವ ಅಮರಿಂದರ್-ಸಿಧು ಸಂಘರ್ಷ ಈ ಮೂಲಕ ಅಂತ್ಯಗೊಳ್ಳಲಿದೆಯೇ ಅಥವಾ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎನ್ನುವುದು ಕುತೂಹಲ ಮೂಡಿಸಿದೆ. ತಮ್ಮ ಹಾಗೂ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಸಿಧು ಪದೋನ್ನತಿಗೆ ಅಮರಿಂದರ್ ವಿರೋಧ ವ್ಯಕ್ತಪಡಿಸಿದ್ದರೂ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಅದಕ್ಕೆ ಮನ್ನಣೆ ನೀಡದೆ ಸಿಧುವಿಗೆ ಪಂಜಾಬ್ ಕಾಂಗ್ರೆಸ್ ನಾಯಕತ್ವ ನೀಡಿದ್ದಾರೆ. ಇಬ್ಬರೂ ಮುಖಂಡರು ಚಹಾ ಕೂಟದಲ್ಲಿ ಭಾಗಿಯಾದ ಬಳಿಕ 'ಪಂಜಾಬ್ ಬಿಕ್ಕಟ್ಟು ಬಗೆಹರಿದಿದೆ, ನೀವು ಅದನ್ನು ನೋಡಬಹುದು' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಬೂದಿ ಮುಚ್ಚಿದ ಕೆಂಡಆದರೆ, ಪಂಜಾಬ್ ಕಾಂಗ್ರೆಸ್ ಇಬ್ಭಾಗವಾಗುವ ಭೀತಿಯೂ ಎದುರಾಗಿದೆ. ಅಮರಿಂದರ್ ಅವರ ಕ್ಷಮೆ ಕೋರದೆ ಇದ್ದರೆ ಸಿಧು ಅವರಿಗೆ ಬೆಂಬಲ ನೀಡುವುದಿಲ್ಲ ಎಂಬ ಮುಖ್ಯಮಂತ್ರಿ ಪರ ಗುಂಪು ಮುಂದಿಟ್ಟ ಬೇಡಿಕೆಯನ್ನು ಸಿಧು ನಿರ್ಲಕ್ಷಿಸಿದ್ದಾರೆ. ಅಲ್ಲದೆ, ಅಮರಿಂದರ್ ಹಾಗೂ ಅವರ ಬೆಂಬಲಿಗ ಶಾಸಕರ ಕ್ಷೇತ್ರಗಳಿಗೆ ತೆರಳಿ ಕಾರ್ಯಕರ್ತರ ಬೆಂಬಲ ಯಾಚಿಸಿದ್ದಾರೆ. ಈ ಇಬ್ಬರೂ ಚಹಾಕೂಟದಲ್ಲಿ ಮುಖಾಮುಖಿಯಾಗಿದ್ದು ಸದ್ಯದ ಪರಿಸ್ಥಿತಿಗೆ ತೇಪೆ ಹಚ್ಚುವ ಕೆಲಸವಷ್ಟೇ. ಈ ಕದನ ಬೂದಿಮುಚ್ಚಿದ ಕೆಂಡದಂತಾಗಿದ್ದು, ಮತ್ತೆ ಭುಗಿಲೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
from India & World News in Kannada | VK Polls https://ift.tt/3BwCKkb