ಹೊಸದಿಲ್ಲಿ: ಇಂಗ್ಲೆಂಡ್ ಸೌತಾಮ್ಟನ್ನಲ್ಲಿ ಜೂನ್ 18 ರಿಂದ 22ರವರೆಗೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಣಾಹಣಿಯಲ್ಲಿ ಕಾದಾಟ ನಡೆಸಲಿವೆ. ಈ ಮಹತ್ವದ ಪಂದ್ಯದ ಬಳಿಕ ನಾಯಕತ್ವದ , ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಸುಮಾರು ನಾಲ್ಕು ತಿಂಗಳ ಪ್ರವಾಸದ ಹಿನ್ನೆಲೆಯಲ್ಲಿ 20 ಸದಸ್ಯರ ಭಾರತ ಟೆಸ್ಟ್ ತಂಡವನ್ನು ಈಗಾಗಲೇ ಬಿಸಿಸಿಐ ಪ್ರಕಟಿಸಿದ್ದು, ಇನ್ನು ಹೆಚ್ಚಿನ ನಾಲ್ವರು ಆಟಗಾರರನ್ನು ಪ್ರವಾಸಕ್ಕೆ ಪರಿಗಣಿಸಲಾಗಿದೆ. ಇಂದು(ಬುಧವಾರ) ಭಾರತ ತಂಡ ವಿಶೇಷ ವಿಮಾನದ ಮೂಲಕ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದೆ. ಇದರ ನಡುವೆ ಟೀಮ್ ಇಂಡಿಯಾಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. "ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪೈನಲ್ ಹಣಾಹಣಿಯ ಬಳಿಕ ಬಯೋ-ಬಬಲ್ ಅಂತ್ಯವಾಗಲಿದೆ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಬಯೋ ಬಬಲ್ನಲ್ಲಿ ಇರುವ ಅಗತ್ಯವಿಲ್ಲ. ಹಾಗಾಗಿ ಕೊಹ್ಲಿ ಪಡೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಅಗತ್ಯವಿದ್ದರೆ, ಟೆಸ್ಟ್ ಸರಣಿ ಪ್ರಾರಂಭವಾಗುವ ಮೊದಲು ನಾವು ಬಬಲ್ ಅನ್ನು ನಮೂದಿಸುತ್ತೇವೆ (ಆಗಸ್ಟ್ 4 ರಂದು) " ಎಂದು ಟೀಮ್ ಇಂಡಿಯಾ ಸದಸ್ಯರೊಬ್ಬರು ಕ್ರಿಕ್ಬಝ್ಗೆ ತಿಳಿಸಿದ್ದಾರೆ. ಅಂದರೆ, ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೆಳೆ 'ಸುರಕ್ಷಿತ ವಾತಾವರಣದಲ್ಲಿರುವ ಅಗತ್ಯವಿದೆ. ಆದರೆ, ಬಯೋ ಬಬಲ್ನಲ್ಲಿ ಇರುವ ಅಗತ್ಯವಿಲ್ಲ. ಆದರೆ, ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಣಾಹಣಿಯಲ್ಲಿ ಭಾರತ ಬಯೋ ಬಬಲ್ನಲ್ಲಿ ಇರಲಿದೆ. ಇಂಗ್ಲೆಂಡ್ನಲ್ಲಿ ಟೀಮ್ ಇಂಡಿಯಾ ಸತತ ನಾಲ್ಕು ತಿಂಗಳುಗಳ ಕಾಲ ಇರಲಿದ್ದು, ಜೋ ರೂಟ್ ಬಳಗದ ವಿರುದ್ಧ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ತಂಡ ನೇರವಾಗಿ ಯುಎಇಗೆ ಬರಲಿದೆ. ನಂತರ, 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಪಂದ್ಯಗಳಾಡಲು ತಮ್ಮ-ತಮ್ಮ ತಂಡಗಳಿಗೆ ಆಟಗಾರರು ಸೇರ್ಪಡೆಯಾಗಲಿದ್ದಾರೆ. ವೇಳಾಪಟ್ಟಿ: ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಣಾಹಣಿ ಸೌತಾಮ್ಟನ್ನಲ್ಲಿ ಜೂನ್ 18 ರಿಂದ 22ರ ವರೆಗೆ ನಡೆಯಲಿದೆ. ನಂತರ ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲನೇ ಪಂದ್ಯ ನಾಟಿಂಗ್ಹ್ಯಾಮ್, ಎರಡನೇ ಹಣಾಹಣಿ ಲಾರ್ಡ್ಸ್(ಆ.12 ರಿಂದ 6), ಮೂರನೇ ಪಂದ್ಯ ಲೀಡ್ಸ್ (ಆ. 25 ರಿಂದ 29), ನಾಲ್ಕನೇ ಹಣಾಹಣಿ ದಿ ಓವಲ್ನಲ್ಲಿ (ಸೆ.2 ರಿಂದ 6) ಹಾಗೂ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ನಲ್ಲಿ (ಸೆ.10 ರಿಂದ 14) ಜರುಗಲಿದೆ. ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ರಿಷಭ್ ಪಂತ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಕೆ.ಎಲ್ ರಾಹುಲ್ (ಫಿಟ್ನೆಸ್ ಕ್ಲಿಯರೆನ್ಸ್), ವೃದ್ದಿಮಾನ್ ಸಹಾ (ಫಿಟ್ನೆಸ್ ಕ್ಲಿಯರೆನ್ಸ್) ಸ್ಟ್ಯಾಂಡ್ ಬೈ ಆಟಗಾರರು: ಪ್ರಸಿಧ್ ಕೃಷ್ಣ, ಅಭಿಮನ್ಯು ಈಶ್ವರನ್, ಆವೇಶ್ ಖಾನ್, ಅರ್ಜ್ವನ್ ನಾಗ್ವಾಸ್ವಾಲ್ಲಾ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34LngJL