IND vs NZ: ಡಬ್ಲ್ಯುಟಿಸಿ ಫೈನಲ್‌ನಲ್ಲಿ 'ಬೆಸ್ಟ್ ಆಫ್‌ ಥ್ರಿ' ಆಡಿಸಬೇಕಾಗಿತ್ತೆಂದ ರವಿಶಾಸ್ತ್ರಿ!

ಮುಂಬೈ: ಜೂನ್‌ 18 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್‌ ವಿರುದ್ಧ ಉದ್ಘಾಟನಾ ಆವೃತ್ತಿಯ ಹಣಾಹಣಿಯಲ್ಲಿ ಭಾರತ ಸೆಣಸಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಹೆಡ್‌ ಕೋಚ್‌ ರವಿ ಶಾಸ್ತ್ರಿ, ಭವಿಷ್ಯದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಮೂರು ಪಂದ್ಯಗಳನ್ನು ಆಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದೀರ್ಘ ನಾಲ್ಕು ತಿಂಗಳುಗಳ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳುವ ಮುನ್ನ ಮುಂಬೈ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾತು ಹೇಳಿದರು. ಬುಧವಾರ ತಡರಾತ್ರಿ ಟೀಮ್‌ ಇಡಿಯಾ ಆಟಗಾರರು ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಸೌತಾಮ್ಟನ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಡಬ್ಲ್ಯುಟಿಸಿ ಫೈನಲ್‌ ಬಳಿಕ ಭಾರತ, ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿದೆ. ಭವಿಷ್ಯದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಗೆ 'ಬೆಸ್ಟ್ ಆಫ್‌ ಥ್ರೀ'(ಮೂರು ಪಂದ್ಯಗಳು) ಆಯೋಜಿಸಬೇಕೆಂದು ರವಿಶಾಸ್ತ್ರಿ ಸಲಹೆ ನೀಡಿದರು. "ಕಳೆದ ಎರಡರಿಂದ ಮೂರು ವರ್ಷಗಳ ಕಾಲ ತಂಡಗಳು ಕಠಿಣ ಪರಿಶ್ರಮ ಪಟ್ಟಿರುತ್ತವೆ. ಹಾಗಾಗಿ ಇದು ಸುದೀರ್ಘ ಕಾಲ ನಡೆಯುವ ಟೂರ್ನಿ ಆಗಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ಹಂತದಲ್ಲಿ 'ಬೆಸ್ಟ್‌ ಆಫ್‌ ಥ್ರಿ' ಆಡಿವುದು ಒಳಿತು," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. "ಏಕಂದರೆ, ಯಾವುದೇ ತಂಡ ಒಂದೇ ಒಂದು ರಾತ್ರಿ ಫೈನಲ್‌ಗೆ ಅರ್ಹತೆ ಪಡೆದಿರುವುದಿಲ್ಲ. ತಮ್ಮ ಕಠಿಣ ಪರಿಶ್ರಮದಿಂದ ದೀರ್ಘಕಾಲ ನಂ.1 ಸ್ಥಾನದಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಫೈನಲ್‌ ಹಣಾಹಣಿಯಲ್ಲಿ ಒಂದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಕಲ್ಪಿಸುವುದು ಸೂಕ್ತ," ಎಂದು ಹೇಳಿದರು. ಕ್ರಿಕೆಟ್‌ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಪಂದ್ಯ ಇದಾಗಿದೆ ಎಂಬುದನ್ನು ಮುಖ್ಯ ಕೋಚ್ ರವಿಶಾಸ್ತ್ರಿ ಬಲವಾಗಿ ನಂಬಿದ್ದಾರೆ. "ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿ ನಡೆಯುತ್ತಿದೆ. ನೀವು ಇದನ್ನು ನೋಡಿದಾಗ ಮತ್ತು ಪ್ರದರ್ಶನ ತೋರಲಿರುವ ಪ್ರಮಾಣವನ್ನು ನೋಡಿದಾಗ, ಇದು ಎಂದಿಗೂ ದೊಡ್ಡದಲ್ಲದಿದ್ದರೂ ದೊಡ್ಡದಾಗಿದೆ ಎಂದು ನಾನು ಭಾವಿಸುತ್ತೇನೆ," ಎಂದು ತಿಳಿಸಿದರು. "ಕ್ರಿಕೆಟ್‌ನಲ್ಲಿ ಟೆಸ್ಟ್ ಮಾದರಿ ಅತ್ಯಂತ ಕಠಿಣವಾಗಿದೆ. ಏಕೆಂದರೆ, ನಿಮ್ಮಲಿರುವ ಸಾಮರ್ಥ್ಯ, ಪ್ರತಿಭೆ ಹಾಗೂ ತಾಳ್ಮೆಯನ್ನು ಇದು ಪರೀಕ್ಷಿಸುತ್ತದೆ. ಹಾಗಾಗಿ ಇದರ ಭಾಗವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪಂದ್ಯಗಳು ಕಳೆದ ಎರಡು ವರ್ಷಗಳಿಂದ ನಡೆದಿವೆ. ಆ ಮೂಲಕ ಫೈನಲ್‌ಗೆ ಅರ್ಹತೆ ಪಡೆಯಲಾಗಿದೆ," ಎಂದು ರವಿಶಾಸ್ತ್ರಿ ಹೇಳಿದರು. ಇಂಗ್ಲೆಂಡ್‌ ವಾತಾವರಣ ಹೆಚ್ಚು ಕಡಿಮೆ ನ್ಯೂಜಿಲೆಂಡ್‌ ಹೋಲಿಕೆಯಾಗಲಿದ್ದು, ಇದು ಖಂಡಿತಾ ಕೇನ್‌ ವಿಲಿಯಮ್ಸನ್‌ ಪಡೆಗೆ ಲಾಭದಾಯಕವಾಗಲಿದೆ. ಚೆಂಡಿನ ಚಲನೆ ವಿರುದ್ಧ ಆಡುವಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ದೌರ್ಬಲ್ಯವನ್ನು ಹೊಂದಿದ್ದಾರೆ. ಇದು ಫೈನಲ್‌ ಹಣಾಹಣಿಗೆ ಟೀಮ್‌ ಇಂಡಿಯಾಗೆ ವಿಕ್ನೇಸ್‌ ಆಗಿದೆ. ಇದು ಕಿವೀಸ್‌ ವೇಗಿಗಳು ಪ್ಲಸ್‌ ಪಾಯಿಂಟ್‌ ಆಗಿದೆ. ಇಂಗ್ಲೆಂಡ್‌ಗೆ ಪ್ರಯಾಣ ಆರಂಭಿಸುವ ಮುನ್ನ ಸುದ್ದಿಗೋಷ್ಠಿಯಲ್ಲಿ ಇದೇ ಪ್ರಶ್ನೆಯನ್ನು ನಾಯಕ ಮುಂದಿಡಲಾಯಿತು. ಈ ಪ್ರಶ್ನೆಗೆ ಕೊಹ್ಲಿ ನೀಡಿದ ಉತ್ತರ ಕ್ಯಾಂಪ್‌ನ ಆಟಗಾರರ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ಇಂಗ್ಲೆಂಡ್‌ ಪರಿಸ್ಥಿತಿಗಳು ನಮಗೆ ದೊಡ್ಡ ವಿಷಯವಲ್ಲ ಹಾಗೂ ಎದುರಾಳಿ ತಂಡಕ್ಕಿಂತ ಅತ್ಯುತ್ತಮ ಕ್ರಿಕೆಟ್‌ ಆಡುವ ಕಡೆ ತಂಡ ಗಮನ ಹರಿಸುತ್ತಿದೆ ಎಂದು ಹೇಳಿದರು. "ನ್ಯೂಜಿಲೆಂಡ್‌ ಸೇರಿದಂತೆ ಯಾವುದೇ ಪರಿಸ್ಥಿತಿಗಳು ನಮಗೆ ಒಂದೇ ರೀತಿ ಇವೆ. ಹಾಗಾಗಿ, ಅತ್ಯುತ್ತಮ ಕ್ರಿಕೆಟ್‌ ಆಡುವುದು ನಮ್ಮ ಗುರಿ," ಎಂದು ಕೊಹ್ಲಿ ಹೇಳಿದರು. "ಆಸ್ಟ್ರೇಲಿಯಾ ಪರಿಸ್ಥಿತಿಗಳು ಅವರಿಗೆ ನೆಚ್ಚಿನದಾಗಿರುತ್ತದೆ, ಆದರೆ, ನಾವು ಅಲ್ಲಿ ಗೆಲುವು ಸಾಧಿಸಿದ್ದೇವೆ. ನೀವು ಸನ್ನಿವೇಶಗಳನ್ನು ಹೇಗೆ ನೋಡುತ್ತೀರಿ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ನೀವು ವಿಮಾನ ಹತ್ತುವಾಗ, ನ್ಯೂಜಿಲೆಂಡ್‌ ಪರ ಯೋಚಿಸಿದಾಗ, ನೀವು ವಿಮಾನ ಏರುವುದರಲ್ಲಿ ಯಾವುದೇ ಅರ್ಥವಿಲ್ಲ," ಎಂದು ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34IY4DO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...