ಹಣ ಇಲ್ಲದವರಿಗೆ ವ್ಯಾಕ್ಸಿನ್ ಸಿಗಲ್ವಾ? ರಾಜ್ಯ ಸರ್ಕಾರಕ್ಕೆ ಕೃಷ್ಣಭೈರೇಗೌಡ ಪ್ರಶ್ನೆ

ಬೆಂಗಳೂರು: ಹಣ ಇಲ್ಲದವರಿಗೆ ವ್ಯಾಕ್ಸಿನ್ ಸಿಗಲ್ವಾ? ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ಪ್ರಶ್ನೆ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವ್ಯಾಕ್ಸಿನ್ ಕೊರತೆ ಹೆಚ್ಚಾಗಿದೆ. ರಾಜ್ಯದಲ್ಲೂ ಲಸಿಕೆ ಕೊರತೆ ಸಮಸ್ಯೆಯಿದೆ. ಲಸಿಕೆ ಬಗ್ಗೆ ಸತತವಾಗಿ ಧ್ವನಿ ಎತ್ತುತ್ತಲೇ ಇದ್ದೇವೆ ಆದರೂ ಎರಡು ತಿಂಗಳಾದರೂ ಸರ್ಕಾರ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದರು. ಹಣ ಇಲ್ಲದವರಿಗೆ ವ್ಯಾಕ್ಸಿನ್ ಸಿಗಲ್ವಾ? ಹಣ ಇಲ್ಲದವರಿಗೆ ಆರೋಗ್ಯ ರಕ್ಷಣೆ ಇಲ್ವಾ? ಎಂದು ಪ್ರಶ್ನಿಸಿದ ಅವರು, ಸಂವಿಧಾನದ ಪ್ರಕಾರ ಜೀವ ಉಳಿಸುವ ಹಕ್ಕಿದೆ, ಕೊರೊನಾದಿಂದ ಸಾವು ನೋವು ಹೆಚ್ಚಾಗಿದೆ, ಇಂತಹ ಸಂದರ್ಭದಲ್ಲಿ ಪ್ರಾಣರಕ್ಷಣೆ ಮಾಡಿಕೊಳ್ಳಬೇಕಿದೆ, ವ್ಯಾಕ್ಸಿನ್ ನಿಂದ ಪ್ರಾಣರಕ್ಷಣೆ ಸಾಧ್ಯವಿದೆ ಹಾಗಾಗಿ ಹಣವಿಲ್ಲದವರು ಏನು ಮಾಡಬೇಕು? ಹಣವಿಲ್ಲದವರಿಗೆ ವ್ಯಾಕ್ಸಿನ್ ಇಲ್ಲವೆಂದರೆ ಹೇಗೆ? ಎಂದು ಕಿಡಿಕಾರಿದರು. ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಸಿಗಲಿದೆ, 1200 ರೂಪಾಯಿ ದರಕ್ಕೆ ಲಭ್ಯವಿದೆ ಆದರೆ ಕುಂಬಾರ, ಕ್ಷೌರಿಕ, ಬಡವರು ಏನು ಮಾಡಬೇಕು? ಒಂದು ಕುಟುಂಬ ವ್ಯಾಕ್ಸಿನ್ ಗೆ ನಾಲ್ಕೈದು ಸಾವಿರ ಕೊಡಬೇಕು. ಬೆವರು ಸುರಿಸುವವರು ಎಲ್ಲಿಂದ ತಂದು ಕೊಡಬೇಕು, ಬಡವರ ಪ್ರಾಣವನ್ನ ಆಹುತಿ ಕೊಡುತ್ತಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬಾನಿ,ಅದಾನಿ ಉದ್ಧಾರಕ್ಕೆ ಈ ಸರ್ಕಾರ ಇರೋದಾ? ಶ್ರೀಮಂತರು ದುಡ್ಡು ಕೊಟ್ಟು ಲಸಿಕೆ ಹಾಕಿಸಿಕೊಳ್ತಿದ್ದಾರೆ. ಬಡವರು ಲಸಿಕೆ ಪಡೆಯದೆ ಸಾಯ್ತಿದ್ದಾರೆ. ಇದನ್ನ ನಾವು ನೋಡಿಕೊಂಡು ಕೂರಬೇಕಾ ಎಂದು ಕೃಷ್ಣ ಭೈರೇಗೌಡ, ಬಡವರಿಗೆ ಆದ್ಯತೆ ಅನ್ನುವವರು ಇವರೇನಾ? ಇದೇನು ಸರ್ಕಾರಿ ಪ್ರಯೋಜಿತ ಕಾರ್ಯಕ್ರಮವೇ? ಎಂದು ಪ್ರಶ್ನಿಸಿದ್ದಾರೆ. ಮಾನವೀಯ ಗುಣ ಸರ್ಕಾರಕ್ಕೆ ಎಲ್ಲಿದೆ?ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರು ಇವರನ್ನ ಯಾವ ಮಾತಿನಲ್ಲಿ ಎಚ್ಚರಿಸಬೇಕು ಗೊತ್ತಿಲ್ಲ.ಸುಪ್ರೀಂಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. 150 ರೂಗೆ ಲಸಿಕೆ ಪಡೆಯುವುದಾಗಿ ಕೇಂದ್ರ ಹೇಳಿದೆ, ನಾವು ಹಣವನ್ನ ಕೇಂದ್ರಕ್ಕೆ ಕೊಡ್ತೇವೆ 150 ರೂಗೆ ನಮಗೂ ಲಸಿಕೆ ಕೊಡಲಿ ಎಂದು ಒತ್ತಾಯಿಸಿದರು. ಏಪ್ರಿಲ್ ನಲ್ಲಿ 32 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಏಪ್ರಿಲ್ ನಲ್ಲಿ 7 ಕೋಟಿ 75 ಲಕ್ಷ ವ್ಯಾಕ್ಸಿನ್ ಸಪ್ಲೈಆಗಿದೆ. ಮೇ ನಲ್ಲಿ 1, 72, 782 ಡೊಸೇಜ್ ಕುಸಿತ ಕಂಡಿದೆ. ಮೇ ತಿಂಗಳಲ್ಲಿ ಕೇವಲ 5.73 ಲಕ್ಷ ವ್ಯಾಕ್ಸಿನ್ ಪೂರೈಕೆ ಆಗಿದೆ. ಮೇ ನಲ್ಲಿ ವ್ಯಾಕ್ಸಿನ್ ಪ್ರಮಾಣ ಡಬಲ್ ಆಗಬೇಕಿತ್ತು ಆದರೆ ಏಪ್ರಿಲ್ ಗಿಂತ ಅರ್ಧಕ್ಕೆ ಕುಸಿದಿದೆ ಎಂದು ಕೃಷ್ಣ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ,. 10 ತಿಂಗಳ ಹಿಂದೆ ರಾಹುಲ್ ಗಾಂಧಿಯವರು ಲಸಿಕೆಯನ್ನ ಕಾಪಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದ್ದರು. ವಿದೇಶಿ ಕಂಪನಿಗಳಿಂದ ಪಡೆಯಬಹುದೆಂದಿದ್ದರು. ಆದರೆ ಕೇಂದ್ರ ಮಂತ್ರಿಗಳು ಆಕ್ಷೇಪಿಸಿದ್ದರು. ಈಗ ವಿದೇಶಗಳಿಂದಲೇ ಲಸಿಕೆ ಖರೀದಿಗೆ ಹೊರಟಿದ್ದಾರೆ ಎಂದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 35 ಸಾವಿರ ಕೋಟಿ‌ ಲಸಿಕೆಗೆ ಅನುದಾನ ಇಟ್ಟಿದ್ದಾರೆ. ಆದರೆ ಲಸಿಕೆ ಖರೀದಿಗೆ ಯಾಕೆ ಹಿಂದೇಟು? ಸುಪ್ರೀಂಕೋರ್ಟ್ ಕೂಡ ಚಾಟಿ ಬೀಸಿದೆ. ರಾಜ್ಯದಲ್ಲಿಐಪಿಎಲ್ ಮ್ಯಾಚ್ ನಡೆಯುತ್ತಿದೆ ಎಂದ ಅವರು ಸಿಎಂ ವರ್ಸಸ್ ಸಚಿವರು ಹಾಗೂ ಡಿಸಿಎಂ ವರ್ಸಸ್ ಸಚಿವರ ನಡುವೆ ಮ್ಯಾಚ್ ನಡೆಯುತ್ತಿದೆ. ಅಲ್ಲದೆ ಸಂಸದರು ವರ್ಸಸ್ ಡಿಸಿಗಳ ನಡುವೆ ಕೂಡಾ ಮ್ಯಾಚ್ ನಡೆಯುತ್ತಿದೆ, ಆದರೆ ಲಸಿಕೆ ಕೊಡಲು ಮಾತ್ರ ಇವರ ಗಮನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/34K2evp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...