ಬೆಂಗಳೂರು: ಪ್ರಕರಣ ಸಂಬಂಧ ತನಿಖೆಗೆ ಹಾಜರಾಗುವಂತೆ ಸೂಚಿಸಿ ಶಾಸಕ ಅವರಿಗೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಮಧ್ಯೆ ತನಿಖೆಗೆ ಕಬ್ಬನ್ ಪಾರ್ಕ್ ಠಾಣೆ ಎಸಿಪಿ ಯತಿರಾಜ್ ಬದಲು ಶೇಷಾದ್ರಿಪುರದ ಮಹಿಳಾ ಎಸಿಪಿ ಪೃಥ್ವಿ ಅವರನ್ನು ನಿಯೋಜಿಸಲಾಗಿದೆ. ಅಲೋಕ್ ಕುಮಾರ್ ಪೊಲೀಸ್ ಕಮೀಷನರ್ ಆಗಿದ್ದ ಅವಧಿಯಲ್ಲಿ ಪೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಾಕಷ್ಟು ಮಾಹಿತಿಯನ್ನು ಶೇಷಾದ್ರಿಪುರದ ಮಹಿಳಾ ಎಸಿಪಿ ಪೃಥ್ವಿ ಹೊರಹಾಕಿದ್ದರು. ಆ ಅನುಭವದ ಮೇಲೆ ಬೆಲ್ಲರ ಪ್ರಕರಣ ವಹಿಸಿದ್ದು, ತನಿಖೆಗೆ ಹಾಜರಾಗಲು ಶಾಸಕ ಬೆಲ್ಲದಗೆ ನೋಟಿಸ್ ಜಾರಿ ಮಾಡಿದ್ದಾರೆ. ಶಾಸಕರ ಆಪ್ತನಿಂದಲೇ ಕರೆ ಕರೆ ಮಾಡಿದ್ದ ನಂಬರ್ ಸಿಡಿಆರ್ ಪಡೆದು ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯ ಮೂಲವನ್ನು ಪತ್ತೆ ಹಚ್ಚಿದ್ದು, ಬೆಲ್ಲದ ಅವರಿಗೆ ಆಪ್ತನಾಗಿರುವ ವ್ಯಕ್ತಿ ಹೈದರಾಬಾದ್ನಿಂದ ಕರೆ ಮಾಡಿರುವುದು ಗೊತ್ತಾಗಿದೆ. ಆತ ಕರೆ ಮಾಡಿದ್ದ ನಂಬರ್ ಬೆಲ್ಲದ ಅವರ ಬಳಿ ಇರಲಿಲ್ಲ. ಹೀಗಾಗಿ ಅದು ಅಪರಿಚಿತ ವ್ಯಕ್ತಿಯದು ಎಂಬ ಅನುಮಾನ ಬಂದಿದೆ. ಅದು ಜೈಲಿನಲ್ಲಿ ಇರುವ ಯುವರಾಜ್ ಕರೆ ಮಾಡಿದ್ದಾನೆ ಎಂದು ಬೆಲ್ಲದ ಶಂಕಿಸಿದ್ದರು. ಅಲ್ಲದೆ ನನ್ನ ದೂರವಾಣಿ ಕದ್ದಾಲಿಸಲಾಗುತ್ತಿದೆ. ನಾನು ಎಲ್ಲೆಲ್ಲಿ ಹೋಗುತ್ತೇನೆ ಎಂಬ ಮಾಹಿತಿಯನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಬೆಲ್ಲದ ಅವರು ಗೃಹ ಸಚಿವರನ್ನು ಒತ್ತಾಯಿಸಿದ್ದರು. ಬೆಲ್ಲದಗೆ ಕರೆ ಮಾಡಿದ ವ್ಯಕ್ತಿ ಯಾರೆಂಬುದನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಕರೆ ಮಾಡಿದ ವ್ಯಕ್ತಿಯು, ನಾನು ಶಾಸಕರಿಗೆ ತುಂಬಾ ಆಪ್ತ. ನಾನು ಅವರ ಜತೆಯಲ್ಲೇ ಇರುತ್ತೇನೆ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
from India & World News in Kannada | VK Polls https://ift.tt/3wS08pD