ನೈಟ್‌ ವಾಚ್‌ಮ್ಯಾನ್‌ ಕಳುಹಿಸದೆ ಎದುರಾಳಿಗೆ ದೊಡ್ಡ ಸಂದೇಶ ಸಾರಿದ ಕೊಹ್ಲಿ: ಹಾಗ್

ಸೌಥ್‌ಹ್ಯಾಂಪ್ಟನ್‌: ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯ 5ನೇ ದಿನವಾದ ಮಂಗಳವಾರ ರೋಹಿತ್‌ ಶರ್ಮಾ ಔಟ್‌ ಆದ ಬಳಿಕ ನೈಟ್‌ ವಾಚ್‌ಮ್ಯಾನ್‌ ಕಳುಹಿಸದೇ ತಾನೇ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿಯನ್ನು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್‌ ಬ್ರಾಡ್ ಹಾಗ್‌ ಶ್ಲಾಘಿಸಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ 249 ರನ್‌ಗಳಿಗೆ ಆಲೌಟ್‌ ಆದ ಬಳಿಕ, ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಆರಂಭಿಕರಾದ ಶುಭಮನ್ ಗಿಲ್‌ ಹಾಗೂ ರೋಹಿತ್‌ ಶರ್ಮಾ ಇಬ್ಬರನ್ನೂ ಬಹುಬೇಗ ಕಳೆದುಕೊಂಡಿತು. ಒಂದು ಹಂತದಲ್ಲಿ 30 ರನ್ ಗಳಿಸಿ ಅತ್ಯುತ್ತಮ ಬ್ಯಾಟ್‌ ಮಾಡುತ್ತಿದ್ದ ರೋಹಿತ್‌ ಶರ್ಮಾ ಅವರು ಟಿಮ್‌ ಸೌಥಿಗೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ರೋಹಿತ್‌ ಶರ್ಮಾ ವಿಕೆಟ್‌ ಉರುಳಿದ ಬಳಿಕ ಐದನೇ ದಿನದ ಅಂತ್ಯಕ್ಕೆ ಇನ್ನೂ ಕೆಲವೇ ಓವರ್‌ಗಳು ಮಾತ್ರ ಬಾಕಿ ಇತ್ತು. ಹಾಗಾಗಿ, ನೈಟ್‌ ವಾಚ್‌ಮ್ಯಾನ್‌ ಬರಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯೇ ಕ್ರೀಸ್‌ಗೆ ಬಂದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದರು. ಅದರಂತೆ ಕೊಹ್ಲಿ 12 ಎಸೆತಗಳಲ್ಲಿ ಅಜೇಯ 8 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ , ಐದನೇ ದಿನದ ಕೊನೆಯಲ್ಲಿ ರೋಹಿತ್‌ ಶರ್ಮಾ ಔಟ್‌ ಆಗಿದ್ದು ತುಂಬಾ ನಿರ್ಣಾಯಕವಾಗಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ವಿಕೆಟ್‌ ಉರುಳಿದ ಬಳಿಕ ಕ್ರೀಸ್‌ಗೆ ಬಂದಿದ್ದು ಎದುರಾಳಿಗೆ ದೊಡ್ಡ ಸಂದೇಶವಾಗಿತ್ತು ಎಂದು ಹೇಳಿದರು. "ಕಳೆದ ರಾತ್ರಿ ಭಾರತ ಎರಡು ವಿಕೆಟ್‌ಗಳನ್ನು ಬಹುಬೇಗ ಕಳೆದುಕೊಂಡಿತು. 5ನೇ ದಿನದ ಸ್ಟಂಪ್ಸ್‌ಗೂ ಕೆಲ ನಿಮಿಷಗಳ ಮುನ್ನ ರೋಹಿತ್‌ ಶರ್ಮಾ ಔಟ್‌ ಆದರು. ನ್ಯೂಜಿಲೆಂಡ್‌ ತಂಡಕ್ಕೆ ಅತ್ಯಂತ ನಿರ್ಣಾಯಕ ವಿಕೆಟ್‌ ಇದಾಗಿತ್ತು. ಈ ಸನ್ನಿವೇಶದಲ್ಲಿ ನೈಟ್‌ ವಾಚ್‌ಮ್ಯಾನ್‌ ಕಳುಹಿಸದೇ ಇದ್ದ ವಿರಾಟ್‌ ಕೊಹ್ಲಿ ನಿರ್ಧಾರ ನನಗೆ ತುಂಬಾ ಇಷ್ಟವಾಯಿತು. ವಿರಾಟ್‌ ಕೊಹ್ಲಿಯೇ ಕ್ರೀಸ್‌ಗೆ ಬರುವ ಮೂಲಕ ತನಗೆ ನಿಮ್ಮ ಭಯವಿಲ್ಲ ಎಂಬ ಸಂದೇಶವನ್ನು ನ್ಯೂಜಿಲೆಂಡ್ ಬೌಲರ್‌ಗಳಿಗೆ ಸಾರಿದರು. ಆ ಮೂಲಕ ದೊಡ್ಡ ಇನಿಂಗ್ಸ್ ಕಟ್ಟುವ ಮುನ್ಸೂಚನೆ ಅವರು ನೀಡಿದರು," ಎಂದರು. 12 ರನ್‌ ಗಳಿಸಿ ಅಜೇಯರಾಗಿ ಉಳಿದಿರುವ ಚೇತೇಶ್ವರ್‌ ಪೂಜಾರ ಅವರು ಇಂದು(ಬುಧವಾರ) ಕೂಡ ರಕ್ಷಣಾತ್ಮಕ ಆಟ ಮುಂದುವರಿಸಬಹುದು. ಆದರೆ, ಭಾರತ ತಂಡಕ್ಕೆ ಗೆಲುವಿನ ಅವಕಾಶ ತಂದುಕೊಡಲು ವಿರಾಟ್‌ ಕೊಹ್ಲಿ ಸ್ವಲ್ಪ ಆಕ್ರಮಣಕಾರಿಯಾಗಿ ಆಡಬಹುದು. ಒಂದು ವೇಳೆ ವಿರಾಟ್‌ ಕೊಹ್ಲಿ ವಿಕೆಟ್‌ ಬೇಗ ಉರುಳಿದರೆ, ಭಾರತಕ್ಕೆ ಅಪಾಯ ಎದುರಾಗಬಹುದು. ಕೊನೆಯ ದಿನ ನ್ಯೂಜಿಲೆಂಡ್‌ ತಂಡವೇ ಮೇಲುಗೈ ಸಾಧಿಸಬಹುದು ಎಂದು ಹಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಈ ಟೆಸ್ಟ್ ಪಂದ್ಯ ಇನ್ನೂ ಜೀವಂತವಾಗಿದೆ. ಅಂತಿಮ ದಿನ ಕೊನೆಯಲ್ಲಿ ಫಲಿತಾಂಶ ಮೂಡಿ ಬರುವ ಎಲ್ಲಾ ಸಾಧ್ಯತೆ ಇದೆ. ಏಕೆಂದರೆ ಸೂರ್ಯನ ಬೆಳಕು ಇದ್ದು, ಪೂರ್ತಿ ದಿನ ಆಟ ನಡೆಯಬಹುದು. ನನ್ನ ಪ್ರಕಾರ ನ್ಯೂಜಿಲೆಂಡ್‌ ತಂಡ ನೆಚ್ಚಿನದಾಗಿದೆ," ಎಂದು ಹೇಳಿದರು


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3xNJdV1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...