ಹೊಸದಿಲ್ಲಿ: ವಿವಾದಿತ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್ ಯುವ ವೇಗಿ ಅವರನ್ನು ಕೈ ಬಿಡುವ ಸಾಧ್ಯತೆ ಇದೆ ಎಂದು ಯುಕೆ ಟೆಲಿಗ್ರಾಫ್ ವರದಿ ಮಾಡಿದೆ. ಲಂಡನ್ನ ಲಾರ್ಡ್ಸ್ ಅಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲನೇ ಹಣಾಹಣಿಯಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನವೇ ರಾಬಿನ್ಸನ್ ಎರಡು ವಿಕೆಟ್ ಪಡೆದಿದ್ದರು. ಆದರೆ, 'ಜನಾಂಗೀಯ ನಿಂದನೆ' ಹಾಗೂ 'ಲಿಂಗ ತಾರತಮ್ಯ' ಕುರಿತಂತೆ ಕಳೆದ ಎಂಟು ವರ್ಷಗಳ ಹಿಂದೆ ಮಾಡಿದ್ದ ವಿವಾದಾತ್ಮಕ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರಿಂದಾಗಿ ರಾಬಿನ್ಸನ್ಗೆ ಮುಜುಗರ ಉಂಟಾಯಿತು. ಮೊದಲನೇ ಪಂದ್ಯದಲ್ಲಿ 28 ಓವರ್ಗಳು ಬೌಲಿಂಗ್ ಮಾಡಿದ್ದ ರಾಬಿನ್ಸನ್ ಅವರು 75 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಆದರೆ, ವಿವಾದಾತ್ಮಕ ಟ್ವೀಟ್ನಿಂದಾಗಿ ದಿನಪತ್ರಿಕೆಗಳಲ್ಲಿ ಇಂಗ್ಲೆಂಡ್ ವೇಗಿ ಪ್ರಮುಖ ಸುದ್ದಿಯಾದರು. ಆದರೆ, ರಾಷ್ಟ್ರೀಯ ತಂಡದಲ್ಲಿ ತಾರತಮ್ಯ ತೊರೆದು ವಿಶ್ವಸಾರ್ಹ ಭಾವನೆ ಮೂಡಿಸುವ ಸಲುವಾಗಿ ಇಸಿಬಿ ಎರಡನೇ ಪಂದ್ಯಕ್ಕೆ ರಾಬಿನ್ಸನ್ ಅವರನ್ನು ಕೈ ಬಿಡಲಿದೆ ಎಂದು ನಂಬಲಾಗಿದೆ. ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ್ದ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಅಕಾಡೆಮಿ ಸಿಇಓ ಟಾಮ್ ಹಾರ್ಮಿಸನ್, ಟ್ವೀಟ್ಗಳು ಹಳೆಯದಾಗಿದ್ದರೂ, ಯಾವುದೇ ತಾರತಮ್ಯವಿಲ್ಲದೆ ತಮ್ಮ "ಶೂನ್ಯ-ಸಹಿಷ್ಣುತೆ" ನೀತಿಯ ಭಾಗವಾಗಿ ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. "ಇಂತಹ ಸ್ವಭಾವದ ಟ್ವೀಟ್ಗಳನ್ನು ಬರೆಯಲು ಇಂಗ್ಲೆಂಡ್ ತಂಡದ ಆಟಗಾರ ಆಯ್ಕೆ ಮಾಡಿಕೊಂಡಿರುವುದು ಎಷ್ಟು ನಿರಾಶೆಯಾಗಿದೆ ಎಂಬುದನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ, ಆದರೆ ಇವು ಬಹಳ ಹಳೆಯದಾಗಿದೆ. ಆ ಪದಗಳನ್ನು ಓದುವ ಯಾವುದೇ ವ್ಯಕ್ತಿ, ವಿಶೇಷವಾಗಿ ಮಹಿಳೆಯರಿಗೆ, ಕ್ರಿಕೆಟ್ ಮತ್ತು ಕ್ರಿಕೆಟಿಗರ ಬಗ್ಗೆ ಕೆಟ್ಟ ಅಭಿಪ್ರಾಯ ಉಂಟಾಗಲು ಕಾರಣವಾಗುತ್ತದೆ. ನಾವು ಶೂನ್ಯ-ಸಹಿಷ್ಣು ನಿಲುವನ್ನು ಹೊಂದಿದ್ದೇವೆ ಮತ್ತು ಈ ಸ್ವಭಾವದ ನಡವಳಿಕೆಯನ್ನು ನಿರ್ವಹಿಸಲು ನಮ್ಮ ಬಳಿ ನಿಯಮಗಳಿವೆ. ನಮ್ಮ ಶಿಸ್ತಿನ ಪ್ರಕ್ರಿಯೆಯ ಭಾಗವಾಗಿ ನಾವು ಪೂರ್ಣ ತನಿಖೆಯನ್ನು ಪ್ರಾರಂಭಿಸುತ್ತೇವೆ," ಎಂದು ಹಾರ್ಮಿಸನ್ ತಿಳಿಸಿದ್ದರು. ಗುರುವಾರ ತಮ್ಮ ವಿವಾದಿತ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವೇಗಿ ರಾಬಿನ್ಸನ್ ಕ್ಷಮೆಕೋರಿದ್ದರು. ಇದೀಗ ನಾನು ಪ್ರಬುದ್ದ ವ್ಯಕ್ತಿಯಾಗಿ ತನ್ನ ಹಳೆಯ ಟ್ವೀಟ್ ಬಗ್ಗೆ ವಿಷಾದಿಸುತ್ತೇನೆ ಎಂದು ಹೇಳಿದ್ದರು. "ನನ್ನ ವೃತ್ತಿ ಜೀವನದ ಅತ್ಯಂತ ದೊಡ್ಡ ದಿನ ಇದಾಗಿದೆ. ಎಂಟು ವರ್ಷಗಳ ಹಿಂದೆ ಜನಾಗೀಯ ಹಾಗೂ ಲಿಂಗ ಸಂಬಂಧಿತ ಮಾಡಿದ್ದ ವಿವಾದಾತ್ಮಕ ಟ್ವೀಟ್ನಿಂದ ನನಗೆ ಮುಜುಗರವಾಗುತ್ತಿದೆ. ಅದು ಇಂದು(ಬುಧವಾರ) ಸಾರ್ವಜನಿಕವಾಗಿದೆ. ನಾನು ಜನಾಗೀಯ ಹಾಗೂ ಲಿಂಗ ತಾರತಮ್ಯದ ವಿರೋಧಿಯಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತೇನೆ. ಈ ರೀತಿ ಟ್ವೀಟ್ ಮಾಡಿದ್ದಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಅಂದಿನ ದಿನಗಳಲ್ಲಿ ನನಗೆ ಬುದ್ದಿ ಇರಲಿಲ್ಲ ಹಾಗೂ ಅಷ್ಟೊಂದು ಮಾನಸಿಕವಾಗಿ ಪರಿಪಕ್ವತೆ ಸಾಧಿಸಿರಲಿಲ್ಲ. ಇದೀಗ ನಾನು ಪ್ರಬುದ್ದ ವ್ಯಕ್ತಿಯಾಗಿ ಆ ಟ್ವೀಟ್ ಬಗ್ಗೆ ವಿಷಾದಿಸುತ್ತೇನೆ," ಎಂದು ಹೇಳಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3vQ2LYA