ನೋಯಿಡಾ: ಉಚಿತ ಪ್ರವೇಶ ನೀಡಲು ನಿರಾಕರಿಸಿದ ಸಿಬ್ಬಂದಿ ಮೇಲೆ ನಾಯಕರಿಬ್ಬರು ಹಲ್ಲೆ ನಡೆಸಿರುವ ಘಟನೆ ನೋಯಿಡಾದ ಯಮುನಾ ಎಕ್ಸ್ಪ್ರೆಸ್ವೇನ ಜೇವಾರ್ ಟೋಲ್ ಗೇಟ್ನಲ್ಲಿ ನಡೆದಿದೆ. ನೋಯಿಡಾ ಬಿಜೆಪಿ ಘಟಕದ ಜಿಲ್ಲಾ ಮಟ್ಟದ ನಾಯಕರಾದ ವಿಜಯ್ ಭಾಟಿ ಮತ್ತು ಸಂಜೀವ್ ಶರ್ಮಾ ಎಂಬವರು ಟೋಲ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಿಜೆಪಿ ನಾಯಕರಿಬ್ಬರು, ಜೇವಾರ್ ಟೋಲ್ ಗೇಟ್ ತಲುಪಿದ್ದರು. ಈ ವೇಳೆ ಟೋಲ್ ಸಿಬ್ಬಂದಿ ಹಣ ಕೊಟ್ಟು ರಶೀದಿ ಪಡೆಯುವಂತೆ ಸೂಚಿಸಿದ್ದಾರೆ. ಇಷ್ಟಕ್ಕೆ ಕೆಂಡಾಮಂಡಲರಾದ ನಾಯಕರಿಬ್ಬರು, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಟೋಲ್ ಬೂತ್ ಅಧಿಕಾರಿಗಳು ನೋಯಿಡಾ ಅಧಿಕಾರಿಗಳ ಗಮನಕ್ಕೆ ತಂದಿದ್ದು, ದೂರು ದಾಖಲಿಸಿದ್ದಾರೆ.
from India & World News in Kannada | VK Polls https://ift.tt/2JOmGBA