ಶಾಕಿಂಗ್; ಎಲ್ಲ ಪ್ರಕಾರದ ಕ್ರಿಕೆಟ್‌ಗೂ ರಾಯುಡು ಗುಡ್ ಬೈ!

ಹೊಸದಿಲ್ಲಿ: ಶಾಕಿಂಗ್ ಸುದ್ದಿಯೊಂದರಲ್ಲಿ ವಿಶ್ವಕಪ್‌ಗಾಗಿನ ಭಾರತ ತಂಡದಿಂದ ಪದೇ ಪದೇ ಕಡೆಗಣಿಸಿದ್ದರಿಂದ ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಲ್ಲ ಪ್ರಕಾರದ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ. ಐಸಿಸಿ 2019 ಏಕದಿನ ವಿಶ್ವಕಪ್‌ಗಾಗಿನ ಭಾರತದ 15 ಸದಸ್ಯ ಬಳಗದಿಂದ ರಾಯುಡುರನ್ನು ಕಡೆಗಣಿಸಲಾಗಿತ್ತು. ಬಳಿಕ ಶಿಖರ್ ಧವನ್ ಗಾಯಗೊಂಡ ಸಂದರ್ಭದಲ್ಲೂ ಆಯ್ಕೆಗೆ ಪರಿಗಣಿಸಿರಲಿಲ್ಲ. ತದಾ ಬಳಿಕ ವಿಜಯ್ ಶಂಕರ್ ಗಾಯದಿಂದಾಗಿ ನಿರ್ಗಮಿಸಿದಾಗಲೂ ಆಯ್ಕೆ ಮಾಡಲಿಲ್ಲ. ರಿಷಬ್ ಪಂತ್ ಜತೆ ಮೀಸಲು ಆಟಗಾರರ ಸಾಲಿನಲ್ಲೂ ಗುರುತಿಸಿಕೊಂಡರೂ ಮೂರು ಬಾರಿ ರಾಯುಡು ಆಯ್ಕೆಯನ್ನು ಟೀಮ್ ಇಂಡಿಯಾ ಆಯ್ಕೆ ಸಮಿತಿ ಪರಿಗಣಿಸಲಿಲ್ಲ. ಇದರಿಂದ ಸಾಕಷ್ಟು ನೊಂದಿರುವ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹಾಡಿದ್ದಾರೆ. ಭಾರತವನ್ನು 55 ಏಕದಿನ ಪಂದ್ಯವನ್ನು ಆಡಿರುವ ರಾಯುಡು 1694 ರನ್ ಪೇರಿಸಿದ್ದಾರೆ. ಹಾಗೆಯೇ 97 ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಪೈಕಿ ಕಳೆದ ಸಾಲಿನಲ್ಲಿ ಚೆನ್ನೈ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ವಿಶ್ವಕಪ್ ತಂಡದಿಂದ ರಾಯುಡು ಕೈಬಿಟ್ಟಿರುವುದಕ್ಕೆ ಕಾರಣ ನೀಡಿರುವ ಬಿಸಿಸಿಐ ಆಯ್ಕೆ ಸಮಿತಿ, ತ್ರಿ ಡೈಮನ್ಷನಲ್ ಪ್ಲೇಯರ್ ಆಗಿರುವ ವಿಜಯ್ ಶಂಕರ್ ಹಿನ್ನಲೆಯಲ್ಲಿ ರಾಯುಡುರನ್ನು ಕೈಬಿಡಲಾಗಿದೆ ಎಂದಿದ್ದರು. ಇದಕ್ಕೆ ರಾಯುಡು ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2xqpgXp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...