87ರ ಅಜ್ಜಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಕೊಹ್ಲಿ

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು ಬೆಂಬಲಿಸಲು 87ರ ಅಜ್ಜಿಯೊಬ್ಬರು ಆಗಮಿಸಿದ್ದರು. ಅಜ್ಜಿಯ ಕ್ರಿಕೆಟ್ ಅಭಿಮಾನಿಕ್ಕೆ ಕ್ರೀಡಾಭಿಮಾನಿಗಳು ಮನ ಸೋತಿದ್ದರು. ಬಳಿಕ ಅಜ್ಜಿಯನ್ನು ಭೇಟಿ ಮಾಡಿದ ಟೀಮ್ ಇಂಡಿಯಾ ನಾಯಕ ವಿಶ್ವಕಪ್‌ನ ಉಳಿದಿರುವ ಟಿಕೆಟ್‌ಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತನ್ನು ಉಳಿಸಿರುವ ಕೊಹ್ಲಿ, ಭಾರತದ ಉಳಿದಿರುವ ಎಲ್ಲ ಪಂದ್ಯಗಳ ಟಿಕೆಟ್ ಕೊಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯಲಿರುವ ಕೊನೆಯ ಲೀಗ್ ಪಂದ್ಯ, ಎರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಅಜ್ಜಿಗೆ ಕೊಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಾರುಲತಾ, ನನ್ನನ್ನು ಅಪ್ಪಿಕೊಂಡ ವಿರಾಟ್ ಭಾರತದ ಎಲ್ಲ ಪಂದ್ಯಗಳನ್ನು ವೀಕ್ಷಿಸಲು ಬರುವಂತೆ ಬೇಡಿಕೊಂಡರು. ನನ್ನ ಬಳಿ ಟಿಕೆಟ್ ಇಲ್ಲ ಎಂದು ಹೇಳಿದಾಗ ಅಂಜಿಕೆ ಬೇಡ ನಾನು ಕೊಡಿಸುತ್ತೇನೆ ಎಂದು ಕೊಹ್ಲಿ ಭರವಸೆ ನೀಡಿದರು. ಇದೀಗ ಕೊಟ್ಟ ಮಾತಿನಂತೆ ಟಿಕೆಟ್ ಕೊಡಿಸಿರುವುದಾಗಿ ತಿಳಿಸಿದ್ದಾರೆ. ಟೀಮ್ ಇಂಡಿಯಾ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಜ್ಜಿ, ಎಲ್ಲರೂ ನನಗೆ ಮಕ್ಕಳಿದ್ದಂತೆ, ಭಾರತ ತಂಡವು ಅತ್ಯುತ್ತಮವಾಗಿ ಆಡುತ್ತಿದ್ದು, ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದೇನೆ. ನಾನು ಕಳೆದ 20 ವರ್ಷಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದು, ಇದು ಎರಡನೇ ಬಾರಿಗೆ ಸ್ಟೇಡಿಯಂಗೆ ಪಂದ್ಯ ನೋಡಲು ತೆರಳಿದ್ದೇನೆ ಎಂದರು. ಅಲ್ಲದೆ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ತಮ್ಮ ಮೆಚ್ಚಿನ ಆಟಗಾರರು ಎಂದರು. ವಿರಾಟ್ ಹಾಗೂ ರೋಹಿತ್ ಶರ್ಮಾ ನನ್ನ ಆಶೀರ್ವಾದ ಪಡೆದಾಗ ಎದ್ದು ನಿಂತುಕೊಳ್ಳಲು ಬಯಸಿದ್ದೆ. ಆದರೆ ಕುರ್ಚಿಯಲ್ಲೇ ಕುಳಿತುಕೊಳ್ಳುವಂತೆ ತಿಳಿಸಿದರು. ಬಳಿಕ ಅಪ್ಪಿ ಹಿಡಿದು, ಮುತ್ತಿಕ್ಕಿ ಆರ್ಶಿರ್ವಾದವನ್ನು ನೀಡಿದೆ ಎಂದರು. ಬಾಂಗ್ಲಾದೇಶ ವಿರುದ್ಧ ಪಂದ್ಯದ ವೇಳೆ ಪೀಪಿ ಊದುವ ಜತೆಗೆ ತ್ರಿವರ್ಣ ಧ್ವಜ ಹಿಡಿದು ಅತ್ಯಂತ ಉತ್ಸಾಹದಿಂದ ಭಾರತ ತಂಡವನ್ನು ಬೆಂಬಲಿಸಿದ್ದರು. ಕೆಲವೇ ಕ್ಷಣಗಳಲ್ಲಿ ಈ ವೀಡಿಯೋ ವೈರಲ್ ಆಗಿ ಹರಡಿತ್ತು. ವಿಶ್ವಕಪ್‌ನ ಅಧಿಕೃತ ಟ್ವಿಟರ್‌, ವಿರಾಟ್‌ ಕೊಹ್ಲಿ ಮತ್ತಿತರರ ಟ್ವಿಟರ್‌ ಖಾತೆಗಳಲ್ಲಿ ಅವರ ಫೋಟೊ ವೈರಲ್‌ ಆಗಿದೆ. ಚಾರುಲತಾ ಅವರ ಕ್ರಿಕೆಟ್‌ ಅಭಿಮಾನಕ್ಕೆ ಮನಸೋತ ನೂರಾರು ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಕೊಹ್ಲಿ, 'ಎಲ್ಲ ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನಕ್ಕೆ ಅದರಲ್ಲೂ ವಿಶೇಷವಾಗಿ ಚಾರುಲತಾ ಪಟೇಲ್‌ ಜಿಗೆ ನನ್ನ ಧನ್ಯವಾದಗಳು. ಅವರಿಗೆ 87 ವರ್ಷ. ಇಂಥ ಅಭಿಮಾನಿಯೊಬ್ಬರನ್ನು ಇದುವರೆಗೂ ನಾನು ನೋಡಿರಲಿಲ್ಲ. ವಯಸ್ಸು ಕೇವಲ ಸಂಖ್ಯೆ ಮಾತ್ರ. ಆದರೆ ಉತ್ಸಾಹ ನಿಮ್ಮನ್ನು ಪುಟಿದೇಳುವಂತೆ ಮಾಡುತ್ತದೆ. ಅವರ ಆಶೀರ್ವಾದದೊಂದಿಗೆ ನಾವು ಮುಂದಿನ ಪಂದ್ಯಕ್ಕೆ ಹೋಗುತ್ತಿದ್ದೇವೆ, ಎಂದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2FPRXBu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...