‘ಇನ್ಮೇಲೆ ಸಿಎಂ ವಿಚಾರದ ಬಗ್ಗೆ ಮಾತಾಡಲ್ಲ’; ಶಾಸಕ ಜಮೀರ್‌ ಅಹ್ಮದ್‌ ಹೀಗೆ ಹೇಳಿದ್ಯಾಕೆ?

ಬೆಂಗಳೂರು: ಮುಂದಿನ ಸಿಎಂ ವಿಚಾರದ ಬಗ್ಗೆ ಮಾತನಾಡದಂತೆ ನಮ್ಮ ನಾಯಕರಾದ ಹೇಳಿದ್ದು, ಹಾಗಾಗಿ ಆ ಬಗ್ಗೆ ಮಾತನಾಡುವುದಿಲ್ಲ ಎಂದು ಶಾಸಕ ಜಮೀರ್‌ ಅಹಮ್ಮದ್‌ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗಲು ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್‌ ಸೇರಿದಂತೆ ಎಲ್ಲರಿಗೂ ಆಸೆ ಇರುತ್ತದೆ. ಆದರೆ ಅಂತಿಮ ನಿರ್ಧಾರವನ್ನು ಹೈಕಮಾಂಡ್‌ ಕೈಗೊಳ್ಳಲಿದೆ. ಸಿಎಂ ಆಗಲು ಒಕ್ಕಲಿಗ ಸಮುದಾಯದಿಂದ ಡಿ.ಕೆ.ಶಿವಕುಮಾರ್‌, ಲಿಂಗಾಯಿತ ಸಮುದಾಯದಿಂದ ಎಂ.ಬಿ. ಪಾಟೀಲ್‌ ಅವರಿಗೆ ಆಸೆ ಇದೆ. ಹಾಗೆಯೇ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌, ಅಲ್ಪಸಂಖ್ಯಾತ ವರ್ಗದಿಂದ ಸಿ.ಎಂ. ಇಬ್ರಾಹಿಂ, ತನ್ವೀರ್‌ ಸೇಠ್‌ ಎಲ್ಲರಿಗೂ ಆಸೆ ಇರುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ತಿಳಿಸಿದರು. ಸಿಎಂ ಸ್ಥಾನ ಅಲ್ಪಸಂಖ್ಯಾತರಿಗೂ ಸಿಗಬೇಕು ಎಂಬ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್‌ ಅಹಮ್ಮದ್‌, ಈ ಬಗ್ಗೆ ಜನ ಹಾಗೂ ಹೈಕಮಾಂಡ್‌ ತೀರ್ಮಾನಿಸಬೇಕು. ದಲಿತ ಸಿಎಂ ವಿಚಾರವನ್ನೂ ಅವರೇ ನಿರ್ಧರಿಸಬೇಕು. ನಾನು ಸಿಎಂ ಅಭ್ಯರ್ಥಿಯಲ್ಲ. ಆ ಮಟ್ಟಕ್ಕೆ ಇನ್ನೂ ನಾನು ಹೋಗಿಲ್ಲ. ನನ್ನನ್ನು ಎಲ್‌ಕೆಜಿ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಎಲ್‌ಕೆಜಿಯವನಿಗೆ ಆ ಸ್ಥಾನ ಸಿಗುತ್ತಾ? ಇದೀಗ ತನ್ವೀರ್‌ ಸೇಠ್‌ ತಾವೂ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಸಿಎಂ ಇಬ್ರಾಹಿಂ ಆಕಾಂಕ್ಷಿ ಎನ್ನುತ್ತಿದ್ದಾರೆ. ನನ್ನನ್ನು ಸೆಕೆಂಡರಿ ಸ್ಕೂಲ್‌ಗೆ ಹೋಲಿಸಿದ್ದು, ನಾನು ಹೇಗೆ ಆ ಸ್ಥಾನಕ್ಕೆ ಹೋಗಲು ಸಾಧ್ಯ? ಎಂದು ಕುಟುಕಿದರು.


from India & World News in Kannada | VK Polls https://ift.tt/36bcq0A

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...