ಹೊಸದಿಲ್ಲಿ: ಭಾರತ ಮತ್ತು ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ಶೀಘ್ರವೇ ಮತ್ತೆ ಶುರುವಾಗಲಿದೆ ಎಂದು ಪಾಕಿಸ್ತಾನ ತಂಡದ ಅಕಾಶವಂಚಿತ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಕಮ್ರಾನ್ ಅಕ್ಮಲ್ ವಿಶ್ವಾಸ ಹೊರಹಾಕಿದ್ದಾರೆ. ಎರಡೂ ರಾಷ್ಟ್ರಗಳ ನಡುವೆ ಇರುವ ರಾಜಕೀಯ ಬಿಕ್ಕಟ್ಟಿನ ಪರಿಣಾಮ ಇತ್ತಂಡಗಳ ನಡುವೆ ಕ್ರಿಕೆಟ್ ಸರಣಿ ನಡೆದಿಲ್ಲ. 2007ರ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಮುಖಾಮುಖಿಯಾಗದ ತಂಡಗಳು, 2012ರಲ್ಲಿ ಸೀಮಿತ ಓವರ್ಗಳ ಸರಣಿಗಳಲ್ಲಿ ಪೈಪೋಟಿ ನಡೆಸಿದ್ದವು. ಇದೀಗ ಬರಿ ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿ ಆಗುತ್ತಾ ಬಂದಿವೆ. ಈ ಬಗ್ಗೆ ಮಾತನಾಡಿರುವ ಕಮ್ರಾನ್ ಅಕ್ಮಲ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ () ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಭಾರತ-ಪಾಕಿಸ್ತಾನ ನಡುವಣ ಕ್ರಿಕೆಟ್ ಸರಣಿ ಆರಂಭಿಸುವ ಬಯಕೆ ಇದೆ ಎಂದಿದ್ದಾರೆ. " ಬಿಸಿಸಿಐನ ಅಧ್ಯಕ್ಷ ಆಗಿರುವುದೇ ಇಲ್ಲಿ ಬಹುದೊಡ್ಡ ಸಂಗತಿ. ಪಾಕಿಸ್ತಾನ ವಿರುದ್ಧ ಅವರು ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಎರಡೂ ದೇಶಗಳ ನಡುವಣ ಕ್ರಿಕೆಟ್ ಸರಣಿಯ ಮಹತ್ವದ ಬಗ್ಗೆ ಅವರಿಗೆ ಅರಿವಿದೆ. ಕ್ರಿಕೆಟ್ ಎರಡೂ ರಾಷ್ಟ್ರದ ಬಾಂಧವ್ಯವನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ. ಗಂಗೂಲಿಗೂ ಇದರ ಬಯಕೆ ಇದೆ. ಅವರೊಟ್ಟಿಗೆ ನಾನು ಆಡಿದ್ದೇನೆ. ಅವರ ಮನಸ್ಸಿನಲ್ಲಿ ಇರುವುದನ್ನು ಅರ್ಥಮಾಡಿಕೊಳ್ಳಬಲ್ಲೆ. ಹೀಗಾಗಿ ಶೀಘ್ರವೇ ಭಾರತ-ಪಾಕಿಸ್ತಾನ ನಡುವಣ ಸರಣಿ ಆರಂಭಾಗಲಿದೆ ಎಂದನಿಸುತ್ತಿದೆ. ಅವರೇ ಮೊದಲ ಹೆಜ್ಜೆ ತೆಗೆದುಕೊಳ್ಳಲಿದ್ದಾರೆ," ಎಂದು 39 ವರ್ಷದ ಅಕ್ಮಲ್ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. "ಕನಿಷ್ಠ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಆದರೂ ಭಾರತ ತಂಡ ಪಾಕಿಸ್ತಾನಕ್ಕೆ ಬಂದು ಮತ್ತು ಪಾಕಿಸ್ತಾನ ಭಾರತಕ್ಕೆ ತೆರಳಿ ಟೆಸ್ಟ್ ಆಡಿದರೆ ಉತ್ತಮ ಕ್ರಿಕೆಟ್ ವೀಕ್ಷಿಸಲು ಸಾಧ್ಯವಾಗಲಿದೆ. ಇದರಿಂದ ಬಾಂಧವ್ಯ ಸುಧಾರಿಸಲಿದೆ," ಎಂದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ykzPZE