ದಲಿತ ಸಿಎಂ ಸವಾಲು ಹಾಕಲು ಕಾಂಗ್ರೆಸ್‌ಗೆ ಯಾವ ನೈತಿಕತೆ ಇದೆ? ಈಶ್ವರಪ್ಪ ಆಕ್ರೋಶ

ಚಿತ್ರದುರ್ಗ: ಕಾಂಗ್ರೆಸ್‌ನ ಆಳ್ವಿಕೆಯ ಸುದೀರ್ಘ ಅವಧಿಯಲ್ಲಿ ದಲಿತರನ್ನು ಸಿಎಂ ಮಾಡದೇ ಬಿಜೆಪಿಗೆ ಮಾಡಿ ಅಂತ ಸವಾಲು ಹಾಕುವ ನೈತಿಕತೆ ಎಲ್ಲಿದೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್‌ ಸಚಿವ ಪ್ರಶ್ನಿಸಿದರು. ಪಂಚಾಯಿತಿ ರಾಜ್‌ ಇಲಾಖೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದರು. "ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ನವರು ಇವತ್ತಿನ ತನಕ ಎಷ್ಟು ಜನ ದಲಿತರನ್ನು ಸಿಎಂ ಮಾಡಿದ್ದಾರೆ? ಸಿದ್ಧರಾಮಯ್ಯರಿಗೆ ನೇರವಾಗಿ ಪ್ರಶ್ನೆ ಕೇಳಲು ಇಷ್ಟಪಡ್ತೀನಿ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆಯ್ತಲ್ಲ, ಕಾಂಗ್ರೆಸ್‌ ತಾನೇ ಅತಿ ಹೆಚ್ಚು ಆಡಳಿತ ನಡೆಸಿರೋದು? ಎಷ್ಟು ಜನ ದಲಿತ ಸಿಎಂಗಳನ್ನು ಮಾಡಿದ್ದಾರೆ? ಯೋಗ್ಯತೆ ಇಲ್ಲದಿರುವ ಬಿಜೆಪಿ ಬಗ್ಗೆ ಸವಾಲು ಹಾಕುವ ಅವಶ್ಯಕತೆ ಇರಲಿಲ್ಲ" ಎಂದರು. "ಕರ್ನಾಟಕದಲ್ಲಿ ದಲಿತರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗಲು ಬಿಡಲಿಲ್ಲ. ಅವರನ್ನು ತುಳಿದಿದ್ದೇವೆ ಅಂತ ಕಾಂಗ್ರೆಸ್‌ನವರು ಒಪ್ಪಿಕೊಳ್ಳಲಿ. ‘ನಾವು ತುಳಿದಿದ್ದೇವೆ, ನೀವಾದ್ರೂ ಮಾಡಿ ಅಂತ ಕೇಳಿದ್ರೆ ಅದಕ್ಕೆ ಬೆಲೆ ಇದೆ’. ನೀವು ಮಾಡೋಕೆ ಆಗಲ್ಲ. ಪ್ರತಿ ಸಾರಿ ‘ನಾನೇ ಮುಖ್ಯಮಂತ್ರಿ, ಮುಂದೂ ನಾನೇ ಸಿಎಂ’ ಅಂತ ಹೇಳೋ ಸಿದ್ದರಾಮಯ್ಯನವರು ಕಟೀಲ್‌ರ ಬಗ್ಗೆ ಸವಾಲು ಹಾಕೋದಕ್ಕೆ ಏನು ನೈತಿಕತೆ ಇದೆ?" ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ನಾನೇ ಸಿಎಂ ಅಂತ ಹೇಳಿ ತೊಟ್ಟಿಲು ಚಿವುಟೋದು, ನಂತರ ಹಾಗಂತ ಹೇಳ್ಬೇಡ್ರಿ ಅಂತ ಬೆಂಬಲಿಗರನ್ನು ಸಮಾಧಾನ ಮಾಡೋದು. ಇವರಿಗೆ ಬಿಜೆಪಿಯನ್ನು ದೂರಲು, ಸವಾಲು ಹಾಕುವ ಯೋಗ್ಯತೆ ಇದೆಯಾ? ದಲಿತ ರಾಷ್ಟ್ರಪತಿ ಮಾಡಿದ್ದು ಯಾರು? ಎಷ್ಟು ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ್ದೇವೆ? ಈಗ ಕರ್ನಾಟಕ ರಾಜ್ಯದ ರಾಜ್ಯಪಾಲರು ದಲಿತರೆ ಎಂದು ಹೇಳಿದರು. "ಬಿಜೆಪಿಯಲ್ಲಿ ರಾಷ್ಟ್ರಭಕ್ತಿ ಇರೋರಿಗೆ ಮಾಡುತ್ತೇವೆಯೇ ವಿನಃ ಜಾತಿ ನೋಡೋದಿಲ್ಲ. ಜಾತಿ ಹುಡುಕಿ, ಸಾಮಾಜಿಕ ನ್ಯಾಯ ಕೊಡ್ತೀವಿ ಅಂತ ಹೇಳ್ದೋರು ಧರಂ ಸಿಂಗ್‌ರನ್ನು ಉದ್ಧಾರ ಆಗಲು ಬಿಡಲಿಲ್ಲ. ಪರಮೇಶ್ವರ್‌ ಅವರನ್ನು ಇದೇ ಸಿದ್ಧರಾಮಯ್ಯ ಸೋಲಿಸಿದರು" ಎಂದು ಆರೋಪಿಸಿದರು.


from India & World News in Kannada | VK Polls https://ift.tt/3yeWqqV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...