ಹೊಸದಿಲ್ಲಿ: ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಸರಣಿ ಆಡಲು ಎದುರು ನೋಡುತ್ತಿರುವ ಉದಯೋನ್ಮುಖ ಆರಂಭಿಕ ಬ್ಯಾಟ್ಸ್ಮನ್ , ಕೋಚ್ ಅವರ ಅಡಿಯಲ್ಲಿ ಆಡುವ ಆನಂದ ವಿಭಿನ್ನವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿರುವ ಶಿಖರ್ ಧವನ್ ನಾಯಕತ್ವದ ಭಾರತ ತಂಡ ಮೂರು ಪದ್ಯಗಳ ಓಡಿಐ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಕೆಗಳನ್ನು ಎದುರಿಸಿದ್ದ ಪೃಥ್ವಿ ಶಾ, 2021ರ ಐಪಿಎಲ್ ಟೂರ್ನಿಯಲ್ಲಿ ತೋರಿದ್ದ ಅದ್ಭುತ ಫಾರ್ಮ್ನೊಂದಿಗೆ ಇದೀಗ ಲಂಕೆಯಲ್ಲಿದ್ದಾರೆ ಹಾಗೂ ನಾಯಕ ಧವನ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲು ಎದುರು ನೋಡುತ್ತಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್ ಜೊತೆ ನಡೆಸಿದ ಸಂಭಾಷಣೆಯಲ್ಲಿ ಪೃಥ್ವಿ ಶಾ, "ರಾಹುಲ್ ಸರ್ ಅಡಿಯಲ್ಲಿ ಆಡುವಾಗ ವಿಭಿನ್ನ ರೀತಿಯ ಆನಂದ ಲಭಿಸುತ್ತದೆ. ಅವರು ನಮ್ಮ 19 ವಯೋಮಿತಿ ಭಾರತ ತಂಡದ ಕೋಚ್ ಆಗಿದ್ದರು. ಅವರು ಮಾತನಾಡುವ ಹಾದಿ, ತಮ್ಮ ಕೋಚಿಂಗ್ ಅನುಭವ ಹಂಚಿಕೊಳ್ಳುವ ಹಾದಿ ಸೇರಿದಂತೆ ಎಲ್ಲವೂ ಅದ್ಭುತವಾಗಿದೆ," ಎಂದು ಹೇಳಿದರು. "ಅವರು(ದ್ರಾವಿಡ್) ಆಟದ ಬಗ್ಗೆ ಮಾತನಾಡುವಾಗಲೆಲ್ಲಾ, ಅವರು ಎಷ್ಟೊಂದು ಅನುಭವವನ್ನು ಟೇಬಲ್ ಮೇಲೆ ತರುತ್ತಾರೆ ಎಂದು ಭಾಸವಾಗುತ್ತದೆ. ಅವರಿಗೆ ಕ್ರಿಕೆಟ್ ಬಗ್ಗೆ ಎಲ್ಲವೂ ತಿಳಿದಿದೆ. ಪರಿಸ್ಥಿತಿಗಳ ಕುರಿತು ಅವರು ಮಾತನಾಡುವ ರೀತಿ ಮತ್ತು ಅವುಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ಅವರು ನೀಡುವ ಸಲಹೆ ಅತ್ಯುತ್ತಮವಾಗಿರುತ್ತದೆ," ಎಂದು ತಿಳಿಸಿದರು. ರಾಹುಲ್ ದ್ರಾವಿಡ್ ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಲು ಎದುರು ನೋಡುತ್ತಿದ್ದೇನೆ ಎಂದು 21 ಪ್ರಾಯದ ಯುವಕ ಹೇಳಿದ್ದಾರೆ. "ರಾಹುಲ್ ಸರ್ ಇದ್ದರೆ, ಡ್ರೆಸ್ಸಿಂಗ್ ರೂಂ ಶಿಸ್ತಿನಿಂದ ಕೂಡಿರುತ್ತದೆ ಎಂದು ಒಂದು ಅಂಶವನ್ನು ನಾವು ನಿರೀಕ್ಷಿಸಬಹುದು. ಫ್ರಾಕ್ಟೀಸ್ ಸೆಷನ್ಗಾಗಿ ನಾನು ನಿರೀಕ್ಷಿಸುತ್ತಿದ್ದೇನೆ. ಏಕೆಂದರೆ, ಈ ವೇಳೆ ರಾಹುಲ್ ಸರ್ ಜೊತೆ ಗಂಟೆಗಟ್ಟಲೇ ಮಾತನಾಡಬೇಕಾಗಿದೆ. ಈ ಪ್ರವಾಸದಲ್ಲಿ ಅವಕಾಶಗಳನ್ನು ಸದುಪಡಿಸಿಕೊಳ್ಳಬೇಕೆಂದು ಅಂದುಕೊಂಡಿದ್ದೇನೆ ಹಾಗೂ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಬಯಸಿದ್ದೇನೆ. ಭಾರತ ತಂಡವಾಗಲಿ, ರಣಜಿ ತಂಡವಾಗಲಿ, ಕ್ಲಬ್ ಅಥವಾ ಶಾಲಾ ತಂಡವಾಗಲಿ, ಯಾವಾಗಲೂ ತಾನು ಆಡುವ ತಂಡವನ್ನು ಅಗ್ರ ಸ್ಥಾನದಲ್ಲಿ ಉಳಿಸಲು ಎದುರು ನೋಡುತ್ತಿರುತ್ತೇನೆ,"ಎಂದು ಪೃಥ್ವಿ ಶಾ ತಿಳಿಸಿದರು. 2021ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಅವರು ಪೃಥ್ವಿ ಶಾ ಅವರ ಅಸಾಂಪ್ರದಾಯಿಕ ಅಭ್ಯಾಸದ ಬಗ್ಗೆ ಬಹಿರಂಗಪಡಿಸಿದ್ದರು. ಪಂದ್ಯಗಳಲ್ಲಿ ಸಂಗತಿಗಳು ತಮ್ಮ ಪರವಾಗಿ ಇಲ್ಲದೇ ಇದ್ದರೆ, ಅವರು ನೆಟ್ಸ್ನಲ್ಲಿ ಅಭ್ಯಾಸ ಮಾಡಿ ಅವುಗಳನ್ನು ಸರಿಪಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾ, "ಈಗಲೂ ಅಷ್ಟೇ ನಾನು ಅದನ್ನೇ ಪಾಲಿಸುತ್ತೇನೆ. ಸಂಗತಿಗಳು ನನ್ನ ಪಾಲಿನೆ ಇಲ್ಲದೇ ಇರುವಾಗ, ನಾನು ಕಠಿಣ ಪರಿಶ್ರಮ ಪಟ್ಟಿದ್ದೇ ಆದಲ್ಲಿ ವೈಯಕ್ತಿಕವಾಗಿ ಇದು ನನಗೆ ವರ್ಕ್ಔಟ್ ಆಗುವುದಿಲ್ಲ. ತಾನು ಸಿಕ್ಕಾಪಟ್ಟೆ ಕಷ್ಟ ಪಡುತ್ತಿದ್ದೇನೆಂದು ಇನ್ನೊಬ್ಬರಿಗೆ ತೋರಿಸುವ ವ್ಯಕ್ತಿ ನಾನಲ್ಲ. ನನ್ನನ್ನು ನಾನೇ ಮುಂದಕ್ಕೆ ತಳ್ಳಲು ಪ್ರಯತ್ನಿಸುವುದಿಲ್ಲ. ಒಂದು ವೇಳೆ ಇಂತಹ ಸನ್ನಿವೇಶಗಳು ಎದುರಾದರೆ, ಬ್ರೇಕ್ ಪಡೆದುಕೊಳ್ಳುತ್ತೇನೆ ಹಾಗೂ ನನ್ನಲ್ಲಿ ಉತ್ತಮ ಭಾವನೆಗಳನ್ನು ಉಂಟಾದಾಗ ಮತ್ತೊಮ್ಮೆ ಆರಂಭಿಸುತ್ತೇನೆ," ಎಂದು ಪೃಥ್ವಿ ಶಾ ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jItYZS