ಹರಿಹರದಲ್ಲಿ ಹುಡುಗಿಗಾಗಿ ಗೆಳೆಯರ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ..!

(): ಯುವತಿ ವಿಚಾರವಾಗಿ ಇಬ್ಬರು ಸ್ನೇಹಿತರ ಮಧ್ಯೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ, ನಗರದ ಹೊರವಲಯದಲ್ಲಿ ಬುಧವಾರ ಬೆಳಕಿಗೆ ಬಂದಿದ್ದು, ಜನರಲ್ಲಿ ತಲ್ಲಣ ಸೃಷ್ಟಿಸಿದೆ. ನಗರದ ವಿದ್ಯಾನಗರ ನಿವಾಸಿ ಅಕ್ಬರ್‌ ಖಾನ್‌ರ ಪುತ್ರ ಡಿಪ್ಲೊಮಾ ವಿದ್ಯಾರ್ಥಿ ಅಫ್ತಾಬ್‌ ಖಾನ್‌ (21) ಕೊಲೆಗೀಡಾದ . ಘಟನೆ ವಿವರ: ಅಕ್ಬರ್‌ ಖಾನ್‌ ನಗರದ ತೆಗ್ಗಿನಕೇರಿಯಲ್ಲಿ ಟಿ.ವಿ. ಕೇಬಲ್‌ ಆಪರೇಟರ್‌ ಕೆಲಸ ಮಾಡುತ್ತಾರೆ. ಎಂದಿನಂತೆ ಪುತ್ರ ಅಫ್ತಾಬ್‌ ಖಾನ್‌ ಸೋಮವಾರ ಬೆಳಗ್ಗೆ 10.30ಕ್ಕೆ ತೆಗ್ಗಿನಕೇರಿಗೆ ಕೇಬಲ್‌ ರಿಪೇರಿ ಕೆಲಸಕ್ಕೆ ಹೋಗಿದ್ದ. ರಾತ್ರಿಯಾದರೂ ಅಫ್ತಾಬ್‌ ಮನೆಗೆ ಬಾರದ್ದರಿಂದ ತಂದೆ ಅಕ್ಬರ್‌ ಖಾನ್‌ ಮನೆಯಲ್ಲಿ ವಿಚಾರಿಸಿದಾಗ ಆತ ಸ್ನೇಹಿತ ವಿದ್ಯಾನಗರ ವಾಸಿ ರೋಷನ್‌ (23) ಜತೆಗೆ ಹೋಗಿದ್ದಾನೆಂದು ತಿಳಿಯಿತು. ಆಗ ರೋಷನ್‌ನನ್ನು ಮಂಗಳವಾರ ಭೇಟಿ ಮಾಡಿ ವಿಚಾರಿಸಿದಾಗ ಮಾಹಿತಿ ಸಿಗಲಿಲ್ಲ. ಹುಡುಕಾಟ ಬಿಡದ ಪೋಷಕರು ಪುನಃ ಬುಧವಾರ ಬೆಳಗ್ಗೆ ರೋಷನ್‌ ಮನೆಗೆ ಬಂದು ವಿಚಾರಿಸಿದಾಗ, ಹೊರವಲಯದ ಹೊಸ ಕೆಎಚ್‌ಬಿ ಕಾಲೋನಿಯ ಶೇರಾಪುರದ ಕಾಲುವೆ ಹತ್ತಿರಕ್ಕೆ ಕರೆದೊಯ್ದ ಆರೋಪಿ, ನಿಮ್ಮ ಮಗ ನನ್ನ ಹುಡುಗಿಗೆ ಫೋನ್‌, ಮೆಸೇಜ್‌ ಮಾಡುತ್ತಿದ್ದ. ಈ ವಿಚಾರವಾಗಿ ಸೋಮವಾರ ಸಂಜೆ 6ಕ್ಕೆ ಗಲಾಟೆ ನಡೆಯಿತು. ನಾನು ಅವನನ್ನು ಈ ಕಾಲುವೆಗೆ ತಳ್ಳಿ ಹೋಗಿದ್ದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಆಗ ಕಾಲುವೆಗೆ ಇಳಿದು ಪರಿಶೀಲಿಸಿದಾಗ ಮಗ ಅಫ್ತಾಬ್‌ನ ಚಪ್ಪಲಿ, ಮೊಬೈಲ್‌, ಮೃತ ದೇಹ ಪತ್ತೆಯಾಯಿತು. ಅಕ್ಬರ್‌ ಖಾನ್‌ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸರು ಪರೀಶಿಲನೆ ಮಾಡಿ ಪರಾರಿಯಾಗಿದ್ದ ಆರೋಪಿ ರೋಷನ್‌ ಅಲಿಯಾಸ್‌ ರಿಹಾನ್‌ ಮಲ್ಲಿಕ್‌ನನ್ನು ಬಂಧಿಸಿದ್ದಾರೆ. ಘಟನೆಯು ನಗರದ ಜನರಲ್ಲಿಆತಂಕ ಸೃಷ್ಟಿಸಿದೆ.


from India & World News in Kannada | VK Polls https://ift.tt/3uMJhCD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...