ಕೃಷಿಕರ ತಲುಪದ ಯಂತ್ರಧಾರೆ; ಇಂಧನ ಬೆಲೆ ಏರಿಕೆ, ಯಂತ್ರಗಳ ಬಾಡಿಗೆ ಹೆಚ್ಚಳ ಸಾಧ್ಯತೆ!

ಆದರ್ಶ ಕೋಡಿ, ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜತೆಗೆ ಕೃಷಿ ಯಂತ್ರೋಪಕರಣಗಳಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಶುರುವಾಗಿದೆ. ರೈತರಿಗೆ ಗಗನ ಕುಸುಮವಾಗಿರುವ ಯಂತ್ರಗಳಾದ ಹೊಲ ಉಳುವ ಟ್ರ್ಯಾಕ್ಟರ್‌ಗಳಿಗೆ ಅದರಲ್ಲೂ ಸರಕಾರದ ಕೃಷಿ ಯಂತ್ರಧಾರೆ ಯೋಜನೆಯಡಿ ಆಧಾರದಲ್ಲಿ ನೀಡಲಾಗುವ ಟ್ರ್ಯಾಕ್ಟರ್‌ ಸೇರಿದಂತೆ ಕೃಷಿ ಯಂತ್ರೋಪಕರಣಗಳಿಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿದೆ. ಬೇಡಿಕೆಗೆ ಅನುಗುಣವಾಗಿ ಕೃಷಿ ಯಂತ್ರೋಪಕರಣಗಳ ಪೂರೈಕೆ ಮಾಡಲು ಇಲಾಖೆ ಪ್ರಯತ್ನಿಸುತ್ತಿದ್ದರೂ ರೈತರಲ್ಲಿ ಯೋಜನೆ ಕುರಿತಾದ ಮಾಹಿತಿ ಕೊರತೆಯಿದ್ದು, ಜೂನ್‌ ತಿಂಗಳ ಆರಂಭದಲ್ಲಿ ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳಲ್ಲಿ ಉಳುಮೆ ಟ್ರ್ಯಾಕ್ಟರ್‌, ನಾಟಿ ಮಾಡುವ ಯಂತ್ರ, ಡಿಗ್ಗರ್‌ ಔಷಧ ಸಿಂಪಡಣೆ ಮಾಡುವ ಯಂತ್ರ ಸೇರಿದಂತೆ 17 ವಿವಿಧ ರೀತಿಯ ಯಂತ್ರಗಳನ್ನು ಬಾಡಿಗೆಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಶುರುವಾಗುತ್ತಿದ್ದಂತೆಯೇ ಕೃಷಿ ಯಂತ್ರಗಳ ಬೇಡಿಕೆ ಹೆಚ್ಚಿದೆ. ಇನ್ನಷ್ಟು ರೈತರಿಗೆ ಮಾಹಿತಿ ಹಾಗೂ ಯಂತ್ರಗಳನ್ನು ಒದಗಿಸುವುದು ಅಗತ್ಯವಾಗಿದೆ. ಬಾಡಿಗೆಗೆ ಪಡೆಯುವುದು ಹೇಗೆ?ಯಂತ್ರಗಳನ್ನು ಬಾಡಿಗೆ ಪಡೆಯಲು ರೈತರು ತಮ್ಮ ಹೋಬಳಿಯ ಬಾಡಿಗೆ ಕೇಂದ್ರಕ್ಕೆ ಹೋಗಿ ಮುಂಗಡ ಹಣ ಪಾವತಿಸಿ ಬೇಕಾದ ಯಂತ್ರವನ್ನು ಕಾಯ್ದಿರಿಸಬಹುದು. ಕೆಲವೊಮ್ಮೆ, ಏಕಕಾಲದಲ್ಲಿ ಎಲ್ಲ ರೈತರಿಗೆ ಒಂದೇ ಬಗೆಯ ಯಂತ್ರಗಳು ಬೇಕಾಗುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಯಂತ್ರಗಳ ಲಭ್ಯತೆ ನೋಡಿಕೊಂಡು, ಬೇಕಾದ ದಿನಕ್ಕಿಂತ ಒಂದು ವಾರ ಮುಂಚಿತವಾಗಿ ಕಾದಿರಿಸಬಹುದಾಗಿದೆ. ಯಂತ್ರೋಪಕರಣಗಳ ಬಾಡಿಗೆಯ ವಿವರ ಮತ್ತು ಅಲ್ಲಿ ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲ ಯಂತ್ರೋಪಕರಣಗಳ ಬಾಡಿಗೆ ಕೇಂದ್ರದಲ್ಲಿ ದೊರೆಯುತ್ತದೆ. ನೋಂದಣಿ ಮಾಡಿಸಿರೈತರಿಗೆ ಗುಣಮಟ್ಟದ ಸೇವೆ ನೀಡಲು ಹಾಗೂ ಸುಲಭವಾಗಿ ಗುರುತಿಸಲು ಅವರಿಗಿರುವ ಭೂಮಿ, ಬೆಳೆಯುವ ಬೆಳೆಗಳು, ಗ್ರಾಮ, ಫೋನ್‌ ನಂಬರ್‌, ಪಂಚಾಯಿತಿ, ಬೇರೆ ಬೇರೆ ಕಾಲದಲ್ಲಿ ಬೆಳೆಯುವ ಬೆಳೆಗಳ ವಿವರ, ಪಹಣಿ ಪತ್ರದ ಜೆರಾಕ್ಸ್‌- ಹೀಗೆ ಎಲ್ಲವನ್ನು ಕೊಟ್ಟು ನೋಂದಣಿ ಮಾಡಿಸಿ. ವಿವರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿಟ್ಟು ಅವರಿಗೆ ಪ್ರತ್ಯೇಕ ಗುರುತು ಸಂಖ್ಯೆ ನೀಡುತ್ತಾರೆ. ಇದುವರೆಗೂ 30 ಸಾವಿರಕ್ಕೂ ಹೆಚ್ಚು ಸೇವೆಯನ್ನು ಯಂತ್ರಗಳು ನೀಡಿದ್ದರೂ ಗ್ರಾಮೀಣ ಭಾಗಗಳಿಗೆ ಮಾಹಿತಿ ತಲುಪಿಸುವ ಅಗತ್ಯವಿದೆ. ಪ್ರಮುಖಾಂಶಗಳು
  • ಜಿಲ್ಲೆಯ ರೈತರಲ್ಲಿಲ್ಲ ಯಂತ್ರಧಾರೆ ಮಾಹಿತಿ
  • ಜಿಲ್ಲೆಯ 17 ಹೋಬಳಿ ಕೇಂದ್ರದಲ್ಲಿ ಬಾಡಿಗೆ ಕೇಂದ್ರಗಳು
  • ಗಂಟೆಗೆ 200-400 ರೂ. ಬಾಡಿಗೆ ಉಳಿತಾಯ
  • ಬಿತ್ತನೆಯಿಂದ ಕಟಾವಿನವರೆಗಿನ ಎಲ್ಲ ಯಂತ್ರಗಳು ಲಭ್ಯ
ಖಾಸಗಿ ಯಂತ್ರಗಳಿಗಿಂತ ಬಾಡಿಗೆ ಕಡಿಮೆ ಜಿಲ್ಲೆಯ ರೈತರು ಕಾರ್ಮಿಕರ ಸಮಸ್ಯೆಯಿಂದ ಕೃಷಿಗೆ ಅವಶ್ಯಕ ಯಂತ್ರಗಳನ್ನು ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಾಡಿಗೆ ನೀಡಿ ಪಡೆಯುತ್ತಾರೆ. ಆದರೆ ಬಾಡಿಗೆ ಕೇಂದ್ರದಲ್ಲಿ ನೋಂದಾಯಿಸಿಕೊಂಡರೆ ಯಂತ್ರಗಳನ್ನು ಕಳುಹಿಸಿಕೊಡುವಾಗ ಜತೆಗೆ ನುರಿತ ಚಾಲಕರನ್ನೂ ಕಳುಹಿಸಿ ಕೊಡಲಾಗುತ್ತದೆ. ಯಂತ್ರ ನಿಮ್ಮ ಗದ್ದೆಗೆ ಇಳಿದ ನಂತರ ಬಾಡಿಗೆ ನೀಡಬೇಕಾದ ಸಮಯ ಆರಂಭವಾಗುತ್ತದೆ. ಸಮಯದ ಲೆಕ್ಕಾಚಾರವನ್ನು ಆ ಯಂತ್ರವನ್ನು ಚಲಿಸುವವರೇ ನೋಡಿಕೊಳ್ಳುತ್ತಾರೆ. ಚಾಲಕನಿಗೆ ಹಣ ನೀಡಬೇಕಾದ ಅಗತ್ಯವಿಲ್ಲ. ಕೆಲವೊಂದು ಚಾಲಕ ರಹಿತ ಯಂತ್ರಗಳು ಅಂದರೆ ನಾವೇ ಬಳಸಬಹುದಾದ ಡೀಸೆಲ್‌ ಪಂಪು, ಗರಗಸ, ಸ್ಪ್ರೇ ಯರ್‌ ಮುಂತಾದ ಯಂತ್ರೋಪಕರಣಗಳನ್ನು ಬಳಕೆ ಮಾಡಿದ ನಂತರ ಕೇಂದ್ರಕ್ಕೆ ಹಿಂದಿರುಗಿಸಬೇಕಿದ್ದು ಯಂತ್ರಗಳ ಬಾಡಿಗೆಯು ಕೂಡ ಕೈಗೆಟುಕುವಂತಿರುತ್ತದೆ. ರೈತರಿಗೆ ಬಿತ್ತನೆಯಿಂದ ಕಟಾವಿನವರೆಗೂ ಎಲ್ಲಾ ರೀತಿಯ ಯಂತ್ರಗಳು ಬಾಡಿಗೆ ದೊರೆಯುತ್ತದೆ. ಯಂತ್ರಗಳಿಗನುಸಾರವಾಗಿ ಬಾಡಿಗೆಯಿದ್ದು, ಜಿಲ್ಲೆಯ ರೈತರು ಇದನ್ನು ಬಳಸಿಕೊಳ್ಳಬಹುದಾಗಿದೆ. ವಿನುತಾ ಎಂ.ಸಿ., ಉಪ ನಿರ್ದೇಶಕಿ , ಕೃಷಿ ಇಲಾಖೆ ಬೆಂ.ಗ್ರಾ. ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಜಿಲ್ಲೆಯಲ್ಲಿನ 34,131 ರೈತರಿಗೆ ಸೌಲಭ್ಯ ಒದಗಿಸಲಾಗಿದ್ದು 1,04 ,581 ಗಂಟೆಗಳ ಕಾಲ ಕೆಲಸವಾಗಿದ್ದು, ಹೆಚ್ಚಿನ ರೈತರು ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ನಿಂಗಪ್ಪ, ಸಿಎಚ್‌ಸಿಸಿ ಯೋಜನಾಧಿಕಾರಿ, ದೊಡ್ಡಬಳ್ಳಾಪುರ ಹೋಬಳಿ ಕೇಂದ್ರದಲ್ಲಿರುವ ಬಾಡಿಗೆ ಕೇಂದ್ರಗಳ ಮಾಹಿತಿ ಹಳ್ಳಿಯಲ್ಲಿನ ರೈತರನ್ನು ತಲುಪುತ್ತಿಲ್ಲ. ಖಾಸಗಿ ವ್ಯಕ್ತಿಗಿಂತ ಇದರಲ್ಲಿ ಬಾಡಿಗೆ ಕಡಿಮೆಯಿದೆ. ಈ ಯೋಜನೆಯನ್ನು ಗ್ರಾಪಂ ಮಟ್ಟಕ್ಕೆ ತಂದರೆ ಬಹಳಷ್ಟು ರೈತರಿಗೆ ಸಹಾಯಕವಾಗಲಿದೆ. ಸತೀಶ್‌ ಕಾರ್ಯದರ್ಶಿ, ರೈತ ಸಂಘ ಬೆಂ.ಗ್ರಾ


from India & World News in Kannada | VK Polls https://ift.tt/3h84K4j

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...