ವಿಜಯೇಂದ್ರ ಕೇವಲ ಸಿಎಂ ಪುತ್ರ ಅಷ್ಟೇ, ಗ್ರಾಪಂ ಸದಸ್ಯ ಕೂಡ ಅಲ್ಲ: ಧ್ರುವ ನಾರಾಯಣ ವ್ಯಂಗ್ಯ

ರಾಯಚೂರು : ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ಕೇವಲ ಸಿಎಂ ಪುತ್ರ ಅಷ್ಟೇ. ಅವರು ಗ್ರಾಪಂ ಸದಸ್ಯರೂ ಅಲ್ಲ. ಅವರಿಗೆ ಕಾಂಗ್ರೆಸ್ ಕುರಿತು ಟೀಕಿಸುವ ಅರ್ಹತೆಯೂ ಇಲ್ಲ. ಬಿಜೆಪಿಯವರು ಮೊದಲು ಶಾಸಕ ಬಸನಗೌಡ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಲಿ ಎಂದು ಮಸ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸವಾಲು ಹಾಕಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ವಿಜಯೇಂದ್ರ ವಿರುದ್ಧ ಅನೇಕ ಗುರುತರ ಆಪಾದನೆ ಮಾಡಿದ್ದಾರೆ. ಸಿಎಂ ಅವರ ಕಚೇರಿಯಲ್ಲಿ ಹಸ್ತಕ್ಷೇಪ, ಸಿಎಂ ಹೆಲಿಕಾಪ್ಟರ್ ಬಳಸದಿದ್ದರೂ ಯಾವಾಗಲೂ ಹೆಲಿಕಾಪ್ಟರ್ ನಲ್ಲೇ ವಿಜಯೇಂದ್ರ ಸಂಚಾರ. ಮಾರಿಷಿಯಸ್ ಗೆ ಮೇಲಿಂದ ಮೇಲೆ ಭೇಟಿ ನೀಡಿಕೆಯಂಥ ಆರೋಪ ಯತ್ನಾಳ್ ಮಾಡಿದ್ದಾರೆ. ಅದಕ್ಕೆ ಮೊದಲು ವಿಜಯೇಂದ್ರ ಮೊದಲು ಉತ್ತರಿಸಬೇಕು ಎಂದರು. ಬಿಜೆಪಿಯಲ್ಲಿ ಶಿಸ್ತು ಹಾಗೂ ಸ್ವಾಭಿಮಾನ ಎರಡೂ ಮಾಯವಾಗಿದೆ‌. ವಿಜಯೇಂದ್ರ ಮಸ್ಕಿಯಲ್ಲಿ ಯಾವುದೇ ರೀತಿಯ ಪ್ರಭಾವ ಬೀರಲಾರರು. ಅವರು ಪ್ರಚಾರಕ್ಕೆ ಹೋದಲ್ಲೆಲ್ಲ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಕುಡಿಯುವ ನೀರು ಸೇರಿ ಮೂಲಸೌಲಭ್ಯದ ಕೊರತೆಯಿದೆ. ಜನ ಸರಕಾರದ ಕಾರ್ಯವೈಖರಿಗೆ ರೋಸಿ ಹೋಗಿದ್ದಾರೆ. ಪ್ರಚಾರಕ್ಕೆ ತೆರಳುವ ಬಿಜೆಪಿಗರಿಗೆ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ ಎಂದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಏ.5 ರಿಂದ ಎರಡು ದಿನ ಮಸ್ಕಿಯ ಗ್ರಾಮೀಣ ಭಾಗದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಕಲ್ಯಾಣ ಕರ್ನಾಟಕ ಪ್ರಾದೇಶಿಕಾಭಿವೃದ್ಧಿ ಮಂಡಳಿಗೆ ಅನುದಾನ ಕಡಿತಗೊಳಿಸಿರುವುದೇ ಬಿಜೆಪಿ ಸರಕಾರದ ಸಾಧನೆ. ಕಲ್ಯಾಣ ಎಂಬುದು ಹೆಸರಿನಲ್ಲೇ ಆಗಿದೆಯೇ ವಿನಾ ವಾಸ್ತವದಲ್ಲಿ ಅಲ್ಲ ಎಂದು ಧ್ರುವ ನಾರಾಯಣ ವ್ಯಂಗ್ಯವಾಡಿದರು.


from India & World News in Kannada | VK Polls https://ift.tt/3ujNuhg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...