ಅಹಮದಾಬಾದ್: ಮಾಹಿತಿ ಹಕ್ಕು ಕಾರ್ಯಕರ್ತನ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಜುನಾಗಢದ ಮಾಜಿ ಸಂಸದ, ಬಿಜೆಪಿ ನಾಯಕ ದಿನು ಬೋಘಾ ಸೋಲಂಕಿಯ ಅಪರಾಧ ಸಾಬೀತಾಗಿದೆ. ಅಮ್ರೇಲಿ ಜಿಲ್ಲೆಯ ಖಂಬಾ ನಿವಾಸಿ, ಆರ್ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಎಂಬಾತ ಜುಲೈ 2010ರಲ್ಲಿ ಗುಜರಾತ್ ಹೈಕೋರ್ಟ್ ಮುಂಭಾಗದಲ್ಲಿ ಶೂಟ್ ಔಟ್ ಆಗಿದ್ದರು. ಗಿರ್ ಅಭಯಾರಣ್ಯದೊಳಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದ ಒಂದು ತಿಂಗಳಲ್ಲಿ ಅವರ ಹತ್ಯೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲಂಕಿ ಸೇರಿ 7 ಮಂದಿಯನ್ನು ಬಂಧಿಸಲಾಗಿತ್ತು. ಅವರೆಲ್ಲರ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಆರೋಪ ಹೊರಿಸಲಾಗಿತ್ತು. ಸಾಕಷ್ಟು ಟ್ವಿಸ್ಟ್ ಪಡೆದು ಸಾಗಿದ ಈ ಪ್ರಕರಣದ ತೀರ್ಪು ಕೊನೆಗೂ ಹೊರಬಿದ್ದಿದ್ದು, ಭಾರಿ ಭದ್ರತೆಯ ನಡುವೆ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಕೆ ಎಂ ದವೆ, ಸೋಲಂಕಿ, ಆತನ ಸಂಬಂಧಿ ಪ್ರತಾಪ್ ಶಿವ ಸೋಲಂಕಿ, ಪಂಚನ್ ದೇಸಾಯಿ, ಪೊಲೀಸ್ ಪೇದೆ ಬಹಾದೂರ್ ಸಿಂಗ್ ವಧೇರ್, ಶೂಟರ್ ಶೈಲೇಶ್ ಪಾಂಡೆ, ಉದ್ಜಿತ್ ಥಾಕೋರ್ ಮತ್ತು ಸಂಜಯ್ ಚೌಹಾನ್ ಅವರಿಗೆ ಶಿಕ್ಷೆಗೊಳಪಡಿಸಲಾಗಿದೆ. ಸೋಲಂಕಿಯ ಮಾಜಿ ಆಪ್ತ ರಾಮಾ ಹಜಾ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ.
from India & World News in Kannada | VK Polls https://ift.tt/2Xy8UGB