ಲೀಡ್ಸ್: ಐಸಿಸಿ 2019 ಏಕದಿನ ವಿಶ್ವಕಪ್ನಲ್ಲಿ ಭಾರತ ಕೊನೆಯ ಎರಡು ಪಂದ್ಯಗಳಲ್ಲಿ ಐವರು ಬೌಲರ್ಗಳ ನೀತಿಯೊಂದಿಗೆ ಕಣಕ್ಕಿಳಿದಿದೆ. ಇದು ನಾಕೌಟ್ ಹಂತವನ್ನು ಪ್ರವೇಶಿಸಿರುವಂತೆಯೇ ಸೂಕ್ತ ನೀತಿಯೇ ಎಂಬುದು ಆತಂಕಕ್ಕೆ ಕಾರಣವಾಗಿದೆ. ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಐವರು ಬೌಲರ್ಗಳನ್ನು ಮಾತ್ರ ಭಾರತ ನೆಚ್ಚಿಕೊಂಡಿತ್ತು. ತಂಡದಲ್ಲಿ ನಾಲ್ವರು ವಿಕೆಟ್ ಕೀಪರ್ಗಳಿದ್ದು ಇದರ ಹಿಂದಿರುವ ಪ್ರಮುಖ ಕಾರಣವಾಗಿತ್ತು. ಇದೀಗ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಸಮಾನ ನೀತಿಗೆ ಮೊರೆ ಹೋಗಿದೆ. ಮೊಹಮ್ಮದ್ ಶಮಿ ಹಾಗೂ ಯುಜ್ವೇಂದ್ರ ಚಹಲ್ಗೆ ವಿಶ್ರಾಂತಿ ಸೂಚಿಸಿದರೂ ಈ ಸ್ಥಾನಗಳಿಗೆ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಆಯ್ಕೆಯಾಗಿದ್ದಾರೆ. ದಿನೇಶ್ ಕಾರ್ತಿಕ್ ಆಡುವ ಬಳಗದಲ್ಲಿ ಕಾಣಸಿಕೊಂಡಿದ್ದರಿಂದ ಬ್ಯಾಟಿಂಗ್ ಮತ್ತಷ್ಟು ಬಲಾಢ್ಯಗೊಂಡಿದೆ. ಆದರೆ ಹೆಚ್ಚುವರಿ ಬೌಲರ್ನ ಕೊರತೆಯು ಕಾಡುತ್ತಿದೆ. ಅಲ್ಲದೆ ಹಾರ್ದಿಕ್ ಪಾಂಡ್ಯರನ್ನು ಅತಿ ಹೆಚ್ಚು ನೆಚ್ಚಿಕೊಳ್ಳುವಂತಾಗಿದೆ. ನಾಕೌಟ್ ಹಂತವನ್ನು ಪ್ರವೇಶಿಸಿರುವಂತೆಯೇ ಐವರು ಬೌಲರ್ಗಳ ರಣತಂತ್ರವು ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದು ಆತಂಕಕ್ಕೀಡು ಮಾಡಿದೆ. ಹಾಗೊಂದು ವೇಳೆ ಬೌಲರ್ ಓರ್ವ ಕೆಟ್ಟ ಪ್ರದರ್ಶನ ನೀಡಿದರೆ ಅಥವಾ ಗಾಯದ ಸಮಸ್ಯೆಗೆ ತುತ್ತಾದರೆ ಬೌಲಿಂಗ್ ಕೋಟಾವನ್ನು ನಾಯಕ ವಿರಾಟ್ ಕೊಹ್ಲಿ ಹೇಗೆ ನಿಭಾಯಿಸಲಿದ್ದಾರೆ ಎಂಬುದು ಅಕ್ಷ ಪ್ರಶ್ನೆಯಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Jvhxgc