ಹೊಸದಿಲ್ಲಿ: ಭಾರತ- ಬಾಂಗ್ಲಾದೇಶ ಗಡಿಯಲ್ಲಿ, ನಡೆಯುತ್ತಿದ್ದ ಗೋ ಸಾಗಣೆಯನ್ನು ತಡೆಯುವ ಮೂಲಕ ಬಿಎಸ್ಎಫ್ ಯೋಧರೊಬ್ಬರು ಭಾರಿ ಪ್ರಶಂಸೆ ಪಡೆದಿದ್ದಾರೆ. ಅಮಾನವೀಯ ಸ್ಥಿತಿಯಲ್ಲಿ ದನಗಳನ್ನು ಬಾಂಗ್ಲಾಕ್ಕೆ ಸಾಗಿಸಲಾಗುತ್ತಿತ್ತು. ಕಾಲುಗಳನ್ನು ಕಟ್ಟಿ, ತಲೆಯನ್ನು ಬಾಳೆದಿಂಡಿನಲ್ಲಿ ತೂರಿಸಿ, ನದಿ ಮೂಲಕ ದನಗಳನ್ನು ಸಾಗಿಸಲಾಗುತ್ತಿತ್ತು. ಅವುಗಳನ್ನು ಕಂಡ ಯೋಧರು ಅವುಗಳನ್ನು ರಕ್ಷಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ. ಭಾರತ- ಬಾಂಗ್ಲಾ ಗಡಿ ಗೋ ಸಾಗಣೆಗೆ ಕುಖ್ಯಾತವಾಗಿದೆ. ಅಲ್ಲಿ ಆಗಾಗ ಗೋ ಕಳ್ಳರಿಗೂ, ಸೈನಿಕರಿಗೂ ಜಟಾಪಟಿಯಾಗುತ್ತಿರುತ್ತದೆ. ಮೋದಿ ಸರಕಾರದ ಮೊದಲ ಅವಧಿಯಲ್ಲಿ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ಯೋಧರಿಗೆ ಗೋ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬಳಿಕ ಕಳ್ಳ ಸಾಗಾಣಿಕೆಯಲ್ಲಿ ಇಳಿಕೆಯಾಗಿದೆ. ಆದರೆ ಸಂಪೂರ್ಣವಾಗಿ ಇನ್ನು ನಿಯಂತ್ರಣಕ್ಕೆ ಬಂದಿಲ್ಲ. ಬೇರೆ ಬೇರೆ ಮಾರ್ಗೋಪಾಯಗಳ ಮೂಲಕ ಕಳ್ಳರು ತಮ್ಮ ಕೃತ್ಯವನ್ನು ಮುಂದುವರಿಸಿದ್ದಾರೆ. ಬಾಂಗ್ಲಾದೇಶದ ಮಾರುಕಟ್ಟೆಯಲ್ಲಿ ಭಾರತೀಯ ಗೋವಿಗೆ ಬಹಳ ಬೇಡಿಕೆ ಇದೆ.
from India & World News in Kannada | VK Polls https://ift.tt/2NCQnJS