ಲಂಡನ್: ಏಕದಿನ ವಿಶ್ವಕಪ್ ಬಳಿಕ ಭಾರತದ ಮಾಜಿ ನಾಯಕ , ಸೀಮಿತ ಓವರ್ಗಳ ಕ್ರಿಕೆಟ್ಗೂ ನಿವೃತ್ತಿ ಸಲ್ಲಿಸುವ ಸಾಧ್ಯತೆಯಿದೆ ಎಂಬುದರ ಬಗ್ಗೆ ಸುದ್ದಿಗಳು ಬಂದಿದ್ದವು. ಈ ನಡುವೆ ವಿಶ್ವಕಪ್ನಲ್ಲಿ ನಿಧಾನಗತಿಯ ಆಟದಿಂದಾಗಿ ಧೋನಿ ಬದ್ಧತೆಯ ಬಗ್ಗೆ ಸಾಕಷ್ಟು ಟೀಕೆಗಳನ್ನು ಎದರಿಸಬೇಕಾಯಿತು. ಇವೆಲ್ಲದರ ನಡುವೆಯೂ ಧೋನಿ ಇನ್ನೆರಡು ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಮುಂದುವರಿಯಬೇಕಿದೆ ಎಂದು ಶ್ರೀಲಂಕಾದ ಅನುಭವಿ ಬೌಲರ್ ಬಯಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಧೋನಿ ಬೆಸ್ಟ್ ಫಿನಿಶರ್ ಆಗಿದ್ದಾರೆ. ಭವಿಷ್ಯದಲ್ಲೂ ಧೋನಿಯನ್ನು ಮೀರಿಸಬಹುದೆಂದು ನನಗನಿಸುತ್ತಿಲ್ಲ. ಎಲ್ಲ ಯುವ ಆಟಗಾರರಿಗೂ ಒತ್ತಡದಲ್ಲಿ ಹೇಗೆ ಆಡಬೇಕೆಂಬುದಕ್ಕೆ ಸಂಬಂಧಿಸಿದಂತೆ ತಮ್ಮ ಅನುಭವ ಸಂಪತ್ತು ಧಾರೆಯೆಳೆದಿದ್ದಾರೆ. ಇದಕ್ಕಾಗಿಯೇ ಭಾರತ ಯಶಸ್ವಿ ತಂಡವಾಗಿ ಪರಿವರ್ತನೆಗೊಂಡಿದೆ. ಅಲ್ಲದೆ ವಿಶ್ವಕಪ್ನಲ್ಲಿ ಯಾವುದೇ ತಂಡವನ್ನು ಮಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮಾಲಿಂಗ ತಿಳಿಸಿದರು. ಅದೇ ಹೊತ್ತಿಗೆ ಟೀಮ್ ಇಂಡಿಯಾದ ಅತ್ಯುತ್ತಮ ಆಟಗಾರರ ಬಳಗವನ್ನು ಹೊಂದಿದೆ. ಇದು ವಿರಾಟ್ ಕೊಹ್ಲಿ ನಾಯಕತ್ವವನ್ನು ಶ್ರೀಮಂತವಾಗಿಸಿದೆ ಎಂದರು. ಅಲ್ಲದೆ ಡೆತ್ ಬೌಲರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾಗೆ ಶ್ರೇಯ ನೀಡಲು ಮರೆಯಲಿಲ್ಲ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Jr6ggX