ಯಶಸ್ಸಿನ ಗುಟ್ಟು ರಟ್ಟು ಮಾಡಿದ ಬುಮ್ರಾ

ಬರ್ಮಿಂಗ್‌ಹ್ಯಾಮ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಆಪತ್ಬಾಂಧವ ಎನಿಸಿಕೊಂಡಿರುವ , ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲೂ ತಮ್ಮ ಯಶಸ್ಸನ್ನು ಮುಂದುರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ನಾಲ್ಕು ವಿಕೆಟುಗಳನ್ನು ಕಬಳಿಸಿರುವ ಬುಮ್ರಾ, ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಈ ಮೂಲಕ ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ನಾಯಕ ವಿರಾಟ್ ಕೊಹ್ಲಿ ಬಯಸಿದ್ದಾಗೆಲ್ಲ ನಿಖರ ದಾಳಿ ಸಂಘಟಿಸುವ ಬುಮ್ರಾ ತಮ್ಮ ಯಶಸ್ಸಿನ ಮಂತ್ರವನ್ನು ಬಹಿರಂಗ ಮಾಡಿದ್ದಾರೆ. ಅಭ್ಯಾಸದ ಅವಧಿಯಲ್ಲಿ ತಾವು ಮಾಡುತ್ತಿರುವ ಕಠಿಣ ತರಬೇತಿಗೆ ತಕ್ಕೆ ಫಲಶ್ರುತಿ ದೊರಕಿದೆ ಎಂದಿದ್ದಾರೆ. ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವಾಗ ಪ್ರತಿಯೊಂದು ಸನ್ನವೇಶವನ್ನು ಅಭ್ಯಾಸಿಸುತ್ತೇನೆ. ಹೊಸ ಚೆಂಡು, ಹಳೆಯ ಚೆಂಡು ಹಾಗೂ ಡೆತ್ ಬೌಲಿಂಗ್ ಕೂಡಾ ಅಭ್ಯಾಸ ನಡೆಸುತ್ತೇನೆ ಎಂದು ಡೆತ್ ಬೌಲರ್ ಸ್ಪೆಷಲಿಸ್ಟ್ ಆಗಿರುವ ಬುಮ್ರಾ ತಿಳಿಸಿದರು. ನೆಟ್ಸ್‌ನಲ್ಲಿ ಕಠಿಣ ತರಬೇತಿಗೆ ಮೊರೆ ಹೋಗುತ್ತೇನೆ. ಬಳಿಕ ಮ್ಯಾಚ್ ಪರಿಸ್ಥಿತಿಯಲ್ಲಿ ಯೋಜನೆಗಳನ್ನು ಕಾರ್ತಗತಗೊಳಿಸಲು ಯತ್ನಿಸುತ್ತೇನೆ ಎಂದಿದ್ದಾರೆ. ಡೆತ್ ಓವರ್‌ನಲ್ಲಿ ಯಾರ್ಕರ್ ಎಸೆತದ ಯಶಸ್ಸಿನ ಬಗ್ಗೆ ಮಾತನಾಡಿದ ಬುಮ್ರಾ, ನೆಟ್ಸ್‌ನಲ್ಲಿ ಮತ್ತೆ ಮತ್ತೆ ಅಭ್ಯಾಸ ನಡೆಸುತ್ತೇನೆ. ಅದೃಷ್ಟವಶಾತ್ ಪಂದ್ಯದಲ್ಲಿ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿದೆ ಎಂದರು. ಸಾಧ್ಯವಾದಷ್ಟು ವಿಚಾರಗಳನ್ನು ಸರಳವಾಗಿಡಲು ಬಯಸುತ್ತೇನೆ. ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ನನ್ನದೇ ಆದ ಯೋಜನೆ ರೂಪಿಸುತ್ತೇನೆ. ಇದನ್ನು ನಾಯಕ ಹಾಗೂ ಹಿರಿಯ ಆಟಗಾರರ ಜತೆ ಚರ್ಚಿಸಿ ಕಾರ್ತಗತಗೊಳಿಸಲು ಪ್ರಯತ್ನಿಸುತ್ತೇನೆ ಎಂದರು. ಅದೇ ಹೊತ್ತಿಗೆ ಶ್ರೀಲಂಕಾ ವಿರುದ್ಧ ವಿಶ್ರಾಂತಿ ಪಡೆಯುವ ವಿಚಾರವೇ ಇಲ್ಲ. ಇದು ನನ್ನ ಮೊದಲ ವಿಶ್ವಕಪ್ ಆಗಿದ್ದು, ಸಾಧ್ಯವಾದಷ್ಟು ಪಂದ್ಯವನ್ನು ಆಡಲು ಬಯಸುತ್ತೇನೆ ಎಂದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NEsAJA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...