ಕೋಲ್ಕತ್ತಾ: ಪುರಿ ಜಗನ್ನಾಥ ರಥಯಾತ್ರೆಯನ್ನು ಸಂಭ್ರಮದಿಂದ ಆಚರಿಸುವ ಮೂಲಕ ಕೋಲ್ಕತ್ತಾದ ಬಾಹುಳ್ಯದ ಖಿದಿರ್ಪುರ್ ಪ್ರದೇಶ ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು. ಪಶ್ಚಿಮ ಬಂಗಾಳದ ಖಿದಿರ್ಪುರ್ ಪ್ರದೇಶ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಎಲ್ಲ ಧರ್ಮೀಯರು ಸಂಭ್ರಮದಿಂದ ಜಗನ್ನಾಥ ರಥಯಾತ್ರೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಒಡಿಶಾದ ಪುರಿಯೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ರಥಯಾತ್ರೆ ಅದ್ಧೂರಿಯಾಗಿ ಜರುಗಿತು. ಭಗವಾನ್ ಜಗನ್ನಾಥ, ಬಲರಾಮ ಹಾಗೂ ತಂಗಿ ಸುಭದ್ರಾ ದೇವರ ರಥಯಾತ್ರೆ ಧಾರ್ಮಿಕ ದೃಷ್ಟಿಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ. ಒಂಬತ್ತು ದಿನಗಳ ರಥೋತ್ಸವದ ಅಂಗವಾಗಿ ಜಗನ್ನಾಥ, ಬಲರಾಮ ಮತ್ತು ಸುಭದ್ರಾ ದೇವಿಯ ಮೂರ್ತಿಗಳನ್ನು ನಗರದ ಗುಡಿಚಾ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿಂದ ವಾಪಸ್ ಕರೆತರಲಾಗುತ್ತದೆ.
from India & World News in Kannada | VK Polls https://ift.tt/2JmLNdf