ಮ್ಯಾಕ್ಸ್‌ವೆಲ್‌ಗೆ ಹಣದ ಹೊಳೆ ಹರಿಸಿದ್ದೇಕೆಂದು ವಿವರಿಸಿದ ಆರ್‌ಸಿಬಿ ಕೋಚ್‌!

ಹೊಸದಿಲ್ಲಿ: ಪಂಜಾಬ್‌ ಕಿಂಗ್ಸ್ ತಂಡದಿಂದ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಟಗಾರರ ಹರಾಜಿಗೆ ಬಿಡುಗಡೆಯಾಗಿದ್ದ ಆಟಗಾರರ ಪೈಕಿ ಕೂಡ ಒಬ್ಬರಾಗಿದ್ದರು. ಅವರು 2020ರ ಆವೃತ್ತಿಯ ಟೂರ್ನಿಯಲ್ಲಿ 13 ಪಂದ್ಯಗಳಿಂದ ಗಳಿಸಿದ್ದು ಕೇವಲ 108 ರನ್‌ ಮಾತ್ರ ಆದರೂ ಅವರನ್ನು ಖರೀದಿಸಲು ಹರಾಜಿನಲ್ಲಿ ಹಲವು ಫ್ರಾಂಚೈಸಿಗಳು ತೀವ್ರ ಪೈಪೋಟಿ ನಡೆಸಿದ್ದವು. ರಾಜಸ್ಥಾನ್‌ ರಾಯಲ್ಸ್, ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ತಂಡಗಳಿಗೂ ಮುನ್ನ ಕೋಲ್ಕತಾ ನೈಟ್‌ ರೈಡರ್ಸ್ ತಂಡ ಬಿಡ್‌ ಆರಂಭಿಸಿತ್ತು. ಬಿಡ್ 4.4 ಕೋಟಿ ರೂ ತಲುಪುತ್ತಿದ್ದಂತೆ ಆಸ್ಟ್ರೇಲಿಯಾ ಹಾರ್ಡ್ ಹಿಟ್ಟರ್‌ ಆಲ್‌ರೌಂಡರ್‌ ಅನ್ನು ಖರೀದಿಸಲು ಹಾಗೂ ಸಿಎಸ್‌ಕೆ ನಡುವೆ ತೀವ್ರ ಸ್ಪರ್ಧೆ ನಡೆಯಿತು. ಅಂತಿಮವಾಗಿ ಬೆಂಗಳೂರು ಫ್ರಾಂಚೈಸಿಯು 14.25 ಕೋಟಿ ರೂ. ಗಳಿಗೆ ಮ್ಯಾಕ್ಸ್‌ವೆಲ್‌ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಕಳೆದ ಕೆಲ ಆವೃತ್ತಿಗಳಲ್ಲಿನ ಹೀನಾಯ ಪ್ರದರ್ಶನದ ಹೊರತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ದುಬಾರಿ ಮೊತ್ತಕ್ಕೆ ಖರೀದಿಸಲು ಕಾರಣವೇನು ಹಾಗೂ 2021ರ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್‌ಮನ್‌ ಅನ್ನು ತಮ್ಮ ಫ್ರಾಂಚೈಸಿಗೆ ಸ್ವಾದೀನಪಡಿಸಿಕೊಳ್ಳಲು ರೂಪಿಸಿದ್ದ ಯೋಜನೆಯನ್ನು ಇದೀಗ ಆರ್‌ಸಿಬಿ ಕೋಚ್‌ ಬಹಿರಂಗಪಡಿಸಿದ್ದಾರೆ. "ಮ್ಯಾಕ್ಸ್‌ವೆಲ್‌ ಅವರಿಗೆ ಹರಾಜಿನಲ್ಲಿ ತುಂಬಾ ಬೇಡಿಕೆ ಇದೆ ಎಂದು ನಮಗೆ ಗೊತ್ತಿತ್ತು. ಬಲಗೈ ಬ್ಯಾಟ್ಸ್‌ಮನ್‌ ನುರಿತ ಅನುಭವಿ ಹಾಗೂ ಆಸ್ಟ್ರೇಲಿಯಾ ತಂಡದ ಪರ ಅದ್ಭುತ ಲಯದಲ್ಲಿದ್ದರು. ಅದಲ್ಲದೆ, ಬಿಗ್‌ಬ್ಯಾಷ್‌ ಲೀಗ್‌ನಲ್ಲಿಯೂ ಪ್ರಚಂಡ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದರು. ನಾವು ಹುಡುಕುತ್ತಿದ್ದ ಬಹುಪಯೋಗಿ ಆಟಗಾರ ಅವರಾಗಿದ್ದರು. ಮ್ಯಾಕ್ಸ್‌ವೆಲ್‌ ಹಾಗೂ ಕೈಲ್‌ ಜೇಮಿಸನ್‌ ಅವರಿಗೆ ಭಾರಿ ಮೊತ್ತವನ್ನು ವ್ಯಯಿಸಬೇಕಾಬಹುದು ಎಂದು ನಮಗೆ ಮೊದಲೇ ತಿಳಿದಿತ್ತು, ಅದರಂತೆ ದುಬಾರಿ ಮೊತ್ತಕ್ಕೆ ಅವರನ್ನು ಖರೀದಿಸಿದೆವು," ಎಂದು ಆರ್‌ಸಿಬಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಕ್ಯಾಟಿಚ್‌ ತಿಳಿಸಿದ್ದಾರೆ. ಕಳೆದ ಆವೃತ್ತಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಉತ್ತಮವಾಗಿತ್ತು. ಮೊದಲ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಆರ್‌ಸಿಬಿಯಿಂದ ಎರಡನೇ ಅವಧಿಯಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿಬರಲಿಲ್ಲ. ಆದರೂ ರನ್‌ರೇಟ್‌ ಸರಾಸರಿಯೊಂದಿಗೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿತ್ತು. ಆದರೆ, ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೋತು ಕೊಹ್ಲಿ ಪಡೆ ಹೊರ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸೈಮನ್‌ ಕ್ಯಾಟಿಚ್‌, ತಂಡದ ಹಲವು ಭಾಗಗಳಲ್ಲಿ ನಾವು ಸುಧಾರಣೆ ಸಾಧಿಸುವ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡರು. "ಕಳೆದ ಆವೃತ್ತಿ ನಮ್ಮ ಪಾಲಿಗೆ ಉತ್ತಮವಾಗಿತ್ತು ಆದರೆ, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಂತಹ ಅಗ್ರ ಎರಡು ತಂಡಗಳೊಂದಿಗೆ ಸ್ಪರ್ಧಿಸಲು ನಾವು ಇನ್ನಷ್ಟು ಉತ್ತಮಗೊಳ್ಳಬೇಕಾಗಿದೆ ಎಂದು ನಮಗೆ ಅರಿವಿದೆ. ಈ ಬಾರಿ ನಾವು ಅತ್ಯುತ್ತಮ ಸಂಯೋಜನೆಯನ್ನು ಹೊಂದಿದ್ದೇವೆ ಎಂದು ಭಾವಿಸುತ್ತೇನೆ. ನಿರ್ದಿಷ್ಟ ಪಾತ್ರಕ್ಕಾಗಿ ನಾವು ಯಾವಾಗಲೂ ಉತ್ತಮ ಆಟಗಾರರನ್ನು ಹುಡುಕುತ್ತಿದ್ದೇವೆ, "ಎಂದು ಸೈಮನ್‌ ಕ್ಯಾಟಿಚ್‌ ಮಾತು ಮುಗಿಸಿದರು. ಪ್ರಸ್ತುತ ಚೆನ್ನೈನಲ್ಲಿ ಅಭ್ಯಾಸದಲ್ಲಿ ನಿರತವಾಗಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್‌ 9 ರಂದು ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 2021ರ ಆವೃತ್ತಿಯ ಉದ್ಭಾಟನಾ ಪಂದ್ಯದಲ್ಲಿ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3umqBKm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...