ಚನ್ನರಾಯಪಟ್ಟಣ: ರಾಜ್ಯ ಬಿಜೆಪಿ ಸರಕಾರ ಇನ್ನೆಷ್ಟು ದಿನ ಇರುತ್ತದೆ ಎಂಬ ಖಾತ್ರಿ ಇಲ್ಲ. ಆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ ಎಂದು ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ತಾಲೂಕಿನ ಬಾಗೂರು ಹೋಬಳಿ ಹುಲ್ಲೇನಹಳ್ಳಿ ಗ್ರಾಮದಲ್ಲಿ ಶನಿವಾರ ದೊಡ್ಡಮ್ಮದೇವಿ ಮತ್ತು ಚೌಡಮ್ಮದೇವಿಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆತನ ಮಗ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಪಂಚಾಯತ್ರಾಜ್ ಸಚಿವರಾಗಿ ಮರಾರಯದೆ ಬಿಟ್ಟು ಇನ್ನೂ ಸಚಿವ ಸ್ಥಾನಕ್ಕೆ ಅಂಟಿಕೊಂಡಿದ್ದಾರೆ. ನಾನಾಗಿದ್ದರೆ ಒಂದು ಕ್ಷಣವೂ ಸಚಿವ ಸ್ಥಾನದಲ್ಲಿಇರುತ್ತಿರಲಿಲ್ಲ. ಸ್ವಾಭಿಮಾನದಿಂದ ಆಡಳಿತ ಮಾಡಬೇಕು,'' ಎಂದು ವ್ಯಂಗ್ಯವಾಡಿದರು. ''ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ನಾನು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಯೋಜನೆಯಡಿ ನೀಡಿದ್ದ 7 ಕೆಜಿ ಅಕ್ಕಿಯನ್ನು ಈಗ 5 ಕೆಜಿಗೆ ಇಳಿಸಿದೆ. ಇದಕ್ಕೆ ಅವರಪ್ಪನ ಮನೆಯಿಂದೇನೂ ಹಣ ಕೊಡುತ್ತಿರಲಿಲ್ಲ. ನಾನು ಮಾಡಿದ್ದ ಅನೇಕ ಯೋಜನೆಗಳಿಗೆ ತಡೆಯೊಡ್ಡಿದ್ದಾರೆ. ಎಲ್ಲ ವರ್ಗಕ್ಕೂ ಸೀಮಿತ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿಯಾರಿಗೂ ಗೊಡ್ಡು ಸಲಾಮು ಹೊಡೆದುಕೊಂಡು ಬಂದಿಲ್ಲ, ಮುಂದೆಯೂ ಆ ರೀತಿ ಇರುವುದಿಲ್ಲ. ಯಾರಿಗೂ ಬಗ್ಗಲ್ಲ, ಜನರ ಆಶೀರ್ವಾದ ಇರುವತನಕ ಸಾರ್ವಜನಿಕ ಬದುಕಿನಲ್ಲಿರುತ್ತೇನೆ. ಜನರಲ್ಲಿನಂಬಿಕೆ ಇಟ್ಟುಕೊಂಡಿದ್ದೇನೆ. ಧರ್ಮ, ಜಾತಿಯ ಹೆಸರಿನಲ್ಲಿಸಮಾಜವನ್ನು ಒಡೆಯುವ ಪ್ರಯತ್ನ ಕೂಡದು. ನಮ್ಮ ನಡವಳಿಕೆಗಳ ಮೂಲಕ ವಿಶ್ವಮಾನವರಾಗಬೇಕೇ ಹೊರತು ಅಲ್ಪಮಾನವರಾಗಬಾರದು. ಜಾತಿವ್ಯವಸ್ಥೆ ಹೋಗದ ತನಕ ಸಮಾನತೆಯನ್ನು ಕಾಣಲು ಸಾಧ್ಯವಿಲ್ಲ,'' ಎಂದರು. ''ತಾಲೂಕಿನಲ್ಲಿಕೆರೆಗೆ ನೀರು ತುಂಬಿಸುವ ಸಲುವಾಗಿ 5 ಏತನೀರಾವರಿ ಯೋಜನೆಗಳನ್ನು ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಮಂಜೂರು ಮಾಡಿ, ಇದಕ್ಕಾಗಿ 176 ಕೋಟಿ ರೂ. ನೀಡಿದ್ದೆ. ಇಂದು ನುಗ್ಗೇಹಳ್ಳಿಯ ಹಿರೇಕೆರೆ ತುಂಬಿರುವುದನ್ನು ನೋಡಲು ಸಂತಸವಾಗುತ್ತದೆ. ಯಾವ ಪಕ್ಷದವರನ್ನೂ ತಾರತಮ್ಯದಿಂದ ನೋಡದೆ ಅಭಿವೃದ್ಧಿಗೆ ಹಣ ನೀಡಿದ್ದೇನೆ,'' ಎಂದು ತಿಳಿಸಿದರು. ಎಲ್ಲರಿಗೂ ಲೇಸನ್ನು ಬಯಸಿ: ''ಅನಾದಿಕಾಲದಿಂದಲೂ ಭಕ್ತಿಯೊಂದಿಗೆ ನಾವು ಬೆಸೆದುಕೊಂಡಿದ್ದೇವೆ. ಆದರೆ ಬೂಟಾಟಿಕೆಯ ಪೂಜೆ ಬಿಟ್ಟು ಆತ್ಮಶುದ್ಧಿಯಿಂದ ಮಾಡಿದ ಪೂಜೆ ಎಂದಿಗೂ ಫಲಿಸುತ್ತದೆ. ಯಾರಿಗೂ ಕೆಟ್ಟದ್ದನ್ನು ಬಯಸದೆ ಎಲ್ಲರಿಗೂ ಒಳಿತನ್ನೇ ಬಯಸುವುದು ಮಾನವಧರ್ಮವಾಗಿದೆ. ಇದನ್ನು ಜೀವನದಲ್ಲಿಅಳವಡಿಸಿಕೊಂಡರೆ ದೇವರ ಅನುಗ್ರಹ ನಮ್ಮ ಮೇಲಿರುತ್ತದೆ,'' ಎಂದರು. ಹಾಡಿ ಹೊಗಳಿದ ಶಾಸಕರು: ತಾಲೂಕಿನ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ತಮ್ಮ ಭಾಷಣದಲ್ಲಿಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗುಣಗಾನ ಮಾಡಿದರು. ''ಜನಪ್ರಿಯ ಕಾರ್ಯಕ್ರಮಗಳನ್ನು ನಾಡಿಗೆ ನೀಡಿದ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಯುವ ರಾಜಕಾರಣಿಗಳಿಗೆ ಬೆನ್ನುತಟ್ಟಿದ ನಾಯಕರಾಗಿದ್ದರು. ವಿಧಾನಸೌಧದಲ್ಲಿಅವರ ಮಾತುಗಳನ್ನು ಆಲಿಸಲು ಕಾಯುತ್ತಿರುತ್ತೇನೆ. ಅವರನ್ನು ಅನುಕರಣೆ ಮಾಡುತ್ತೇನೆ. ಶಾಸಕನಾಗಿ ತಾಲೂಕು ಅಭಿವೃದ್ಧಿಗೆ ಅವರ ಅವಧಿಯಲ್ಲಿನೆರವು ಪಡೆದಿದ್ದೇನೆ. ರಾಜಕಾರಣಿಗಳು ಉತ್ತಮಗುರಿ ಇಟ್ಟುಕೊಂಡು ಕೆಲಸ ಮಾಡಬೇಕು,'' ಎಂದರು. ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ''ದೇಶದ ಉನ್ನತ ಸ್ಥಾನಕ್ಕೇರುವ ಎಲ್ಲಅರ್ಹತೆಗಳನ್ನೂ ಹೊಂದಿರುವ ಸಿದ್ದರಾಮಯ್ಯ ಅವರ ಸಾಮಾಜಿಕ ಕಳಕಳಿ ರಾಜ್ಯಾದ್ಯಂತ ಮನೆಮಾತಾಗಿದೆ. ಈಗ ರಾಜ್ಯದಲ್ಲಿಕಾಂಗ್ರೆಸ್ ಹವಾ ಶುರುವಾಗಿದ್ದು, ಜಿಲ್ಲೆಯಲ್ಲೂಗಟ್ಟಿಧ್ವನಿ ಮೊಳಗಬೇಕು. ಮತದಾರರು ಆತ್ಮವಂಚನೆಯ ಕೆಲಸ ಮಾಡಬಾರದು,'' ಎಂದರು. ವಿಧಾನ ಪರಿಷತ್ ಶಾಸಕ ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ, ಎಂ.ಕೆ.ಮಂಜೇಗೌಡ, ಡಿಸಿಸಿ ಅಧ್ಯಕ್ಷ ಜಾವಗಲ್ ಮಂಜುನಾಥ್, ಪಟೇಲ್ ಶಿವಪ್ಪ, ಎಂ.ಶಂಕರ್, ಎಚ್.ಕೆ.ಮಹೇಶ್ ಹಾಗೂ ಇತರರಿದ್ದರು. ರಾಜ್ಯದಲ್ಲಿಎಂದಿಗೂ ಜೆಡಿಎಸ್ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಸ್ವತಂತ್ರವಾಗಿ ಸ್ಪರ್ಧೆಮಾಡಿ ಅಧಿಕಾರಕ್ಕೆ ಬರುವ ಭರವಸೆ ಇದೆ. ಸಮ್ಮಿಶ್ರ ಸರಕಾರ ಹಾಗೂ ಈಗಿನ ಬಿಜೆಪಿ ಸರಕಾರದಲ್ಲಿಎಲ್ಲವರ್ಗದವರಿಗೆ ಅನ್ಯಾಯವಾಗಿತ್ತು. ಕೊಟ್ಟಮಾತಿನಂತೆ ನಡೆದುಕೊಳ್ಳುವ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿ.
from India & World News in Kannada | VK Polls https://ift.tt/3worvYs