from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aTqej1
ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಖಾಮುಖಿ ದಾಖಲೆಯಲ್ಲಿ ಪಂಜಾಬ್ ಕಿಂಗ್ಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಶುಕ್ರವಾರ ಆರ್ಸಿಬಿ ವಿರುದ್ಧ ಗೆದ್ದ ಪಂಜಾಬ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೆರಿದೆ. ಇನ್ನು ಕೊಹ್ಲಿ ಪಡೆ ಟೂರ್ನಿಯಲ್ಲಿ ಎರಡನೇ ಸೋಲು ಅನುಭವಿಸಿತು.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತಾದ ಪಂಜಾಬ್ ಕಿಂಗ್ಸ ತಂಡ ಮೊದಲನೇ ವಿಕೆಟ್ ಅನ್ನು ಬಹುಬೇಗ ಕಳೆದುಕೊಂಡರೂ ಕ್ರೀಸ್ ಗೇಲ್ ತಂಡಕ್ಕೆ ಅದ್ಭುತ ಆರಂಭವನ್ನು ತಂದುಕೊಟ್ಟರು. ಕೈಲ್ ಜೇಮಿಸನ್ ಓವರ್ನಲ್ಲಿ ಐದು ಬೌಂಡರಿಗಳನ್ನು ಸಿಡಿಸುವ ಮೂಲಕ ಯೂನಿವರ್ಸ್ ಬಾಸ್ ಎಲ್ಲರ ಗಮನ ಸೆಳೆದರು. ಇನ್ನು ಕೊನೆಯವರೆಗೂ ಕ್ರಿಸ್ನಲ್ಲಿ ಅಂಟಿಕೊಂಡು ಬ್ಯಾಟಿಂಗ್ ಮಾಡಿದ ಕೆ.ಎಲ್ ರಾಹುಲ್, ತಂಡ 179 ರನ್ ಕಲೆ ಹಾಕುವಲ್ಲಿ ಮಹತ್ವದ ಪಾತ್ರವಹಿಸಿದರು. ಗುರಿ ಹಿಂಬಾಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪವರ್ಪ್ಲೇನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಪಂಜಾಬ್ ತಂಡದ ಯುವ ಸ್ಪಿನ್ನರ್ಗಳಾದ ಹರ್ಪೀತ್ ಬ್ರಾರ್ ಹಾಗೂ ರವಿ ಬಿಷ್ನೋಯ್ ಅವರು ಆರ್ಸಿಬಿ ತಂಡದ ಕೀ ಬ್ಯಾಟ್ಸ್ಮನ್ಗಳನ್ನು ಬಹುಬೇಗ ಔಟ್ ಮಾಡುವ ಮೂಲಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಒಟ್ಟಾರೆ, ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಹೀನಾಯ ಸೋಲು ಅನುಭವಿಸಲು ಮೂರು ಕಾರಣಗಳನ್ನು ಇಲ್ಲಿ ನೋಡಬಹುದು.
ಅಹ್ಮದಾಬಾದ್:
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಖಾಮುಖಿ ದಾಖಲೆಯಲ್ಲಿ ಪಂಜಾಬ್ ಕಿಂಗ್ಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಶುಕ್ರವಾರ ಆರ್ಸಿಬಿ ವಿರುದ್ಧ ಗೆದ್ದ ಪಂಜಾಬ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೆರಿದೆ. ಇನ್ನು ಕೊಹ್ಲಿ ಪಡೆ ಟೂರ್ನಿಯಲ್ಲಿ ಎರಡನೇ ಸೋಲು ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತಾದ ಪಂಜಾಬ್ ಕಿಂಗ್ಸ ತಂಡ ಮೊದಲನೇ ವಿಕೆಟ್ ಅನ್ನು ಬಹುಬೇಗ ಕಳೆದುಕೊಂಡರೂ ಕ್ರೀಸ್ ಗೇಲ್ ತಂಡಕ್ಕೆ ಅದ್ಭುತ ಆರಂಭವನ್ನು ತಂದುಕೊಟ್ಟರು. ಕೈಲ್ ಜೇಮಿಸನ್ ಓವರ್ನಲ್ಲಿ ಐದು ಬೌಂಡರಿಗಳನ್ನು ಸಿಡಿಸುವ ಮೂಲಕ ಯೂನಿವರ್ಸ್ ಬಾಸ್ ಎಲ್ಲರ ಗಮನ ಸೆಳೆದರು. ಇನ್ನು ಕೊನೆಯವರೆಗೂ ಕ್ರಿಸ್ನಲ್ಲಿ ಅಂಟಿಕೊಂಡು ಬ್ಯಾಟಿಂಗ್ ಮಾಡಿದ ಕೆ.ಎಲ್ ರಾಹುಲ್, ತಂಡ 179 ರನ್ ಕಲೆ ಹಾಕುವಲ್ಲಿ ಮಹತ್ವದ ಪಾತ್ರವಹಿಸಿದರು.
ಗುರಿ ಹಿಂಬಾಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪವರ್ಪ್ಲೇನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಪಂಜಾಬ್ ತಂಡದ ಯುವ ಸ್ಪಿನ್ನರ್ಗಳಾದ ಹರ್ಪೀತ್ ಬ್ರಾರ್ ಹಾಗೂ ರವಿ ಬಿಷ್ನೋಯ್ ಅವರು ಆರ್ಸಿಬಿ ತಂಡದ ಕೀ ಬ್ಯಾಟ್ಸ್ಮನ್ಗಳನ್ನು ಬಹುಬೇಗ ಔಟ್ ಮಾಡುವ ಮೂಲಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಒಟ್ಟಾರೆ, ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಹೀನಾಯ ಸೋಲು ಅನುಭವಿಸಲು ಮೂರು ಕಾರಣಗಳನ್ನು ಇಲ್ಲಿ ನೋಡಬಹುದು.

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಗಲು ಬಹುದೊಡ್ಡ ಕಾರಣ ಎಂದರೆ, ಹರ್ಷಲ್ ಪಟೇಲ್ ಅವರ ಬೌಲಿಂಗ್ ಫಾರ್ಮ್. ಚೆನ್ನೈ ಪಂದ್ಯಗಳ ಡೆತ್ ಓವರ್ಗಳಲ್ಲಿನ ನಾಯಕ ವಿರಾಟ್ ಕೊಹ್ಲಿ ಯೋಜನೆಗಳನ್ನು ಹರ್ಷಲ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಅಲ್ಲದೆ, ಅತಿ ಹೆಚ್ಚು ವಿಕೆಟ್ಗಳನ್ನು ಪಡೆದುಕೊಳ್ಳುವ ಮೂಲಕ ಪರ್ಪಲ್ ಕ್ಯಾಪ್ ಅನ್ನು ತನ್ನಲ್ಲಿ ಇರಿಸಿಕೊಂಡಿದ್ದಾರೆ.
ಆದರೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಎದುರು ಹರ್ಷಲ್ ಪಟೇಲ್ ಬೌಲಿಂಗ್ ಏನೂ ನಡೆಯಲಿಲ್ಲ. ಅಂದಿನ ಪಂದ್ಯದ ಕೊನೆಯ ಓವರ್ನಲ್ಲಿ ಅವರು 37 ರನ್ ಬಿಟ್ಟುಕೊಟ್ಟಿದ್ದರು. ಅದರಂತೆ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ಕೂಡ 4 ಓವರ್ಗಳಿಗೆ 53 ರನ್ ಬಿಟ್ಟುಕೊಟ್ಟಿದ್ದಾರೆ. ಆದರೆ, ಒಂದೇ ವಿಕೆಟ್ ಪಡೆಯದ ಹರ್ಷಲ್ ಆರ್ಸಿಬಿಗೆ ಭಾರಿ ನಿರಾಸೆ ಉಂಟುಮಾಡಿದರು.
ಪಂಜಾಬ್ Vs ಬೆಂಗಳೂರು ಸ್ಕೋರ್ಕಾರ್ಡ್

ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್ಗಳ ಗೆಲುವಿನಲ್ಲಿ ಅದ್ಭುತವಾಗಿ ಕಂಡಿದ್ದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಜೋಡಿಯಿಂದ ಒಟ್ಟಾರೆ ಟೂರ್ನಿಯಲ್ಲಿ ಇನ್ನೂ ಸ್ಪರ್ಧಾತ್ಮಕ ಓಪನಿಂಗ್ ಜೊತೆಯಾಟ ಇನ್ನೂ ಮೂಡಿಬಂದಿಲ್ಲ. ವಿರಾಟ್ ಕೊಹ್ಲಿ ಓಪನಿಂಗ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಕ್ರಮಾಂಕದ ಸಮಸ್ಯೆ ಇನ್ನು ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.
ಶುಕ್ರವಾರದ ಪಂದ್ಯದಲ್ಲಿ ಪಡಿಕ್ಕಲ್ ಬಹುಬೇಗ ವಿಕೆಟ್ ಒಪ್ಪಿಸಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದರ್ ಹೆಚ್ಚು-ಕಡಿಮೆ ತಂಡವನ್ನು ಗೆಲುವಿನ ಹಾದಿಗೆ ತಂದಿದ್ದರು. ಆದರೆ, ವಿರಾಟ್ ವಿಕೆಟ್ ಒಪ್ಪಿಸಿದ ಬಳಿಕ ಗ್ಲೆನ್ ಮ್ಯಾಕ್ಸ್ವೆಲ್ ಅದರ ಮುಂದಿನ ಎಸೆತದಲ್ಲಿಯೇ ಕ್ಲೀನ್ ಬೌಲ್ಡ್ ಆದರು. ಎಬಿ ಡಿವಿಲಿಯರ್ಸ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಈ ಮೂರೂ ಪ್ರಮುಖ ವಿಕೆಟ್ಗಳನ್ನು ಹರ್ಪೀತ್ ಬ್ರಾರ್ ಉರುಳಿಸಿದರು.
ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಜತ್ ಪಾಟಿದರ್ ಮೂರನೇ ಕ್ರಮಾಂಕದಲ್ಲಿ ಯಶಸ್ವಿಯಾಗಿದ್ದರು. ಈ ವರ್ಷ ಆರ್ಸಿಬಿ ಅತ್ಯುತ್ತಮ ಪ್ರದರ್ಶನ ತೋರಬೇಕಾದರೆ, ವಿರಾಟ್ ಕೊಹ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಬ್ಯಾಟಿಂಗ್ ಮಾಡಬೇಕು.
ಪಂಜಾಬ್ ವಿರುದ್ಧ 34 ರನ್ಗಳ ಹೀನಾಯ ಸೋಲನುಭವಿಸಿದ ಆರ್ಸಿಬಿ!

ಪಂಜಾಬ್ ಕಿಂಗ್ಸ್ ಹಲವು ಮಹತ್ವದ ಬದಲಾವಣೆಯೊಂದಿಗೆ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕೆ ಇಳಿದಿತ್ತು. ಅದರಂತೆ ಹರ್ಪೀತ್ ಬ್ರಾರ್ ಅವರನ್ನು ಕರೆ ತಂದಿದ್ದು ರಾಹುಲ್ ಅವರ ಅತ್ಯುತ್ತಮ ನಿರ್ಧಾರ ಎಂದೇ ಹೇಳಬಹುದು. ಅದರಂತೆ ಹರ್ಪೀತ್ ಬ್ರಾರ್ ಬ್ಯಾಟಿಂಗ್ನಲ್ಲಿ ಮಿಂಚಿದರು. 17 ಎಸೆತಗಳಲ್ಲಿ 25 ರನ್ ಗಳಿಸಿ ಡೆತ್ ಓವರ್ಗಳಲ್ಲಿ ನಾಯಕನಿಗೆ ಅತ್ಯುತ್ತಮ ಬೆಂಬಲ ನೀಡಿದರು.
ಅದೇ ರೀತಿ ಬೌಲಿಂಗ್ನಲ್ಲಿಯೂ ಹರ್ಪೀತ್ ಬ್ರಾರ್ ಗುರುತರ ಪ್ರದರ್ಶನ ತೋರಿದರು. ರವಿ ಬಿಷ್ಣೋಯ್ ಹಾಗೂ ಹರ್ಪೀತ್ ಬ್ರಾರ್ ಸ್ಪಿನ್ ಜೋಡಿ 8 ಓವರ್ಗಳಿಗೆ 36 ರನ್ ನೀಡಿ ವಿರಾಟ್ ಸೇರಿದಂತೆ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವಿಕೆಟ್ಗಳನ್ನು ಉರುಳಿಸಿತು. ಬ್ರಾರ್ ಮೂರು ವಿಕೆಟ್ ಕಬಳಿಸಿದರೆ, ಬಿಷ್ಣೋಯ್ ಎರಡು ವಿಕೆಟ್ಗಳನ್ನು ತಮ್ಮ ತೆಕ್ಕಗೆ ಹಾಕಿಕೊಂಡರು. ಈ ಜೋಡಿಯ ಸ್ಪಿನ್ ಮೋಡಿ ಕೂಡ ಆರ್ಸಿಬಿ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಬಹುದು.

ಪಂಜಾಬ್ ಕಿಂಗ್ಸ್:
20 ಓವರ್ಗಳಲ್ಲಿ 5 ವಿಕೆಟ್ಗೆ 179 ರನ್ (ಕೆಎಲ್ ರಾಹುಲ್ 91, ಕ್ರಿಸ್ ಗೇಲ್ 46, ಹರಪ್ರೀತ್ ಬ್ರಾರ್ 25*; ಕೈಲ್ ಜೇಮಿಸನ್ 32ಕ್ಕೆ 2, ಡೇನಿಯೆಲ್ ಸ್ಯಾಮ್ಸ್ 24ಕ್ಕೆ 1, ಯುಜ್ವೇಂದ್ರ ಚಹಲ್ 34ಕ್ಕೆ 1, ಶಹಬಾಝ್ ಅಹ್ಮದ್ 11ಕ್ಕೆ 1).
ರಾಯಲ್ ಚಾಲೆಂಜರ್ಸ್ ಬೆಂಗಳೂರು:
20 ಓವರ್ಗಳಲ್ಲಿ 8 ವಿಕೆಟ್ಗೆ 145 ರನ್ (ವಿರಾಟ್ ಕೊಹ್ಲಿ 35, ರಜತ್ ಪಾಟಿದಾರ್ 31, ಕೈಲ್ ಜೇಮಿಸನ್ 16, ಹರ್ಷಲ್ ಪಟೇಲ್ 31; ಹರಪ್ರೀತ್ ಬ್ರಾರ್ 19ಕ್ಕೆ 3, ರವಿ ಬಿಷ್ಣೋಯ್ 17ಕ್ಕೆ 2).
ಆರ್ಸಿಬಿ ವಿರುದ್ಧ ಗೆದ್ದು ಪಾಯಿಂಟ್ಸ್ ಟೇಬಲ್ನಲ್ಲ ಐದನೇ ಸ್ಥಾನಕ್ಕೇರಿದ ಪಂಜಾಬ್ ಕಿಂಗ್ಸ್ ತಂಡ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕಾದಾಟ ನಡೆಸಲಿವೆ.
ಪಂಜಾಬ್ ವಿರುದ್ಧದ ಸೋಲಿಗೆ ಬೌಲರ್ಗಳ ತಪ್ಪೇ ಕಾರಣ ಎಂದ ಕೊಹ್ಲಿ!
ಬೆಂಗಳೂರು: ಕೊರೊನಾ ವೈರಸ್ನ 2ನೇ ಅಲೆ ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಇಂದಿನ ದಿನಗಳಲ್ಲಿ ಕರುನಾಡಿನ ಖ್ಯಾತ ಹೃದ್ರೋಗ ತಜ್ಞರಾದ ಡಾ. ದೇವಿ ಶೆಟ್ಟಿ ಅವರು, ಹೊಸದೊಂದು ಚಿಂತನೆಯನ್ನು ನಾಡಿನ ಜನರೆದುರು ಮಂಡಿಸಿದ್ದಾರೆ. ಕೊರೊನಾ ವೈರಸ್ನ ಕರಾಳತೆ, ಆಘಾತವನ್ನು ಎದುರಿಸಲು, ಈ ಸಂಕಟದಿಂದ ಹೊರಬರಲು ಧನಾತ್ಮಕ ಚಿಂತನೆಯ ಮೂಲಕ ಹಲವು ಉಪಾಯವನ್ನು ಅವರು ವಿವರಿಸಿದ್ದಾರೆ. ಭಾರತದ ಮೇಲೆ ಮೊದಲ ಬಾರಿ ಕೊರೊನಾ ವೈರಸ್ ದಾಳಿ ನಡೆಸಿದಾಗ ಯಾವುದೇ ಪಿಪಿಇ ಕಿಟ್ ಇರಲಿಲ್ಲ. ಕೇವಲ 30 ಸಾವಿರ ವೆಂಟಿಲೇಟರ್ಗಳಿದ್ದವು. ಆದ್ರೆ, ನಾವು ಕೇವಲ 8 ವಾರಗಳಲ್ಲೇ ಪಿಪಿಇ ಕಿಟ್ ಹಾಗೂ ವೆಂಟಿಲೇರ್ಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದು ನಿಂತೆವು..! ಇದು ಭಾರತದ ಶಕ್ತಿ. ಇದೀಗ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆದ್ರೆ, ಈ ಸಮಸ್ಯೆಯನ್ನೂ ನಾವು ಕೆಲವೇ ದಿನಗಳಲ್ಲಿ ಮೆಟ್ಟಿ ನಿಲ್ಲುತ್ತೇವೆ. ಏಕೆಂದರೆ ಭಾರತವು ಯುವಕರೇ ಬಹುಸಂಖ್ಯಾತರಾಗಿರುವ ದೇಶ. ಈ ದೇಶ ಯುವಶಕ್ತಿ ಬಹುಬೇಗ ಸಮಸ್ಯೆಗಳನ್ನು ಮೆಟ್ಟಿನಿಲ್ಲಬಲ್ಲ ಸಾಮರ್ಥ್ಯ ಹೊಂದಿದೆ. ದೇಶದಲ್ಲಿ ಇರುವ ಉಕ್ಕಿನ ಕಾರ್ಖಾನೆಗಳು ದ್ರವ ಆಮ್ಲಜನಕ ಉತ್ಪಾದಿಸುವಲ್ಲಿ ಕೈಜೋಡಿಸಿವೆ. ದೇಶದ ಆಮ್ಲಜನಕ ಅಗತ್ಯತೆಗಳಿಗೆ ಅವು ಸ್ಪಂದಿಸುತ್ತಿವೆ.ಇಂದಿನ ಸ್ಥಿತಿಗತಿ ಬೇಸರ ತರಿಸುತ್ತಿದೆಯಾದರೂ, ಮಾನಸಿಕವಾಗಿ ಕುಗ್ಗುವ ಅಗತ್ಯತೆ ಇಲ್ಲ. ಆದ್ರೆ, ಆಕ್ಸಿಜನ್ ಕೊರತೆಯ ನಂತರ ಎದುರಾಗೋದು ನರ್ಸ್ ಹಾಗೂ ವೈದ್ಯರ ಕೊರತೆಯ ಸಮಸ್ಯೆ. ಏಕೆಂದರೆ, ಪಿಪಿಇ ಕಿಟ್, ವೆಂಟಿಲೇಟರ್ ರೀತಿಯಲ್ಲೇ ಆಮ್ಲಜನಕ ಕೊರತೆಯ ಸಮಸ್ಯೆಯನ್ನು ನಾವು ಬಹುಬೇಗ ಮೆಟ್ಟಿ ನಿಲ್ಲುತ್ತೇವೆ. ಆದ್ರೆ, ಐಸಿಯುಗಳಲ್ಲಿ ರೋಗಿಗಳು ಜೀವ ಕೈಚೆಲ್ಲದಂತೆ ಕಾಪಾಡುವ ಜವಾಬ್ದಾರಿ ನರ್ಸ್ ಹಾಗೂ ವೈದ್ಯರ ಮೇಲಿದೆ.
ಕೊರೊನಾ ವೈರಸ್ನ 2ನೇ ಅಲೆ ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಇಂದಿನ ದಿನಗಳಲ್ಲಿ ಕರುನಾಡಿನ ಖ್ಯಾತ ಹೃದ್ರೋಗ ತಜ್ಞರಾದ ಡಾ. ದೇವಿ ಶೆಟ್ಟಿ ಅವರು, ಹೊಸದೊಂದು ಚಿಂತನೆಯನ್ನು ನಾಡಿನ ಜನರೆದುರು ಮಂಡಿಸಿದ್ದಾರೆ. ಕೊರೊನಾ ವೈರಸ್ನ ಕರಾಳತೆ, ಆಘಾತವನ್ನು ಎದುರಿಸಲು, ಈ ಸಂಕಟದಿಂದ ಹೊರಬರಲು ಧನಾತ್ಮಕ ಚಿಂತನೆಯ ಮೂಲಕ ಹಲವು ಉಪಾಯವನ್ನು ಅವರು ವಿವರಿಸಿದ್ದಾರೆ.
ಭಾರತದ ಮೇಲೆ ಮೊದಲ ಬಾರಿ ಕೊರೊನಾ ವೈರಸ್ ದಾಳಿ ನಡೆಸಿದಾಗ ಯಾವುದೇ ಪಿಪಿಇ ಕಿಟ್ ಇರಲಿಲ್ಲ. ಕೇವಲ 30 ಸಾವಿರ ವೆಂಟಿಲೇಟರ್ಗಳಿದ್ದವು. ಆದ್ರೆ, ನಾವು ಕೇವಲ 8 ವಾರಗಳಲ್ಲೇ ಪಿಪಿಇ ಕಿಟ್ ಹಾಗೂ ವೆಂಟಿಲೇರ್ಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದು ನಿಂತೆವು..! ಇದು ಭಾರತದ ಶಕ್ತಿ.
ಇದೀಗ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆದ್ರೆ, ಈ ಸಮಸ್ಯೆಯನ್ನೂ ನಾವು ಕೆಲವೇ ದಿನಗಳಲ್ಲಿ ಮೆಟ್ಟಿ ನಿಲ್ಲುತ್ತೇವೆ. ಏಕೆಂದರೆ ಭಾರತವು ಯುವಕರೇ ಬಹುಸಂಖ್ಯಾತರಾಗಿರುವ ದೇಶ. ಈ ದೇಶ ಯುವಶಕ್ತಿ ಬಹುಬೇಗ ಸಮಸ್ಯೆಗಳನ್ನು ಮೆಟ್ಟಿನಿಲ್ಲಬಲ್ಲ ಸಾಮರ್ಥ್ಯ ಹೊಂದಿದೆ. ದೇಶದಲ್ಲಿ ಇರುವ ಉಕ್ಕಿನ ಕಾರ್ಖಾನೆಗಳು ದ್ರವ ಆಮ್ಲಜನಕ ಉತ್ಪಾದಿಸುವಲ್ಲಿ ಕೈಜೋಡಿಸಿವೆ. ದೇಶದ ಆಮ್ಲಜನಕ ಅಗತ್ಯತೆಗಳಿಗೆ ಅವು ಸ್ಪಂದಿಸುತ್ತಿವೆ.
ಇಂದಿನ ಸ್ಥಿತಿಗತಿ ಬೇಸರ ತರಿಸುತ್ತಿದೆಯಾದರೂ, ಮಾನಸಿಕವಾಗಿ ಕುಗ್ಗುವ ಅಗತ್ಯತೆ ಇಲ್ಲ. ಆದ್ರೆ, ಆಕ್ಸಿಜನ್ ಕೊರತೆಯ ನಂತರ ಎದುರಾಗೋದು ನರ್ಸ್ ಹಾಗೂ ವೈದ್ಯರ ಕೊರತೆಯ ಸಮಸ್ಯೆ. ಏಕೆಂದರೆ, ಪಿಪಿಇ ಕಿಟ್, ವೆಂಟಿಲೇಟರ್ ರೀತಿಯಲ್ಲೇ ಆಮ್ಲಜನಕ ಕೊರತೆಯ ಸಮಸ್ಯೆಯನ್ನು ನಾವು ಬಹುಬೇಗ ಮೆಟ್ಟಿ ನಿಲ್ಲುತ್ತೇವೆ. ಆದ್ರೆ, ಐಸಿಯುಗಳಲ್ಲಿ ರೋಗಿಗಳು ಜೀವ ಕೈಚೆಲ್ಲದಂತೆ ಕಾಪಾಡುವ ಜವಾಬ್ದಾರಿ ನರ್ಸ್ ಹಾಗೂ ವೈದ್ಯರ ಮೇಲಿದೆ.

ದೇಶದಲ್ಲಿ 15 ರಿಂದ 20 ಲಕ್ಷ ಜನರು ಪ್ರತಿದಿನ ಸೋಂಕಿತರಾಗುತ್ತಿದ್ದಾರೆ. ಈ ಪೈಕಿ ಶೇ. 5ರಷ್ಟು ಜನರು ಐಸಿಯುಗೆ ದಾಖಲಾಗುವ ಅಗತ್ಯತೆ ಬರಬಹುದು. ಅಂದರೆ ನಮಗೆ ಪ್ರತಿದಿನ 80 ಸಾವಿರ ಐಸಿಯು ಬೆಡ್ ಬೇಕಾಗುತ್ತದೆ. ಆದ್ರೆ, ಭಾರತದಲ್ಲಿ 75 ಸಾವಿರದಿಂದ 90 ಸಾವಿರ ಐಸಿಯು ಬೆಡ್ಗಳು ಮಾತ್ರ ಇವೆ. ಈಗಾಗಲೇ ಇವೆಲ್ಲವೂ ಭರ್ತಿಯಾಗಿವೆ. ಆಘಾತಕಾರಿ ವಿಚಾರವೆಂದರೆ ದೇಶದಲ್ಲಿ ಕೊರೊನಾ ಇನ್ನೂ ಉಚ್ಛ್ರಾಯ ಸ್ಥಿತಿ ತಲುಪಿಲ್ಲ. ಆಗ ಎಷ್ಟು ಐಸಿಯು ಬೆಡ್ಗಳು ಬೇಕಾಗಬಹುದು. ಒಬ್ಬ ರೋಗಿ ಕನಿಷ್ಟ 10 ದಿನಗಳಾದ್ರೂ ಐಸಿಯು ಬೆಡ್ನಲ್ಲಿ ಇರಬೇಕಾಗುತ್ತೆ. ಪರಿಸ್ಥಿತಿ ಹೀಗಿರುವಾಗ ಮುಂದಿನ ಚಿತ್ರಣ ಏನಾಗಬಹುದು..?

ನಾವು ಮುಂದಿನ ಕೆಲವೇ ವಾರಗಳಲ್ಲಿ ದೇಶಾದ್ಯಂತ ಕನಿಷ್ಟ 5 ಲಕ್ಷ ಐಸಿಯು ಬೆಡ್ಗಳನ್ನು ಸೃಷ್ಟಿ ಮಾಡಬೇಕಿದೆ. ದುರಂತವೆಂದರೆ, ಕೇವಲ ಐಸಿಯು ಬೆಡ್ಗಳು ರೋಗಿಗಳಿಗೆ ಚಿಕಿತ್ಸೆ ನೀಡೋದಿಲ್ಲ. ಅದಕ್ಕೆ ವೈದ್ಯರು ಹಾಗೂ ನರ್ಸ್ಗಳು ಬೇಕು. ಹಾಗೆ ನೋಡಿದ್ರೆ ಐಸಿಯುಗಳಲ್ಲಿ ವೈದ್ಯರಿಗಿಂತಾ ನರ್ಸ್ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ರೆ, ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಶೇ. 78ರಷ್ಟಿದೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಕನಿಷ್ಟ 2 ಲಕ್ಷ ನರ್ಸ್ ಹಾಗೂ 1.5 ಲಕ್ಷ ವೈದ್ಯರ ಅಗತ್ಯತೆ ಇದೆ. ಅದೂ ಕೂಡಾ ಕೆಲವೇ ವಾರಗಳಲ್ಲಿ. ಇಷ್ಟೂ ಪ್ರಮಾಣದ ಸಿಬ್ಬಂದಿ ಮುಂದಿನ 1 ವರ್ಷಗಳ ಕಾಲ ಕೊರೊನಾ ನಿರ್ವಹಣೆ ಮಾಡಬೇಕಿದೆ. ಏಕೆಂದರೆ, ಸದ್ಯದ ಕೊರೊನಾ ಅಲೆ ಕನಿಷ್ಟ ಪಕ್ಷ 4 ರಿಂದ 5 ತಿಂಗಳು ಇರುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಸಂಭಾವ್ಯ 3ನೇ ಅಲೆಗೂ ಸಿದ್ದವಿರಬೇಕಿದೆ. ಅಮೆರಿಕ, ಇಂಗ್ಲೆಂಡ್ಗಳಲ್ಲಿ ವೈರಸ್ ಹೇಗೆ ವರ್ತಿಸಿದೆ ಎಂಬುದನ್ನು ನೋಡಿಕೊಂಡು ನಾವು ಈ ಅಂದಾಜು ಮಾಡಬೇಕಿದೆ. ಅಮೆರಿಕದಲ್ಲಿ ಕೊರೊನಾ ವೈರಸ್ ವರ್ತಿಸುವುದಕ್ಕಿಂತಾ ಭಿನ್ನವಾಗೇನೂ ಭಾರತದಲ್ಲಿ ವರ್ತಿಸುತ್ತಿಲ್ಲ. ನಮ್ಮ ವಂಶವಾಹಿ ವ್ಯತ್ಯಾಸಗಳು ಅಷ್ಟೇನೂ ವೈರಸ್ ಮೇಲೆ ಪರಿಣಾಮ ಬೀರಿಲ್ಲ.

ಕೆಲವೇ ವಾರಗಳಲ್ಲಿ ಇಷ್ಟು ಪ್ರಮಾಣದ ಮಾನವ ಸಂಪನ್ಮೂಲ ಸೃಷ್ಟಿ ಭಾರತದಿಂದ ಮಾತ್ರ ಸಾಧ್ಯ. ಏಕೆಂದರೆ ಭಾರತದಾದ್ಯಂತ ನರ್ಸಿಂಗ್ ಕಾಲೇಜುಗಳಲ್ಲಿ ಬಿಎಸ್ಸಿ ಹಾಗೂ ಜಿಎನ್ಎಂ ಕೋರ್ಸ್ನ ಅಂತಿಮ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 2 ಲಕ್ಷದ 20 ಸಾವಿರದಷ್ಟಿದೆ. ಈ ವಿದ್ಯಾರ್ಥಿಗಳು ಈಗ ಪರೀಕ್ಷೆಗಾಗಿ ಕಾದು ಕುಳಿತಿದ್ದಾರೆ. ಇವರೆಲ್ಲರೂ ಪ್ರಾಯೋಗಿಕ ತರಬೇತಿ ಪಡೆದಿದ್ದಾರೆ. ಆದ್ರೆ, ಪರೀಕ್ಷೆಯನ್ನು ಎದುರಿಸಿಲ್ಲ ಅಷ್ಟೇ. ಇವರನ್ನು ಆರೋಗ್ಯ ಇಲಾಖೆಯು ನೇರವಾಗಿ ಕೆಲಸಕ್ಕೆ ಆಹ್ವಾನಿಸಬೇಕಿದೆ. 1 ವರ್ಷಗಳ ಕಾಲ ಕೊರೊನಾ ವೈರಸ್ ರೋಗಿಗಳಿಗೆ ಐಸಿಯುಗಳಲ್ಲಿ ಚಿಕಿತ್ಸೆ ನೀಡಿದರೆ ನಿಮಗೆ ಪದವಿ ಪ್ರಮಾಣ ಪತ್ರ ನೀಡುತ್ತೇವೆ ಎಂದು ಹೇಳಿದರೆ ಸಾಕಷ್ಟು ಮಾನವ ಸಂಪನ್ಮೂಲ ಲಭ್ಯವಾಗುತ್ತದೆ.
ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಸರ್ಕಾರಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ವೇಳೆ ಕೋವಿಡ್ ಐಸಿಯುಗಳಲ್ಲಿ 1 ವರ್ಷಗಳ ಕಾಲ ಕಾರ್ಯನಿರ್ವಹಿಸಿದವರಿಗೆ ಮೊದಲ ಪ್ರಾಶಸ್ತ್ಯ ನೀಡೋದಾಗಿ ಭರವಸೆ ನೀಡಿ ಕೆಲಸ ಕ್ಕೆ ಕರೆದುಕೊಳ್ಳಬೇಕಿದೆ. ಏಕೆಂದರೆ, ಕೊರೊನಾ ವಿರುದ್ಧದ ಸಮರವನ್ನು ನರ್ಸ್ ಹಾಗೂ ವೈದ್ಯರಿಲ್ಲದೆ ಹೋರಾಡಲು ಸಾಧ್ಯವಿಲ್ಲ. ಹಾಗೂ ಹಿರಿಯ ವಯಸ್ಸಿನ ವೈದ್ಯರು ಕೊರೊನಾ ವಿರುದ್ಧದ ಸಮರದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಲಸಿಕೆ ಪಡೆದ ಯುವಕರು ಈ ಸಮರದಲ್ಲಿ ಭಾಗಿಯಾಗಲು ಯೋಗ್ಯರು.

ನರ್ಸ್ ಸಮಸ್ಯೆಯನ್ನು ಒಂದು ಹಂತದಲ್ಲಿ ಬಗೆಹರಿಸಿದ ಬಳಿಕ ವೈದ್ಯರ ಕೊರತೆ ಸಮಸ್ಯೆ ಬಗೆಹರಿಸೋದು ಹೇಗೆ..? ದೇಶದ ಹಲವು ಮೆಡಿಕಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ಮುಗಿಸಿದ ವೈದ್ಯರು ನೀಟ್ ಪರೀಕ್ಷೆ ಎದುರಿಸಲು ಸಜ್ಜಾಗುತ್ತಿದ್ದಾರೆ. ಇವರ ಸಂಖ್ಯೆ 1 ಲಕ್ಷ 30 ಸಾವಿರದಷ್ಟಿದೆ. ಇವರೆಲ್ಲರೂ ಈಗ ಸ್ನಾತಕೋತ್ತರ ಪದವಿ ಪಡೆಯಲು ಪ್ರವೇಶ ಪರೀಕ್ಷೆಗೆ ತಯಾರಾಗುತ್ತಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ಇವರಿಗೆ ಆದಷ್ಟು ಬೇಗ ಆನ್ಲೈನ್ ನೀಟ್ ಪರೀಕ್ಷೆ ನೀಡಬೇಕಿದೆ. ಕೆಲವೇ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶವೂ ಬರಬೇಕಿದೆ. ದೇಶಾದ್ಯಂತ 35 ಸಾವಿರ ಸ್ನಾತಕೋತ್ತರ ಪದವಿ ಸೀಟ್ಗಳಿವೆ. ಅಲ್ಲಿಗೆ ಕಲಿಯಲು 1 ಲಕ್ಷ ವಿದ್ಯಾರ್ಥಿಗಳು ಸೇರ್ಪಡೆಯಾದರೆ, ಸೀಟ್ ಸಿಗದ 1 ಲಕ್ಷ ವಿದ್ಯಾರ್ಥಿಗಳು ಸೇವೆಗೆ ಲಭ್ಯರಾಗುತ್ತಾರೆ. ಅವರು ಮುಂದಿನ ವರ್ಷ ನೀಟ್ ಪರೀಕ್ಷೆ ಎದುರಿಸುವ ಸಂದರ್ಭದಲ್ಲಿ ಅವರಿಗೆ ಭಾರೀ ಪ್ರಮಾಣದ ಗ್ರೇಸ್ ಅಂಕಗಳನ್ನು ಕೊಡುತ್ತೇವೆ ಎಂದು ಅವರನ್ನು ಒಂದು ವರ್ಷಗಳ ಕಾಲ ಕೋವಿಡ್ ಐಸಿಯುನಲ್ಲಿ ಸೇವೆಗೆ ನೇಮಿಸಬಹುದಾಗಿದೆ. ಇದನ್ನು ನಿರ್ವಹಿಸಲು ಸರ್ಕಾರವು ಪ್ರತ್ಯೇಕ ಇಲಾಖೆಯನ್ನು ತೆರೆಯಬೇಕಿದೆ.

ಇನ್ನು ನಾವು ಕೊರೊನಾ ಸ್ಥಿತಿಯನ್ನು ಕೇವಲ ದಿಲ್ಲಿ, ಬೆಂಗಳೂರು, ಪುಣೆಯಂಥಾ ನಗರಗಳನ್ನು ನೋಡಿ ಅವಲೋಕಿಸುತ್ತಿದ್ದೇವೆ. ಟೈರ್ 2, 3 ನಗರಗಳ ಕಥೆ ಏನು..? ಸದ್ಯ ಈ ನಗರಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆ ಇದೆ. ಆದ್ರೆ, ಆ ನಗರಗಳಲ್ಲೂ ಬೆಂಗಳೂರಿನಂಥಾ ಸ್ಥಿತಿಯೇ ಎದುರಾದರೂ ಅಚ್ಚರಿ ಇಲ್ಲ. ಕೋವಿಡ್ ಯಾರನ್ನೂ ಬಿಡೋದಿಲ್ಲ. ಆದ್ರೆ, ಆ ನಗರಗಳಲ್ಲಿ ದೊಡ್ಡ ಮಟ್ಟದ ಖಾಸಗಿ ಆಸ್ಪತ್ರೆಗಳೂ ಇಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವೂ ಇಲ್ಲ.

ಇನ್ನೊಂದೆಡೆ ಸ್ನಾತಕೋತ್ತರ ಪದವಿ ಮುಗಿಸಿದ 25 ಸಾವಿರ ವೈದ್ಯರು ಇದೀಗ ಪರೀಕ್ಷೆಗಾಗಿ ಎದುರು ನೋಡ್ತಿದ್ದಾರೆ. ಅವರೂ ಕೂಡಾ ಕೋವಿಡ್ ಐಸಿಯುಗಳಲ್ಲಿ ಕಾರ್ಯನಿರ್ವಹಿಸಬಹುದು. ಅವರು ಪರೀಕ್ಷೆ ಬರೆಯದೇ ಕೋವಿಡ್ ಐಸಿಯುಗಳಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದರೆ ಪದವಿ ಪ್ರಮಾಣ ಪತ್ರ ನೀಡಿ. ಹಾಗೆ ನೋಡಿದ್ರೆ, 90 ಸಾವಿರದಿಂದ 1 ಲಕ್ಷ ಭಾರತೀಯ ವೈದ್ಯರು ವಿದೇಶಗಳಲ್ಲೂ ಪದವಿ ವ್ಯಾಸಂಗ ಮುಗಿಸಿದ್ದಾರೆ. ಅವರಲ್ಲಿ ಪ್ರತಿಭಾಶಾಲಿಗಳನ್ನೂ ಗುರ್ತಿಸಿ ಕೋವಿಡ್ ಐಸಿಯುಗಳಲ್ಲಿ 1 ವರ್ಷ ಕಾರ್ಯನಿರ್ವಹಿಸುವಂತೆ ಹೇಳಬಹುದು.
ಈ ಎಲ್ಲವನ್ನೂ ಕೆಲವೇ ವಾರಗಳಲ್ಲಿ ಮಾಡಿದರೆ ಕೋವಿಡ್ ವಿರುದ್ಧದ ಸಮರದಲ್ಲಿ ನಾವು ಮೇಲುಗೈ ಸಾಧಿಸಬಹುದು. ಇಲ್ಲವಾದ್ರೆ, ಈ ಪರಿಸ್ಥಿತಿ ಇನ್ನಷ್ಟು ಗಂಭೀರ ಆಗಬಹುದು. ಏಕೆಂದರೆ, ಐಸಿಯುಗೆ ದಾಖಲಾಗುವ ರೋಗಿಗಳಿಗೆ ಆಮ್ಲಜನಕ ನೀಡಿದಾಕ್ಷಣ ಅವರು ಗುಣಮುಖ ಆಗೋದಿಲ್ಲ. ಅವರನ್ನು ಗಮನಿಸಲು ವೈದ್ಯರು ಹಾಗೂ ನರ್ಸ್ಗಳು ಬೇಕು.

ಮೇ ತಿಂಗಳ ಬಿಸಿಲಿನಲ್ಲಿ ಗಂಟೆಗಟ್ಟಲೆ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸೋದು ಸುಲಭದ ಕೆಲಸವಲ್ಲ. ಈಗಾಗಲೇ 1 ವರ್ಷದಿಂದ ಈ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್ಗಳ ಕಾರ್ಯ ಶ್ಲಾಘನೀಯ. ಆದ್ರೆ, ಅವರು ಸುಸ್ತಾಗಿದ್ದಾರೆ. ಹಲವರು ಸೋಂಕಿತರಾಗಿದ್ದಾರೆ. ಹೀಗಾಗಿ, ಪರ್ಯಾಯಗಳನ್ನು ನಾವು ಹುಡುಕಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದ ಕೇಂದ್ರ ಸರ್ಕಾರವು ಈ ಸವಾಲನ್ನು ಸಮರ್ಥವಾಗಿ ಎದುರಿಸುತ್ತದೆ. ಒಂದು ಹಂತದಲ್ಲಿ ನಾನು ಅಂದಾಜಿಸಿರುವ ಕೋವಿಡ್ ರೋಗಿಗಳ ಸಂಖ್ಯೆ ಹಾಗೂ ಅಗತ್ಯವಿರುವ ಐಸಿಯುಗಳ ಸಂಖ್ಯೆ ತಪ್ಪಾಗಬಹುದು. ಆದ್ರೆ, ನಾನು ಹೇಳಿದಂತೆಯೇ ಆದರೆ ಏನು ಮಾಡೋದು..? ಈಗಾಗಲೇ ತಡವಾಗಿದೆ. ನಾವು ಸುಮ್ಮನೆ ನೋಡುತ್ತಾ ಕೂರೋದು ಸಾಧ್ಯವೇ ಇಲ್ಲ..!
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...