ವಿಶ್ವಕಪ್ ಗೆಲ್ಲಲು ವಿರಾಟ್-ರೋಹಿತ್ ಮಾಸ್ಟರ್ ಪ್ಲ್ಯಾನ್

ಮ್ಯಾಂಚೆಸ್ಟರ್: ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಸಾಗುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದೆ. ವಿಶ್ವಕಪ್ ಆವೃತ್ತಿಯೊಂದರಲ್ಲೇ ದಾಖಲೆಯ ಐದನೇ ಶತಕ ಸಾಧನೆ ಮಾಡಿರುವ ಉಪನಾಯಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇದೀಗ ಸ್ವತ: ನಾಯಕ ಅವರೇ ರೋಹಿತ್ ಶರ್ಮಾ ಅವರನ್ನು ಸಂದರ್ಶನ ಮಾಡುವ ಮೂಲಕ ಮಾಸ್ಟರ್ ಪ್ಲ್ಯಾನ್ ಬಗ್ಗೆ ಮಾಹಿತಿ ಬಹಿರಂಗ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ದಾಖಲಾದ ಗೆಲುವಿನ ಬಳಿಕ ನೆರೆದಿದ್ದ ಪ್ರೇಕ್ಷಕರ ಮುಂಭಾಗದಲ್ಲಿ ಪ್ರಶ್ನೆಯನ್ನು ಕೇಳತೊಡಗಿದರು. ಮ್ಯಾಚ್ ವಿನ್ನಿಂಗ್ ಪ್ರದರ್ಶನ ಕಾಯ್ದುಕೊಳ್ಳಲು ಹೇಗೆ ಸಾಧ್ಯವಾಗುತ್ತಿದೆ ಎಂಬುದನ್ನು ಕೇಳಿದಾಗ, ಓರ್ವ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಆಗಿ ಕಳೆದು ಹೋಗಿರುವುದರ ಬಗ್ಗೆ ಹೆಚ್ಚು ಚಿಂತಿಸದೇ ವರ್ತಮಾನ ಕಾಲದಲ್ಲಿರಲು ಶ್ರಮಿಸುವುದಾಗಿ ತಿಳಿಸಿದರು. ನಮ್ಮ ಪಾಲಿಗಿದು ಮಹತ್ವದ ಸರಣಿಯಾಗಿದ್ದು, ಅತ್ಯುತ್ತಮ ಫಾರ್ಮ್ ಕಾಪಾಡಿಕೊಳ್ಳಲು ಬಯಸುತ್ತಿದ್ದೇವೆ. ನನ್ನ ಕರ್ತವ್ಯವನ್ನು ನಿಭಾಯಿಸುವುದಕ್ಕಿಂತಲೂ ಮಿಗಿಲಾಗಿ ಉತ್ತಮ ಫಾರ್ಮ್ ಮುಂದುವರಿಸಲು ಬಯಸುತ್ತೇನೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯ ಮುಖ್ಯವೆನಿಸಿತ್ತು. ಅಲ್ಲಿಂದ ಬಳಿಕ ಮತ್ತಷ್ಟು ಆತ್ಮವಿಶ್ವಾಸದಿಂದ ಬ್ಯಾಟಿಂಗ್‌ನತ್ತ ಗಮನ ಕೇಂದ್ರಿಕರಿಸಲು ಸಾಧ್ಯವಾಯಿತು ಎಂದರು. 2011ರ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ರೋಹಿತ್, 2015ರಲ್ಲಿ ತಂಡದಲ್ಲಿದ್ದರೂ ಸೆಮಿಫೈನಲ್‌ನಲ್ಲಿ ನಿರ್ಗಮನದ ಹಾದಿ ಹಿಡಿಯಬೇಕಾಯಿತು. ಇದೀಗ ಮಗದೊಂದು ವಿಶ್ವಕಪ್‌ನಲ್ಲಿ ತಮ್ಮನ್ನು ತಾವೇ ಹೇಗೆ ಉತ್ತೇಜಿಸುತ್ತಾರೆ ಹಾಗೂ ಓರ್ವ ಹಿರಿಯ ಆಟಗಾರನಾಗಿ ಎಷ್ಟು ನಿರ್ಣಾಯಕವೆನಿಸಿದೆ ಎಂಬುದಕ್ಕೆ ಉತ್ತರವಾಗಿ, ವಿಶ್ವಕಪ್ ಪ್ರೀಮಿಯರ್ ಟೂರ್ನಿಯಾಗಿದೆ. ಹಾಗಿದ್ದರೂ ದೈನಂದಿನ ದಿನಚರಿಯಲ್ಲಿ ಮಾತ್ರ ಗಮನ ಕೇಂದ್ರಿಕರಿಸುತ್ತೇನೆ. ಹೌದು, ಇದು ವಿಶ್ವಕಪ್ ಆದರೂ ಮಗದೊಂದು ಕ್ರಿಕೆಟ್ ಪಂದ್ಯವಾಗಿದೆ. ಹಾಗಾಗಿ ಕ್ರಿಕೆಟ್ ಪಂದ್ಯವನ್ನು ಗೆಲ್ಲಲು ಉತ್ತಮವಾಗಿ ಆಡಬೇಕಿದೆ. ಅದರ ಮೇಲೆ ಮಾತ್ರ ಗಮನ ಹರಿಸುತ್ತೇನೆ ಎಂದರು. ಅಂತಿಮವಾಗಿ ಮುಂದಿನ ಎರಡು ಪಂದ್ಯಗಳಲ್ಲೂ ಇದೇ ಫಾರ್ಮ್ ಮುಂದುವರಿಸುವಂತೆಯೇ ರೋಹಿತ್‌ಗೆ ವಿರಾಟ್ ಶುಭ ಹಾರೈಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/325GyqO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...