ಆಟಗಾರರನ್ನು ಗದರಿಸುವ ಸಂಪ್ರದಾಯ ಚೇಂಜ್ ರೂಮ್‌ನಲ್ಲಿಲ್ಲ: ಕೊಹ್ಲಿ

ಹೊಸದಿಲ್ಲಿ: ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮುಗ್ಗರಿಸಿರುವ ಭಾರತ ಕ್ರಿಕೆಟ್ ತಂಡದ ಟ್ರೋಫಿ ಕನಸು ಭಗ್ನಗೊಂಡಿತ್ತು. ಇದೀಗ ಸೋಲನ್ನು ತಡೆಗಟ್ಟಲು ಏನು ಮಾಡುವೀರಿ ಎಂಬ ಪ್ರಶ್ನೆಗೆ ಉತ್ತರವಾಗಿ ಈಗ ಆಟಗಾರರನ್ನು ಗದರಿಸುವ ಸಂಪ್ರದಾಯ ಚೇಂಜ್ ರೂಮ್‌ನಲ್ಲಿಲ್ಲ ಎಂದು ನಾಯಕ ನೇರ ಉತ್ತರ ನೀಡಿದ್ದಾರೆ. ನಾನು ಕುಲ್‌ದೀಪ್ ಯಾದವ್ ಜತೆ ಎಷ್ಟು ಸ್ನೇಹಪರವಾಗಿರುತ್ತೇನೋ ಅಷ್ಟೇ ಸ್ನೇಹದಿಂದ ಮಹೇಂದ್ರ ಸಿಂಗ್ ಧೋನಿ ಜತೆಗೂ ಇರುತ್ತೇನೆ. ವಾತಾವರಣ ಹೇಗಿದೆಯೆಂದರೆ ಯಾರು ಬೇಕಾದರೂ ಯಾರ ಜತೆಗೂ ಏನು ಬೇಕಾದರೂ ಹೇಳಬಹುದು ಎಂದು ಡ್ರೆಸ್ಸಿಂಗ್ ರೂಮ್ ರಹಸ್ಯವನ್ನು ಬಿಚ್ಚಿಟ್ಟರು. ನಾನಂತೂ ಸಹ ಆಟಗಾರರ ಬಳಿ ಹೋಗಿ ನೋಡು ನಾನು ಈ ತಪ್ಪನ್ನು ಮಾಡಿದ್ದೇನೆ. ನೀನಂತೂ ಅದನ್ನು ಮಾಡದಿರು ಎಂದು ಹೇಳುತ್ತೇನೆ. ಹೀಗೆ ಮಾಡುವುದರಿಂದು ಎರಡು ಮೂರು ವರ್ಷಗಳಲ್ಲಿ ಕೆರಿಯರ್ ಸುಧಾರಿಸಿಕೊಳ್ಳಲಿದೆ ಎಂದು ವಿರಾಟ್ ಹೇಳಿದರು. ಆಟಗಾರರಿಗೆ ಜವಾಬ್ದಾರಿ ನೀಡುವುದರಲ್ಲಿ ನಾನು ನಂಬಿಕೆಯನ್ನಿಡುತ್ತೇನೆ. ಅವರಿಗೆ ಅವರದ್ದೇ ಆದ ಜಾಗ ನೀಡಿದ್ದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಅವಕಾಶ ದೊರಕುತ್ತದೆ. ಅವರು ಗೊಂದಲಕ್ಕೊಳಗಾದ ಹಂತಕ್ಕೆ ತಲುಪಿದಾಗ ನಾನು ಸಮಾಲೋಚಿಸುತ್ತೇನೆ. ನೀವು ಎತ್ತ ಸಾಗುತ್ತಿದ್ದೀರಿ ಹಾಗೂ ಎತ್ತ ಸಾಗಬೇಕು ಎಂಬುದರ ಬಗ್ಗೆ ಚರ್ಚಿಸುತ್ತೇನೆ ಎಂದರು. ಕೆರಿಯರ್ ಆರಂಭದಲ್ಲೇ ತಪ್ಪುಗಳನ್ನು ತಿದ್ದಿಕೊಳ್ಳದಿದ್ದಲ್ಲಿ ಬಳಿಕ ಬೇಸರಪಟ್ಟುಕೊಳ್ಳಬೇಕಾಗುತ್ತದೆ ಎಂದು ತಮ್ಮ ವೃತ್ತಿ ಜೀವನವನ್ನು ಉದಾಹರಣೆಯಾಗಿ ನೀಡುತ್ತಾ ವಿರಾಟ್ ತಿಳಿಸಿದರು. ಇದರಿಂದ ಎರಡು ಮೂರು ವರ್ಷಗಳನ್ನು ಹಾಳಾಗುವುದನ್ನು ಕಾಪಾಡಿಕೊಳ್ಳಬಹುದು ಎಂದರು. ಕೆರಿಯರ್ ಆರಂಭಿಕ ಕಾಲಘಟ್ಟದಲ್ಲಿ ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಆರಂಭದಲ್ಲಿ ಗಮನ ಹರಿಸಲು ಸಾಧ್ಯವಾಗದೇ ವಿಚಲಿತನಾಗಿದ್ದೆ. ಬಳಿಕ ಗಮನ ಕೇಂದ್ರಿಕರಿಸಲು ಸಾಧ್ಯವಾಯಿತು. ನಾನೀಗ ಈ ಹಂತದಲ್ಲಿರುವುದಕ್ಕೆ ಸಂತಸವಿದೆ. ಕಠಿಣ ಪರಿಶ್ರಮ ಮಾತ್ರ ಸದಾ ನಿಮ್ಮ ಜತೆಗಿರುತ್ತದೆ ಎಂದು ಮಾತನ್ನು ಕೊನೆಗೊಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2y9R4Qi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...