ಹೊಸದಿಲ್ಲಿ: ವೆಸ್ಟ್ಇಂಡೀಸ್ ಪ್ರವಾಸದಲ್ಲಿ ತಂಡದ ಪರ ಹ್ಯಾಟ್ರಿಕ್ ಅರ್ಧಶತಕಗಳನ್ನು ಬಾರಿಸಿಯೂ ಹಿರಿಯರ ತಂಡಕ್ಕೆ ಆಯ್ಕೆಯಾಗುವಲ್ಲಿ ಯುವ ಭರವಸೆಯ ಬ್ಯಾಟ್ಸ್ಮನ್ ವಿಫಲವಾಗಿದ್ದಾರೆ. ಭವಿಷ್ಯದ ತಂಡವನ್ನು ರೂಪಿಸುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಮಣೆ ಹಾಕುವುದಾಗಿ ಆಯ್ಕೆ ಸಮಿತಿ ಒತ್ತಿ ಹೇಳಿದರೂ ಅಂಡರ್ 19 ವಿಶ್ವಕಪ್ ಹೀರೊಗೆ ಅವಕಾಶ ನೀಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ವಿಂಡೀಸ್ ಸರಣಿಯಲ್ಲಿ ಭಾರತ ಟ್ವೆಂಟಿ-20, ಏಕದಿನ ಹಾಗೂ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಲಿದೆ. ಇದರಂತೆ ಕನಿಷ್ಠ ಒಂದು ಪ್ರಕಾರದ ಆಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಭರವಸೆ ಇಟ್ಟುಕೊಂಡಿದ್ದರು. ಆದರೆ ಇದೀಗ ಆಯ್ಕೆಯಾಗದಿರುವುದರ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಭಾರತ ಎ ತಂಡದಲ್ಲಿದ್ದ ನಾಯಕ ಮನೀಷ್ ಪಾಂಡೆ ಸೇರಿದಂತೆ ಏಳು ಮಂದಿಗೆ ಆಟಗಾರರಿಗೆ ಬುಲಾವ್ ಲಭಿಸಿದೆ. ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಖಲೀಲ್ ಅಹ್ಮದ್, ನವದೀಪ್ ಸೈನಿ, ದೀಪಕ್ ಚಹರ್ ಹಾಗೂ ರಾಹುಲ್ ರಾಹುಲ್ ವಿಂಡೀಸ್ ಸರಣಿಗೆ ಆಯ್ಕೆಯಾಗಿದ್ದಾರೆ. ವಿಚಿತ್ರವೆಂಬಂತೆ ವಿಂಡೀಸ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಹೊರತಾಗಿಯೂ ಗಿಲ್ರನ್ನು ಕಡೆಗಣಿಸಲಾಗಿದೆ. ಗಿಲ್ ಆಡಿರುವ ಐದು ಪಂದ್ಯಗಳಲ್ಲಿ 54.50ರ ಸರಾಸರಿಯಲ್ಲಿ 218 ರನ್ ಕಲೆ ಹಾಕಿದ್ದರು. ನಾನೀಗ ಆಯ್ಕೆಯಾಗದಿರುವುದರ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಳ್ಳುವುದಿಲ್ಲ. ಇದರ ಬದಲು ಮತ್ತಷ್ಟು ರನ್ ಗಳಿಸುವುದರತ್ತ ಗಮನ ಕೇಂದ್ರಿಕರಿಸಿದ್ದೇನೆ ಎಂದಿದ್ದಾರೆ. ಕೆಎಲ್ ರಾಹುಲ್ ನಿಷೇಧಕ್ಕೊಳಗಾದಾಗ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ ಗಿಲ್ ಪ್ರಭಾವಿ ಮೂಡಿಸುವಲ್ಲಿ ವಿಫಲವಾಗಿದ್ದರು. ಸದ್ಯ ವೇಟಿಂಗ್ ಲಿಸ್ಟ್ನಲ್ಲಿರುವ ಗಿಲ್ಗೆ ಅವಕಾಶ ಸಿಗಲಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಎಸ್ಕೆ ಪ್ರಸಾದ್ ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JXovLf