ಹೊಸದಿಲ್ಲಿ: (ಐಸಿಎ) ರಚನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ () ಹಸಿರು ನಿಶಾನೆ ತೋರಿದೆ. ಮಾಜಿ ಆಟಗಾರರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಐಸಿಎ ರೂಪುಗೊಂಡಿದೆ. ಆದರೂ ಐಸಿಎ, ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಸಂಘಗಳ ಒಕ್ಕೂಟದ (ಎಫ್ಐಸಿಎ) ಭಾಗವಾಗಿರುವುದಿಲ್ಲ. ಅಲ್ಲದೆ ಇತರೆ ದೇಶಗಳ ಆಟಗಾರರ ಸಂಘಗಳಿಗಿಂತಲೂ ವಿಭಿನ್ನವಾಗಿ ಮಾಜಿ ಪುರುಷ ಹಾಗೂ ಮಹಿಳಾ ಆಟಗಾರ್ತಿಯರನ್ನು ಮಾತ್ರ ಒಳಗೊಂಡಿರಲಿದೆ. ಭಾರತೀಯ ಕ್ರಿಕೆಟಿಗರ ಸಂಘ ಸ್ಥಾಪನೆಗೆ ಬಿಸಿಸಿಐ ಅಧಿಕೃತ ಮಾನ್ಯತೆ ನೀಡಿದೆ. ಅಲ್ಲದೆ ಈ ಲಾಭರಹಿತ ಸಂಘವು ಬಿಸಿಸಿಐ ಕಾರ್ಯ ಚಟುವಟಿಕೆಯಿಂದ ಮುಕ್ತವಾಗಿರಲಿದೆ. ಆರಂಭದಲ್ಲಿ ಬಿಸಿಸಿಐ ನೆರವು ನೀಡಲಿದ್ದು, ಬಳಿಕ ತನ್ನದೇ ನಿಧಿಯನ್ನು ಸಂಗ್ರಹಿಸಲಿದೆ. ಐಸಿಎ ನಿರ್ದೇಶಕರಾಗಿ ಮಾಜಿ ಆಟಗಾರರಾದ ಕಪಿಲ್ ದೇವ್, ಅಜಿತ್ ಅಗರ್ಕರ್ ಹಾಗೂ ಶಾಂತ ರಂಗಸ್ವಾಮಿ ಆಯ್ಕೆಯಾಗಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2yaXE8Q