ಶ್ರೀಹರಿಕೋಟ: ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಗಗನನೌಕೆ ನಭಕ್ಕೆ ಜಿಗಿದಿದೆ. ಜುಲೈ 15ರಂದು ಉಡ್ಡಯನದ ವೇಳೆ ಕಂಡು ಬಂದಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು ಇಂದು(ಮಂಗಳವಾರ) ಮಧ್ಯಾಹ್ನ ಸರಿಯಾಗಿ 2.43ಕ್ಕೆ ವ್ಯೋಮನೌಕೆಯನ್ನು ಹೊತ್ತ 'ಬಾಹುಬಲಿ' ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾನಂಗಳಕ್ಕೆ ಜಿಗಿಯಿತು. ಅಧ್ಯಕ್ಷ ಕೆ. ಶಿವನ್ ಹೇಳಿದಂತೆ '' ಕೋಟಿ ಕೋಟಿ ಕನಸುಗಳನ್ನು ಹೊತ್ತು ಚಂದ್ರನಲ್ಲಿಗೆ ಸಾಗುತ್ತಿದೆ. ಜುಲೈ 15ರಂದು ಉಡ್ಡಯನಗೊಳ್ಳಬೇಕಿದ್ದ ಬಾಹುಬಲಿ ತಾಂತ್ರಿಕ ದೋಷದಿಂದ ಜುಲೈ 22ಕ್ಕೆ ಮುಂದೂಡಲಾಗಿತ್ತು. ಬಾಹುಬಲಿ ಉಡ್ಡಯನದ ವೀಡಿಯೋ ನೋಡಿ
from India & World News in Kannada | VK Polls https://ift.tt/2Y8wMkC