
ಮಂಗಳೂರು: ತುಳುನಾಡಿನ ದೈವಗಳ ಶಕ್ತಿ ಎಲ್ಲರಿಗೂ ಗೊತ್ತೆ ಇದೆ. ಹೀಗಾಗಿ ಯಾರು ಕೂಡ ದೈವದ ಸ್ಥಳಗಳಲ್ಲಿ ಅನ್ಯಾಯ ಎಸಗಲು ಹೋಗುವುದಿಲ್ಲ. ಆದರೆ ಕೆಲ ತಿಂಗಳ ಹಿಂದೆ ಭಾರೀ ಅನ್ಯಾಯವೆಸಗಿ, ಅಧರ್ಮ ಎಸಗಿರುವ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಹೌದು, ಕೊರಗಜ್ಜನ ಕಾಣಿಕೆಡಬ್ಬವನ್ನು ಅಪವಿತ್ರಗೊಳಿಸಿ ಯುವಕ ರಕ್ತ ವಾಂತಿ ಮಾಡಿ ಸಾವನಪ್ಪಿದ್ದಾನೆ. ಹೌದು, ನಗರದ ಎಮ್ಮೆಕೆರೆ ಸಹಿತ ಹಲವು ದೈವಸ್ಥಾನಗಳನ್ನು ಅಪವಿತ್ರಗೊಳಿಸಿದ ಆರೋಪಿಗಳ ಪೈಕಿ ಒಬ್ಬಾತ ಮೃತಪಟ್ಟಿದ್ದು, ಕೊರಗಜ್ಜನ ಬಂಟನಾಗಿರುವ ಗುಳಿಗನೇ ತಕ್ಕ ಶಿಕ್ಷೆ ಯುವಕನಿಗೆ ಕೊಟ್ಟಿರುವುದಾಗಿ ಚರ್ಚೆ ನಡೆಯುತ್ತಿದೆ. ಪ್ರಕರಣದ ವಿವರ! ನಗರದ ಎಮ್ಮೆಕೆರೆ ಬಬ್ಬುಸ್ವಾಮಿ ಪರಿವಾರ ದೈವಗಳ ಕ್ಷೇತ್ರ ಸೇರಿದಂತೆ 9 ದೈವಸ್ಥಾನಗಳ ಕಾಣಿಕೆ ಡಬ್ಬಿಗಳಿಗೆ ಆರೋಪಿಗಳು ಅಸಹ್ಯ ವಸ್ತು(ಕಾಂಡೋಮ್)ಗಳನ್ನು ಹಾಕಿ ಅಪವಿತ್ರಗೊಳಿಸಿದ್ದರು. ತಿಂಗಳ ಹಿಂದೆ ಕಾಣಿಕೆ ಡಬ್ಬಿ ತೆರೆದು ನೋಡುವಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹಲವು ದೈವಸ್ಥಾನಗಳ ಆಡಳಿತ ಮಂಡಳಿಗಳು ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದು, ತನಿಖೆ ಪ್ರಗತಿಯಲ್ಲಿತ್ತು. ಒಬ್ಬ ಸಾವು, ಇಬ್ಬರು ಅಸ್ವಸ್ಥ! ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗುತ್ತಿದ್ದಂತೆ ದೈವಸ್ಥಾನಗಳಲ್ಲಿ ಪ್ರಾರ್ಥನೆ, ಪ್ರತಿಭಟನೆ ಜೋರಾಯಿತು. ಈ ಮಧ್ಯೆ ಪ್ರಕರಣದ ರೂವಾರಿ ನವಾಝ್ ಎಂಬಾತ ಅಸ್ವಸ್ಥಗೊಂಡಿದ್ದು, ಯಾವುದೇ ಚಿಕಿತ್ಸೆ ನೀಡಿದರೂ ಗುಣಮುಖವಾಗಲಿಲ್ಲ. ಈ ಸಂದರ್ಭ ಕೃತ್ಯದಲ್ಲಿಭಾಗಿಯಾದ ಅಬ್ದುಲ್ ರಹೀಂ, ಅಬ್ದುಲ್ ತೌಫಿಕ್ ಬಳಿ 'ನಾವು ಕೊರಗಜ್ಜಹಾಗೂ ಕೆಲವೆಡೆ ದೈವಸ್ಥಾನಕ್ಕೆ ಹೋಗಿ ಅಸಹ್ಯ ವಸ್ತುಗಳನ್ನು ಹಾಕಿದ ಪರಿಣಾಮ ಈ ಪರಿಸ್ಥಿತಿಯಾಗಿದೆ. ನಾನು ಅನುಭವಿಸಿದ ಕಷ್ಟ ಸಾಕು, ನಿಮಗೆ ಈ ರೀತಿ ತೊಂದರೆಯಾಗುವುದು ಬೇಡ, ನೀವು ದೈವಸ್ಥಾನಕ್ಕೆ ಹೋಗಿ ಹರಕೆ ಹಾಕಿ ಕ್ಷಮಾಪಣೆ ಕೇಳಿ' ಎಂದು ಹೇಳಿದ್ದಾನೆ. ಇದಾದ ಕೆಲ ದಿನ ನಂತರ ರೋಗ ಉಲ್ಬಣಗೊಂಡು ರಕ್ತ ವಾಂತಿಯಿಂದ ಮೃತಪಟ್ಟಿದ್ದ. ಚಾಮುಂಡಿ ಕ್ಷೇತ್ರದಲ್ಲಿ ಪ್ರಶ್ನೆ! ನವಾಝ್ ಮೃತಪಟ್ಟ ಬಳಿಕ ತೌಫಿಕ್ ಮತ್ತು ರಹೀಂಗೆ ಆತಂಕ ಶುರುವಾಗಿದ್ದು, ತೌಫಿಕ್ ಆರೋಗ್ಯದಲ್ಲೂ ಏರುಪೇರಾಗಿದೆ. ಇದರಿಂದ ಆತಂಕಿತರಾಗಿ ತೊಕ್ಕೊಟ್ಟು ಚಾಮುಂಡಿ ಕ್ಷೇತ್ರಕ್ಕೆ ಹೋಗಿ ಪ್ರಶ್ನೆ ಕೇಳಿದ್ದಾರೆ. ಆಗ ದೈವವು 'ನೀವು ದೈವಸ್ಥಾನಗಳಲ್ಲಿ ತಪ್ಪು ಮಾಡಿದ್ದೀರಿ, ನಿಮ್ಮ ಆರೋಗ್ಯ ಸುಧಾರಣೆಯಾಗಬೇಕಾದರೆ ಎಮ್ಮೆಕೆರೆ ದೈವಸ್ಥಾನಕ್ಕೆ ಹೋಗಿ ಹರಕೆ ತೀರಿಸಬೇಕು' ಎಂದು ನುಡಿ ಕೊಡುತ್ತದೆ. ಅದರಂತೆ ಆರೋಪಿಗಳು ಎಮ್ಮೆಕೆರೆ ದೈವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದಾರೆ. ಹರಕೆ ಸ್ವೀಕರಿಸಲು ನಿರಾಕರಣೆ! ಆರೋಪಿಗಳು 1 ಸಾವಿರ ರೂ. ಮತ್ತು ಒಂದು ತೆಂಗಿನಕಾಯಿಯನ್ನು ಹಿಡಿದುಕೊಂಡು ಎಮ್ಮೆಕೆರೆ ಕೋರ್ದಬ್ಬು, ಕೊರಗಜ್ಜ ಕ್ಷೇತ್ರಕ್ಕೆ ಬಂದಿದ್ದಾರೆ. ಆದರೆ ಆಡಳಿತ ಮಂಡಳಿ 'ಹರಕೆ ನೀಡಲು ಕಾರಣವೇನು ತಿಳಿಸಿ, ಹಾಗಾದರೆ ಮಾತ್ರ ಇದನ್ನು ಸ್ವೀಕರಿಸಲು ಸಾಧ್ಯ' ಎಂದು ತಾಕೀತು ಮಾಡಿದ್ದಾರೆ. ತಮ್ಮ ಜೀವದ ಬಗ್ಗೆ ಭಯಪಟ್ಟ ಆರೋಪಿಗಳಾದ ತೌಫಿಕ್ ಹಾಗೂ ರಹೀಂ ಮಂಗಳೂರು ನಗರ ವ್ಯಾಪ್ತಿಯಲ್ಲಿ 9 ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಅಪವಿತ್ರಗೊಳಿಸಿದ ವಿಷಯ ತಿಳಿಸುತ್ತಾರೆ. ಈ ಸಂದರ್ಭ ಆಡಳಿತ ಮಂಡಳಿ 'ಈ ಅಪರಾಧಕ್ಕೆ ನಿಮಗೆ ಈ ಪ್ರಾಯಶ್ಚಿತ್ತ ನೀಡಲು ಸಾಧ್ಯವಿಲ್ಲ. ಮಾ.31ರಂದು ಕೊರಗಜ್ಜ ಕೋಲವಿದ್ದು, ಆ ಸಂದರ್ಭ ದೈವದ ಅಪ್ಪಣೆ ಪಡೆದು ನಿಮಗೆ ಪ್ರಸಾದ ನೀಡುತ್ತೇವೆ' ಎಂದು ಹೇಳಿದ್ದರು. ಅದರಂತೆ ಮಾ.31ರಂದು ರಾತ್ರಿ ಹರಕೆ ತೀರಿಸಲು ಆರೋಪಿಗಳು ಎಮ್ಮೆಕೆರೆ ದೈವಸ್ಥಾನಕ್ಕೆ ಬಂದಿದ್ದರು. ಈ ಸಂದರ್ಭ ವಿಷಯ ತಿಳಿದ ಪೊಲೀಸರು ಕೊರಗಜ್ಜನ ಕೋಲದ ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಂದೇ ತಂಡದಿಂದ ಹಲವೆಡೆ ಕೃತ್ಯ: ಕಮಿಷನರ್ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಹಲವೆಡೆ ಅಪವಿತ್ರಗೊಳಿಸಿದ ತಂಡಗಳಲ್ಲಿನವಾಝ್ ನೇತೃತ್ವದ ತಂಡ ಭಾಗಿಯಾಗಿರುವುದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಪ್ರಮುಖ ಆರೋಪಿ ನವಾಝ್ ತಿಂಗಳ ಹಿಂದೆ ಮೃತಪಟ್ಟಿದ್ದು, ಉಳಿದಿಬ್ಬರನ್ನು ಬುಧವಾರ ಎಮ್ಮೆಕೆರೆ ಬಳಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಧಾರ್ಮಿಕ ಭಾವನೆಗಳ ಜತೆ ಚೆಲ್ಲಾಟವಾಡುವುದು ಸರಿಯಲ್ಲ ಎಂದರು.ಬಂಧಿತ ಆರೋಪಿಗಳ ಆರೋಗ್ಯ ಪರೀಕ್ಷೆ ನಡೆಸಲಾಗುವುದು. ಒಂದು ವೇಳೆ ವೈದ್ಯರ ಸಲಹೆ ಮೇರೆಗೆ ಅವರಿಗೆ ಚಿಕಿತ್ಸೆ ಅಗತ್ಯವಾದರೆ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು. ಹಿಂದೆಯೂ ಕಳವಾಗಿತ್ತು ಎಮ್ಮೆಕೆರೆ ಕೋರ್ದಬ್ಬು ದೈವಸ್ಥಾನಲ್ಲಿ1992ರಲ್ಲಿಉತ್ಸವ ಸಂದರ್ಭ ಪಂಚ ದೀವಟಿಗೆ ಕಳವಾಗಿತ್ತು. ಈ ಸಂದರ್ಭವೂ ಊರವರು ಸೇರಿ ಆರೋಪಿಗಳ ಪತ್ತೆಗೆ ಪ್ರಾರ್ಥನೆ ಸಲ್ಲಿಸಿದ್ದು, ಕಳವಾದ ನಾಲ್ಕು ದಿನದ ಬಳಿಕ ಬೇರೊಂದು ಪ್ರಕರಣದಲ್ಲಿಉಡುಪಿಯಲ್ಲಿಆರೋಪಿಗಳು ಬಂಧನವಾಗಿದ್ದರು. ಬಳಿಕ ಪಂಚ ದೀವಟಿಗೆಯನ್ನು ಆರೋಪಿಗಳು ಮರಳಿಸಿದ್ದರು. ಅಪವಿತ್ರಗೊಳಿಸುವ ಹಿಂದಿನ ಕಾರಣ? ನವಾಝ್ ದುಬೈಯಲ್ಲಿದ್ದು, ವರ್ಷದ ಹಿಂದೆ ಊರಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗಜ್ಜನ ಕ್ಷೇತ್ರ ಮತ್ತು ಮಹಿಮೆ ಹೆಚ್ಚು ಪ್ರಚಾರದಲ್ಲಿದೆ. ನವಾಜ್ಗೆ ಕೂಡ 'ನನಗೆ ಮಂತ್ರ-ತಂತ್ರಗಾರಿಕೆ ಗೊತ್ತಿದೆ. ನನ್ನ ಮಂತ್ರಗಾರಿಕೆ ಮುಂದೆ ಕೊರಗಜ್ಜನ ಶಕ್ತಿ ಏನೂ ಅಲ್ಲ, ನಾವು ದೈವಸ್ಥಾನ ಅಪವಿತ್ರಗೊಳಿಸೋಣ, ಕೊರಗಜ್ಜ ತಾಕತ್ತು ಏನು ನೋಡೋಣ' ಎಂದು ತೌಫಿಕ್, ರಹೀಂ ಬಳಿ ಹೇಳಿದ್ದ. ಅದರಂತೆ ನವಾಝ್ ಇವರ ಜತೆ ಸೇರಿ 9 ದೈವಸ್ಥಾನಗಳಲ್ಲಿಅಪವಿತ್ರಗೊಳಿಸಿದ್ದಾನೆಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.
from India & World News in Kannada | VK Polls https://ift.tt/3fzbbOx