Government Site: ಸರ್ಕಾರ ದುರ್ಬಲರಿಗೆ ನಿವೇಶನ ಹಂಚಿಕೆ ಮಾಡದ ಕಾರಣ ಬಡವರು ಸಮಸ್ಯೆಗೆ ಸಿಲುಕಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ 2005-06ನೇ ವಾರ್ಷಿಕ ಸಾಲಿನಲ್ಲಿ 5,150 ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಲಾಗಿದೆ. 2017-18ನೇ ವಾರ್ಷಿಕ ಸಾಲಿನಲ್ಲಿ 5,865 ಕುಟುಂಬಗಳನ್ನು ಗುರುತಿಸಲಾಗಿದೆ. ಈವರೆಗೂ ಗುರುತಿಸಲಾದ ಅರ್ಹ ಕುಟುಂಬಗಳಿಗೆ ನಿವೇಶನ ಹಂಚಿಕೆ ಆಗಿಲ್ಲ. ತಾಲೂಕು ವ್ಯಾಪ್ತಿ ಕಂದಾಯ ಇಲಾಖೆಗೆ ಸೇರಿದ 75,500 ಎಕರೆ 26 ಗುಂಟೆ ಸರಕಾರಿ ಪ್ರದೇಶ ಇದ್ದರೂ ನಿವೇಶನ ಹಂಚಿಕೆಗೆ ಜಾಗ ಗುರುತಿಸಿಲ್ಲ.
from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/2DNrxVi